ನ.1ರಿಂದ ಸಲಗ ಯಶಸ್ಸು ಅಭಿಯಾನ
Team Udayavani, Oct 29, 2021, 5:38 PM IST
ಮೈಸೂರು: ರಾಜ್ಯಾದ್ಯಂತ ಸಲಗ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ನ.1ರ ರಾಜ್ಯೋತ್ಸವ ದಂದು ಮೈಸೂರಿನಿಂದಲೇ ಸಲಗ ಯಶಸ್ಸು ಅಭಿಯಾನ ಆರಂಭಿ ಸುವುದಾಗಿ ನಟ, ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಮೈಸೂರಿನ ಪ್ರತಿಭೆಗಳು ನಟಿಸಿದ್ದು, ಅವರೇ ಚಿತ್ರದ ಬೆನ್ನೆಲುಬು ಎಂದು ಹೇಳಿದರು. ನ.1 ರಾಜ್ಯೋತ್ಸವ ದಿನ ಮೈಸೂರಿನ ಸಲಗ ಚಿತ್ರ ಪ್ರದರ್ಶನವಿರುವ ಚಿತ್ರಮಂದಿರಗಳಲ್ಲಿ ಇಡೀ ಚಿತ್ರ ತಂಡ ಆಗಮಿಸಿ ಜನರನ್ನು ಭೇಟಿಯಾಗಲಿದೆ. ಸಲಗ ಪಾರ್ಟ್ -2 ಬಗ್ಗೆ ಸದ್ಯಕ್ಕೆ ಯೋಜನೆ ರೂಪಿ ಸಿಲ್ಲ ಮುಂದೆ ನೋಡೋಣ ಎಂದರು.
ಇದನ್ನೂ ಓದಿ;- ಗೋವಾ : ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರ್ಪಡೆಯಾದ ಲಿಯಾಂಡರ್ ಪೇಸ್
ಚಿತ್ರದಲ್ಲಿ ಬಾಲನಟರು ಮನೋಜ್ಞವಾಗಿ ಅಭಿನಯಿಸಿದ್ದು, ಬಾಲ ಕಲಾವಿದರನ್ನು ರಂಗಾಯಣ, ನಟನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ 18 ನಿಮಿಷ ಮಕ್ಕಳೇ ಬರುತ್ತಾರೆ ಎಂದು ತಿಳಿಸಿದರು. ಭೂಗತ ಲೋಕದ ಕುರಿತು ಚಿತ್ರವಿದ್ದು, ಮಕ್ಕಳ ಬದುಕು ಹಾಳಾಗಬಾರದು, ಅಂತೆಯೇ ಮಕ್ಕಳು ರೌಡಿಸಂ ಜೀವನಕ್ಕೆ ಪ್ರೇರಣೆ ಪಡೆಯಬಾರದೆಂಬ ದೃಷ್ಟಿಕೋನದಿಂದ ಚಿತ್ರವನ್ನು ಮಾಡಿದ್ದೇನೆ.
ಭೂಗತ ಲೋಕದ ಬಗ್ಗೆ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಎ ಪ್ರಮಾಣ ಪತ್ರ ದೊರೆತಿದೆ. ಭೂಗತ ಲೋಕದ ಚಿತ್ರ ಎಂಬ ಕಾರಣಕ್ಕಾಗಿ ಚಿತ್ರದಲ್ಲಿ ಅಶ್ಲೀಲ ಸಂಭಾಷಣೆ ಇದೆ. ಚಿತ್ರ ಮಕ್ಕಳು ಸುಳ್ಳು ಹೇಳಿ ಹೇಗೆ ದಾರಿ ತಪ್ಪುತ್ತಾರೆ ಎಂಬುದನ್ನು ಹೇಳುತ್ತದೆ ಎಂದರು. ಜೀವನದಲ್ಲಿ ತಂದೆ ತಾಯಿಯೇ ದೇವರು, ಕೊನೆಗಾಲದಲ್ಲಿ ಅವರು ಮಕ್ಕಳಂತರಾಗುತ್ತಾರೆ. ಅವರನ್ನು ಮಕ್ಕಳಂತೆ ಆರೈಕೆ ಮಾಡಬೇಕು ಎಂದು ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು