“ರಂಗಸಮುದ್ರ’ ಫಸ್ಟ್ಲುಕ್ಗೆ ಸುದೀಪ್ ಚಾಲನೆ
Team Udayavani, Feb 6, 2020, 7:00 AM IST
ನಟ ಸುದೀಪ್ ಅವರು ಹೊಸಬರ ಚಿತ್ರಗಳನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಆ ಸಾಲಿಗೆ ಈಗ “ರಂಗಸಮುದ್ರ’ ಚಿತ್ರವೂ ಸೇರಿದೆ. ಹೌದು, ಇತ್ತೀಚೆಗೆ ಸುದೀಪ್ ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಹೊಯ್ಸಳ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಹೊಯ್ಸಳ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಕುಮಾರ್ ಅಸ್ಕಿ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ರಂಗಾಯಣ ರಘು, ತೆಲುಗು ನಟ ಸಂಪತ್ಕುಮಾರ್, ಕಾರ್ತಿಕ್ ರಾವ್, ದಿವ್ಯಾ ಗೌಡ, ಮಹೇಂದ್ರ, ಸ್ಕಂದ, ಮೋಹನ್ ಜುನೇಜಾ, ಮೂರು ಸುರೇಶ್, ಗುರುರಾಜ ಹೊಸಕೋಟೆ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇದೊಂದು ರೆಟ್ರೋ ಶೈಲಿಯ ಸಿನಿಮಾ ಆಗಿದ್ದು, ಚಿತ್ರದ ಫಸ್ಟ್ಲುಕ್ನಲ್ಲಿ ಕೇವಲ ಒಂದು ಕಹಳೆಯನ್ನು ಎತ್ತಿಹಿಡಿದಿರುವ ಚಿತ್ರ ಗಮಸುದೀಪ್ನಸೆಳೆಯುತ್ತಿದೆ. ಸದ್ಯಕ್ಕೆ ಯಾವುದೇ ಮಾಹಿತಿ ಬಿಟ್ಟುಕೊಡದ ಚಿತ್ರತಂಡ, ಈಗಾಗಲೇ ಶೇ.80 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ಚಿತ್ರಕ್ಕೆ ನಿತಿನ್ ಪಟೇಲ್ ಕಾರ್ಯಕಾರಿ ನಿರ್ಮಾಪಕರು. ದೇಸಾಹಿ ಮೋಹನ್ ಸಂಗೀತವಿದೆ. ವಾಗೀಶ್ ಚನ್ನಗಿರಿ ಸಾಹಿತ್ಯ ವಿದೆ. ಗಿರಿ ಛಾಯಾಗ್ರಹಣವಿದೆ. ಉದಯ್ ಜಗಳೂರು ಸಂಕಲನ ಮಾಡಿ ದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ತೆಲುಗು ನಟ ಸಂಪತ್ ಕುಮಾರ್, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ, ಮೋಹನ್ ಜುನೇಜಾ, ಮೂಗು ಸುರೇಶ್, ಗುರು ರಾಜ ಹೊಸಕೋಟೆ ಇತರರು ನಟಿಸಿದ್ದಾರೆ.