ಒಳ್ಳೆಯ ಕಥೆ ಇರುವ ಸಿನಿಮಾ ಯಾವತ್ತಿಗೂ ಪ್ಯಾನ್ ಇಂಡಿಯಾ ಆಗಿರುತ್ತವೆ: ಉಪೇಂದ್ರ
ಉಪ್ಪಿ ಕಣ್ಣಲ್ಲಿ ಕಬ್ಜ ಕನಸು
Team Udayavani, Jan 19, 2020, 7:04 AM IST
ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸದ್ದು ಜೋರಾಗಿದೆ. ಅದರಲ್ಲೂ ಸ್ಟಾರ್ಗಳ ಸಿನಿಮಾ ಮಾಡುವವರು ಪ್ಯಾನ್ ಇಂಡಿಯಾ ಯೋಚನೆಯೊಂದಿಗೆ ಮಾಡುತ್ತಾರೆ. ಕೇವಲ ಕನ್ನಡವೊಂದಕ್ಕೇ ಸೀಮಿತವಾಗದೇ ತಮ್ಮ ಕಂಟೆಂಟ್ ಅನ್ನು ಪರಭಾಷೆಗಳಿಗೂ ಕೊಂಡೊಯ್ಯುವ, ಅಲ್ಲಿನ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಉಪೇಂದ್ರ ಅವರ “ಕಬ್ಜ’ ಕೂಡಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಹೊರಟಿದೆ.
ಹಾಗಾದರೆ ಉಪೇಂದ್ರ ಪ್ರಕಾರ ಪ್ಯಾನ್ ಇಂಡಿಯಾ ಸಿನಿಮಾ ಎಂದರೇನು? ಉಪ್ಪಿ ಇದನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಾರೆ. “ಒಳ್ಳೆಯ ಕಥೆ, ಮೇಕಿಂಗ್ ಇರುವ ಸಿನಿಮಾಗಳು ಯಾವತ್ತಿಗೂ ಪ್ಯಾನ್ ಇಂಡಿಯಾ’ ಎನ್ನುವುದು ಉಪೇಂದ್ರ ಮಾತು. “ಇವತ್ತು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಿದ್ದೇನೆ. ಆದರೆ ಒಳ್ಳೆಯ ಕಥೆ, ನಿರೂಪಣೆ ಇರುವ ಸಿನಿಮಾಗಳು ಯಾವತ್ತಿಗೂ ಪ್ಯಾನ್ ಇಂಡಿಯಾನೇ.
ಅಣ್ಣಾವ್ರ ಸಿನಿಮಾದಿಂದ ಹಿಡಿದು ಸಾಕಷ್ಟು ನಟರ ಸಿನಿಮಾಗಳನ್ನು ಎಲ್ಲಾ ಭಾಷೆಯ ಜನ ಆಗಲೇ ನೋಡಿ ಮೆಚ್ಚಿದ್ದಾರೆ. ಕಲೆಗೆ ಭಾಷೆಯ ಬೇಲಿ ಇಲ್ಲ. ಯಾವ ಸಿನಿಮಾಕ್ಕೆ ಮನರಂಜಿಸುವ, ಜನರನ್ನು ತನ್ನತ್ತ ಸೆಳೆಯುವ ಗುಣವಿದೆಯೋ ಆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗುತ್ತದೆ’ ಎನ್ನುತ್ತಾರೆ ಉಪೇಂದ್ರ. ಇನ್ನು, ಉಪೇಂದ್ರ ಅವರಿಗೆ “ಕಬ್ಜ’ ಹೊಸ ಅನುಭವವಂತೆ. “ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಂತೆ ಭಾಸವಾಗುತ್ತಿದೆ.
ನಿರ್ದೇಶಕ ಚಂದ್ರು ಆ ತರಹದ ಒಂದು ಸೆಟಪ್ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ಇಡೀ ತಂಡ ಒಂದೊಂದು ದೃಶ್ಯವನ್ನೂ ಎಂಜಾಯ್ ಮಾಡುತ್ತಿದೆ. ಈ ಹಿಂದೆ “ಓಂ’ ಮಾಡುವಾಗ ನಾವು ಇದೇ ರೀತಿ ಎಂಜಾಯ್ ಮಾಡಿ, ಶೂಟ್ ಮಾಡಿದ್ದೆವು. ಅದು ಮತ್ತೆ “ಕಬ್ಜ’ ಸೆಟ್ನಲ್ಲಿ ನೆನಪಿಗೆ ಬಂತು. ಕಥೆ, ಮೇಕಿಂಗ್, ಸೆಟ್ ಎಲ್ಲವೂ ವಿಭಿನ್ನವಾಗಿದೆ’ ಎನ್ನುವುದು ಉಪೇಂದ್ರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ