ಸ್ನೇಹರ್ಷಿ ನಗು: ಮೊದಲ ಹೆಜ್ಜೆಗೆ ಮಿಲಿಯನ್ ಹಿಟ್ಸ್
Team Udayavani, Sep 24, 2021, 4:05 PM IST
ಯುವ ಪ್ರತಿಭೆ ಕಿರಣ್ ನಾರಾಯಣ್ ನಟಿಸಿ, ನಿರ್ಮಿಸಿ, ನಿರ್ದೇಶಿಸುರುವ ಚೊಚ್ಚಲ ಸಿನಿಮಾ “ಸ್ನೇಹರ್ಷಿ’ ತೆರೆಗೆ ಬರುವ ತಯಾರಿಯಲ್ಲಿದೆ. ಸದ್ಯ ಚಿತ್ರದ ಪ್ರಮೋಶನ್ಸ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರದಲ್ಲಿ ಬರುವ “ಮೊದಲ ಹೆಜ್ಜೆಗೆ…’ ಎಂಬ ಹೀರೋ ಇಂಟ್ರೊಡಕ್ಷನ್ ಸಾಂಗ್ ಒಂದು ಮಿಲಿಯನ್ ಪ್ಲಸ್ ಹಿಟ್ಸ್ ದಾಖಲಾದ ಬೆನ್ನಲ್ಲೆ, ಚಿತ್ರತಂಡ “ಅರಿವಿಲ್ಲದೆ ಶುರುವಾದಂತಿದೆ…’ ಎಂಬ ಮತ್ತೂಂದು ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಿತ್ತು. ಈಗ ಆ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ ಹಾಡು ಕೂಡ ಒಂದು ಮಿಲಿಯನ್ಗೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.
ಇನ್ನು ಈ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಕಿರಣ್ ನಾರಾಯಣ್, “ಸಿನಿಮಾದಲ್ಲಿರುವ ಎಲ್ಲ ಹಾಡುಗಳು ಕೂಡ ಕಥೆಗೆ ಪೂರಕವಾಗುವಂತಿವೆ. ಕುದುರೆಮುಖ, ಮಂಗಳೂರು ಸುತ್ತಮುತ್ತ ಹಾಡುಗಳ ಶೂಟಿಂಗ್ ಮಾಡಲಾಗಿದೆ. ನಮ್ಮ ಹಾಡುಗಳಿಗೆ ಡಿಫರೆಂಟ್ ಲೊಕೇಶನ್ಸ್ ಬೇಕಾಗಿತ್ತು. ಅಂಥ ಲೊಕೇಶನ್ಸ್ ಹುಡುಕಿ ಹಾಡನ್ನು ಶೂಟಿಂಗ್ ಮಾಡಿದ್ದೇವೆ. ಸ್ಕ್ರೀನ್ ಮೇಲೆ ನೋಡಿದಾಗ ಫಾರಿನ್ ಲೊಕೇಶನ್ಸ್ನಂತೆ ಕಾಣುತ್ತದೆ. ಪ್ರತಿ ಹಾಡು ಕೂಡ ಕೇಳಲು ಎಷ್ಟು ಸುಮಧುರವಾಗಿರುತ್ತದೆಯೋ, ನೋಡಲೂ ಅಷ್ಟೇ ಸುಂದರವಾಗಿರುವಂತೆ ಚಿತ್ರೀಕರಿಸಲಾಗಿದೆ’ ಎನ್ನುತ್ತಾರೆ.
ಇದನ್ನೂ ಓದಿ:ಆರ್ ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?
ಆಕಾಶ್ ಅಯ್ಯಪ್ಪ ಸಿನಿಮಾಕ್ಕೆ ಸಂಗೀತ ನೀಡಿರುವ “ಸ್ನೇಹರ್ಷಿ’ ಈ ಹಾಡಿಗೆ ಸುಪ್ರಿಯಾ ರಾಮ್ ಮೊದಲಾದವರು ದನಿಯಾಗಿದ್ದಾರೆ. “ಸ್ನೇಹರ್ಷಿ’ ಚಿತ್ರಕ್ಕೆ ಪ್ರತಿಭಾ ಕಥೆ ಒದಗಿಸಿದ್ದು, ಲವ್, ಕಾಮಿಡಿ, ಆ್ಯಕ್ಷನ್ ಜೊತೆಗೆ ಸಾಮಾಜಿಕ ಕಾಳಜಿಯ ಅನೇಕ ಅಂಶಗಳಿವೆ. ಈಗಿನ ಟ್ರೆಂಡ್ಗೆ ತಕ್ಕಂತೆ ಸಿನಿಮಾವನ್ನು ತೆರೆಮೇಲೆ ತರಲಾಗಿದೆ ಅನ್ನೋದು ಚಿತ್ರತಂಡದ ಮಾತು.
ಚಿತ್ರದಲ್ಲಿ ಕಿರಣ್ ನಾರಾಯಣ್ ಅವರೊಂದಿಗೆ ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ