ದಬಾಂಗ್‌-3 ಸೆಟ್‌ನಲ್ಲಿ ಸುದೀಪ್‌ ಥ್ರಿಲ್‌

ಸಲ್ಲು ಆತಿಥ್ಯಕ್ಕೆ ಕಿಚ್ಚ ಫಿದಾ

Team Udayavani, May 6, 2019, 3:00 AM IST

sudeep-sallu

ಸುದೀಪ್‌ ಅವರಿಗೆ ಬಾಲಿವುಡ್‌ ಹೊಸದೇನಲ್ಲ. ಈಗಾಗಲೇ ಅವರು “ಫ‌ೂಂಕ್‌’,”ರಣ್‌’, “ರಕ್ತ ಚರಿತ್ರ’ ಚಿತ್ರಗಳ ಮೂಲಕ ಬ್ಯಾಟಿಂಗ್‌ ಆಡಿದ್ದಾಗಿದೆ. ಈ ನಡುವೆ ಅವರು ಸಲ್ಮಾನ್‌ಖಾನ್‌ ಅಭಿನಯದ ಪ್ರಭುದೇವ ನಿರ್ದೇಶನದ “ದಬಾಂಗ್‌ -3′ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು.

ಈಗ ಸುದೀಪ್‌ ಆ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಹೌದು, ಸುದೀಪ್‌ ಅವರು “ದಬಾಂಗ್‌ 3′ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಯಾವಾಗ ಹೊರಬಿತ್ತೋ, ಅವರು ಯಾವಾಗ ಆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳು ಸೇರಿದಂತೆ ಕನ್ನಡದ ಬಹುತೇಕರಲ್ಲಿತ್ತು.

ಆ ಎಲ್ಲಾ ಕುತೂಹಲಕ್ಕೆ ಸುದೀಪ್‌ ಅವರು ಟ್ವೀಟ್‌ ಮಾಡುವ ಮೂಲಕ ತೆರೆ ಎಳೆದಿದ್ದಾರೆ. ಶನಿವಾರ “ದಬಾಂಗ್‌ 3′ ಚಿತ್ರತಂಡವನ್ನು ಸೇರಿಕೊಂಡ ಸುದೀಪ್‌, ಬಾಲಿವುಡ್‌ ನಟ ಸಲ್ಮಾನ್‌ಖಾನ್‌ ಜೊತೆ ಕೆಲಸ ಮಾಡಿದ ಅನುಭವವನ್ನು ಟ್ವೀಟ್‌ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆ, ಸುದೀ ಪ್‌ ಬರೆದುಕೊಂಡ ಸಾಲುಗಳು ಹೀಗಿವೆ.

“ಮುಂಬೈನ ಹೀಟ್‌ ಜೋರಾಗಿತ್ತು. ಆದರೂ, ಆ ಹಿಟ್‌ಗೆ ಸೆಟ್‌ನಲ್ಲಿದ್ದ ಎನರ್ಜಿಯನ್ನು ಮಾತ್ರ ಅದು ಮೀರಿಸಲು ಆಗಲಿಲ್ಲ. ಇದೊಂದು ಥ್ರಿಲ್ಲಿಂಗ್‌ ದಿನವಾಗಿತ್ತು. ಅದ್ಭುತ ಯೂನಿಟ್‌, ಅತ್ಯದ್ಭುತ ಜನ, ಬೃಹತ್‌ ಆಗಿರುವ ಜಿಮ್‌ ಸೆಟಪ್‌ ಅದಕ್ಕೆ ಬೋನಸ್‌.

ಖುಷಿಯೊಂದಿಗೆ ಮೊದಲ ದಿನದ “ದಬಾಂಗ್‌ 3′ ಚಿತ್ರದ ಚಿತ್ರೀಕರಣ ಮುಗಿದಿದೆ’ ಎಂದು ಸುದೀಪ್‌ ಬರೆದುಕೊಂಡಿದ್ದಾರೆ. ಇನ್ನು, ಸಲ್ಮಾನ್‌ಖಾನ್‌ ಅವರ ಬಗ್ಗೆಯೂ ಹೇಳಿಕೊಂಡಿರುವ ಸುದೀಪ್‌, “ಮನೆಯಲ್ಲೇ ಫೀಲ್‌ ನೀಡಿದ್ದಕ್ಕೆ ಥ್ಯಾಂಕ್ಯು’ ಎಂದು ಸಲ್ಮಾನ್‌ಖಾನ್‌ ಎಂದು ಹೇಳಿದ್ದಾರೆ.

ಈಗಾಗಲೇ “ದಬಾಂಗ್‌ 3′ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಈಗ ಎರಡನೇ ಹಂತದ ಚಿತ್ರೀಕರಣ ಶುರುವಾಗಿದೆ. ಈ ಹಂತದ ಚಿತ್ರೀಕರಣದಲ್ಲಿ ಸುದೀಪ್‌ ಅವರು ಪಾಲ್ಗೊಂಡಿದ್ದು, ಸಲ್ಮಾನ್‌ಖಾನ್‌ ಎದುರು ಕಾಣಿಸಿಕೊಂಡಿದ್ದಾರೆ.

ಸುದೀಪ್‌ ಇಲ್ಲಿ ಸಿಖಂದರ್‌ ಭಾರಧ್ವಜ್‌ ಎಂಬ ಪಾತ್ರದಲ್ಲಿ ನಟಿಸಿದರೆ, ಚುಲ್‌ಬುಲ್‌ ಪಾಂಡೆ ಹೆಸರಿನ ಪಾತ್ರದಲ್ಲಿ ಸಲ್ಮಾನ್‌ ಪುನಃ ಮಿಂಚಲಿದ್ದಾರೆ. ನಿರ್ದೇಶಕ ಪ್ರಭುದೇವ ಅವರು ಈ ಚಿತ್ರದ ಸ್ಕ್ರಿಪ್ಟ್ ಬರೆಯುವಾಗಲೇ ಸುದೀಪ್‌ ಅವರನ್ನು ಆ ಪಾತ್ರಕ್ಕೆ ಸೂಚಿಸಿದ್ದ ಬಗ್ಗೆ ಹಿಂದೆಯೇ ಹೇಳಿಕೊಂಡಿದ್ದರು.

ಇಷ್ಟು ದಿನ ಕಾದಿದ್ದ ಸುದೀಪ್‌ ಅಭಿಮಾನಿಗಳಿಗೆ ಈಗ ಖುಷಿಯಂತೂ ಹೆಚ್ಚಿದೆ. ಅಂದಹಾಗೆ, ಸುದೀಪ್‌ “ಪೈಲ್ವಾನ’ ಚಿತ್ರದ ಚಿತ್ರೀಕರಣ ಮುಗಿಸಿ, “ಕೋಟಿಗೊಬ್ಬ 3′ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಸ್ವಲ್ಪ ದಿನಗಳ ಚಿತ್ರೀಕರಣ ನಡೆದರೆ “ಕೋಟಿಗೊಬ್ಬ 3′ ಚಿತ್ರ ಪೂರ್ಣಗೊಳ್ಳಲಿದೆ. ಅದರ ನಡುವೆಯೇ ಸುದೀಪ್‌ ಬಾಲಿವುಡ್‌ಗೆ ಜಿಗಿದಿದ್ದಾರೆ.

ಅಂತೂ ಸುದೀಪ್‌ ಅವರು ಸಲ್ಮಾನ್‌ಖಾನ್‌ ಅವರ ಜೊತೆ ಮೊದಲ ಸಲ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ಹೇಗೆ ಮೋಡಿ ಮಾಡುತ್ತಾರೆ ಎಂಬುದು ಅವರ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆ ಚಿತ್ರರಂಗಕ್ಕು ಕುತೂಹಲವಿದೆ. ಅತ್ತ, ಸುದೀಪ್‌ ಅವರು ತೆಲುಗಿನ “ಸೈರ ನರಸಿಂಹ ರೆಡ್ಡಿ’ ಚಿತ್ರದಲ್ಲೂ ನಟಿಸಿದ್ದು, ಆ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.