ಮತ್ತೆ ಬಂದ “ಸುನೀಲ್‌ರಾವ್‌’

ತುರ್ತುನಿರ್ಗಮನ ಮೂಲಕ ಸೆಕೆಂಡ್‌ ಇನ್ನಿಂಗ್ಸ್‌ ಶುರು

Team Udayavani, Feb 26, 2020, 7:04 AM IST

Sunil-rao

ಎಕ್ಸ್‌ಕ್ಯೂಸ್‌ಮಿ’ ಖ್ಯಾತಿಯ ಸುನೀಲ್‌ರಾವ್‌ ಮತ್ತೆ ಬಂದಿದ್ದಾರೆ. ಹೌದು, ಬಹಳ ವರ್ಷಗಳ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ, ಸುನೀಲ್‌ರಾವ್‌ ಈಗ ತಮ್ಮ ಎರಡನೇ ಇನ್ನಿಂಗ್ಸ್‌ ಶುರುಮಾಡಿದ್ದಾರೆ. ಅಂದಹಾಗೆ, ಅವರು ತಮ್ಮ ಮತ್ತೊಂದು ಹೊಸ ಇನ್ನಿಂಗ್ಸ್‌ ಶುರು ಮಾಡಿರೋದು, “ತುರ್ತುನಿರ್ಗಮನ’ ಚಿತ್ರದ ಮೂಲಕ. ಹೌದು, ಸುನೀಲ್‌ ರಾವ್‌ ಹೇಳುವಂತೆ, “ತುರ್ತುನಿರ್ಗಮನ’ ಮೂಲಕ ಎರಡನೇ ಇನ್ನಿಂಗ್ಸ್‌ ಶುರುಮಾಡಿದ್ದಾರೆ.

ಆ ಕುರಿತು ಸುನೀಲ್‌ರಾವ್‌ ಹೇಳುವುದಿಷ್ಟು. “ನಾನು ಬಹಳ ವರ್ಷಗಳ ಬಳಿಕ ಸಿನಿಮಾಗೆ ಮರಳಿದ್ದೇನೆ. ನನಗೂ ಸಿನಿಮಾ ಮಾಡಬೇಕು ಎಂಬ ಆಸೆಯೇನೋ ಇತ್ತು. ಆದರೆ, ಒಳ್ಳೆಯ ಕಥೆಗಳು ಬರಲಿಲ್ಲ. ಬಂದರೂ, ನನಗೆ ಸರಿಹೊಂದುವ ಕಥೆ, ಪಾತ್ರ ಇರಲಿಲ್ಲ. ಹಾಗಾಗಿ ಸುಮ್ಮನಿದ್ದೆ. “ತುರ್ತುನಿರ್ಗಮನ’ ಕಥೆ ಕೇಳಿದಾಗ, ಥ್ರಿಲ್‌ ಎನಿಸಿತು. ಪಾತ್ರದಲ್ಲೂ ವಿಶೇಷತೆ ಇತ್ತು. ಇದೊಂದು ಫ್ಯಾಂಟಸಿ ಡ್ರಾಮ ಆಗಿದ್ದರಿಂದ ಇಷ್ಟವಾಗಿ ಒಪ್ಪಿಕೊಂಡೆ.

ಈ ಚಿತ್ರಕ್ಕೆ ನಾನು ನಾಲ್ಕು ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಕಥೆ, ಪಾತ್ರ ಕೇಳಿದಾಗಲೇ, ವಿಭಿನ್ನವಾದಂತಹ ಬಣ್ಣ ತುಂಬಬಹುದು ಎಂದುಕೊಂಡು ಮಾಡಿದೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿದೆ. ತುಂಬ ಗ್ಯಾಪ್‌ ಬಳಿಕ ಈ ಚಿತ್ರ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ’ ಎಂಬುದು ಅವರ ಮಾತು. ಅಷ್ಟಕ್ಕೂ ಸುನೀಲ್‌ರಾವ್‌, ಈ ಗ್ಯಾಪ್‌ನಲ್ಲಿ ಏನು ಮಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರಿಸುವ ಅವರು, “ಸಿನಿಮಾ ಮಾಡಿ ವರ್ಷಗಳೇ ಕಳೆದಿವೆ.

ಆದರೆ, ಎರಡು ವರ್ಷಗಳ ಹಿಂದೆ ನಾನೊಂದು ವೆಬ್‌ಸೀರಿಸ್‌ ಮಾಡಿದೆ. “ಲೂಸ್‌ ಕನೆಕ್ಷನ್‌’ ಎಂಬ ವೆಬ್‌ಸೀರಿಸ್‌ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿತು. ಮೊದಲ ಬಾರಿಗೆ ಕನ್ನಡದಲ್ಲಿ ಫ‌ೂರ್ಣಪ್ರಮಾಣದ ವೆಬ್‌ಸೀರಿಸ್‌ ಮಾಡಿದ ಖುಷಿ ನನ್ನದಾಯ್ತು. ಆ ನಂತರ ಕಥೆಗಳು ಬಂದರೂ, ಇಷ್ಟವಾಗಲಿಲ್ಲ. ಸಂಗೀತ ಹಾಗು ಹಾಡುವ ಕಡೆಗೆ ಗಮನಹರಿಸಿದೆ. ಈ ನಡುವೆ ಗಜ್ಹಲ್‌ ಕಲಿತೆ. ಗಜ್ಹಲ್‌ ಕಾರ್ಯಕ್ರಮವನ್ನೂ ಕೊಟ್ಟೆ. ಹಲವು ಕಾರ್ಪೋರೆಟ್‌ ಕಂಪೆನಿಗಳಿಗೆ ಮ್ಯೂಸಿಕ್‌ ಶೋ ಮಾಡಿದೆ.

ಗೆಳೆಯರ ಜೊತೆಯಲ್ಲೂ ನಾನು ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡೆ. ಯಾವಾಗ, ನಾನು 2017 ರಲ್ಲಿ “ಲೂಸ್‌ ಕನೆಕ್ಷನ್‌’ ವೆಬ್‌ಸೀರಿಸ್‌ನಲ್ಲಿ ನಟಿಸಿದೆನೋ, ಅಲ್ಲಿಂದ ಪುನಃ ನಟಿಸುವ ಆಸೆ ಹೆಚ್ಚಾಯ್ತು. ಒಳ್ಳೆಯ ಕಥೆ ಬಂದರೆ, ಬಿಡುವುದು ಬೇಡ ಎಂಬ ನಿರ್ಧಾರ ಮಾಡಿದೆ. ಅಲ್ಲಿಂದ ನಟನೆಯಲ್ಲಿ ಸಕ್ರಿಯವಾಗಬೇಕು ಅಂದುಕೊಂಡು, ಈಗ “ತುರ್ತುನಿರ್ಗಮನ’ ಮಾಡಿದ್ದೇನೆ. ಹಾಗೆ ಹೇಳುವುದಾದರೆ, ಇದು ಸೆಕೆಂಡ್‌ ಇನ್ನಿಂಗ್ಸ್‌. ಇನ್ಮುಂದೆ ನಾಟೌಟ್‌ ಆಗಬಾರದು ಅಂದುಕೊಂಡಿದ್ದೇನೆ’ ಎನ್ನುತ್ತಾರೆ ಸುನೀಲ್‌ರಾವ್‌.

ಅಂದಹಾಗೆ, ತಮ್ಮ ಪಾತ್ರ ಕುರಿತು ಹೇಳುವ ಸುನೀಲ್‌ರಾವ್‌, “ಇಲ್ಲೊಂದು ಸ್ಪೆಷಲ್‌ ಎಲಿಮೆಂಟ್ಸ್‌ ಇದೆ. ಎಲ್ಲರ ಲೈಫ‌ಲ್ಲೂ ಬರುವಂತಹ ಘಟನೆಗಳು ಇಲ್ಲಿರುವ ಹೀರೋ ಬದುಕಲ್ಲೂ ಬರುತ್ತೆ. ಅದೊಂದು ರೀತಿ ಸೋಂಬೇರಿಯಾಗಿರುವ ಪಾತ್ರ. ಸದಾ ಕ್ರಿಕೆಟ್‌ ಆಡಿಕೊಂಡು, ಲೇಟ್‌ ಆಗಿ ಎದ್ದು, ಅತ್ತಿತ್ತ ಸುತ್ತಾಡುವ ಪಾತ್ರ. ಒಂದು ಘಟನೆ ಸಂಭವಿಸಿದಾಗ, ಅವನು ಹೇಗೆಲ್ಲಾ ರಿಯಾಕ್ಟ್ ಮಾಡ್ತಾನೆ ಎಂಬುದೇ ಕಥೆ. ಎಲ್ಲವನ್ನೂ ಈಗಲೇ ಹೇಳಿದರೆ ಮಜ ಇರಲ್ಲ. ಸಿನಿಮಾ ನೋಡಿ’ ಎಂದಷ್ಟೇ ಹೇಳುತ್ತಾರೆ ಅವರು.

ಟಾಪ್ ನ್ಯೂಸ್

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.