ವಿಲನ್ ಟೀಸರ್ ಬಂತು…
Team Udayavani, Jun 30, 2018, 11:30 AM IST
ಅಂತೂ ಇಂತೂ “ದಿ ವಿಲನ್’ ಟೀಸರ್ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಸುದೀಪ್ ಅವರ ಕುರಿತಾದ ಟೀಸರ್ ಬಿಡುಗಡೆ ಮಾಡಿದರೆ, ಸಚಿವ ಸಾ.ರಾ.ಮಹೇಶ್ ಅವರು ಶಿವರಾಜಕುಮಾರ್ ಅವರ ಟೀಸರ್ ಬಿಡುಗಡೆ
ಮಾಡಿದರು.
ಎರಡು ನಿಮಿಷದ ಅವಧಿಯಲ್ಲಿರುವ ಟೀಸರ್ ನೋಡಿದ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, “ಕನ್ನಡ ಚಿತ್ರರಂಗದಲ್ಲಿ “ದಿ ವಿಲನ್’ ನಿರೀಕ್ಷೆ ಹೆಚ್ಚಿಸಿರುವ ಚಿತ್ರ. ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹಾಗಾಗಿ, ಈ
ರೀತಿಯ ಚಿತ್ರಗಳು ಬರಬೇಕು. ಈ ಚಿತ್ರ ಗೆಲುವು ಪಡೆದು, ಎಲ್ಲರಿಗೂ ಒಳ್ಳೆಯದಾಗಲಿ’ ಎಂದರು. ಚಿತ್ರತಂಡ ಮುಖ್ಯಮಂತ್ರಿಗಳನ್ನು ಇದೇ ವೇಳೆ ಅಭಿನಂದಿಸಿತು.
ಟೀಸರ್ ನೋಡಿ ಖುಷಿಯಲ್ಲಿದ್ದ ಶಿವರಾಜಕುಮಾರ್, “ಪ್ರೇಮ್ ಒಳ್ಳೆಯ ಚಿತ್ರ ಮಾಡಿದ್ದಾರೆ. ಸುದೀಪ್ ಮತ್ತು ನನ್ನ ಮೊದಲ ಕಾಂಬಿನೇಷನ್ನ ಚಿತ್ರವಿದು. ಎಲ್ಲರಿಗೂ ನಿರೀಕ್ಷೆ ಇದ್ದಂತೆ ನನಗೂ ಇದೆ’ ಅಂದರು. ಸುದೀಪ್ ಅಂದು ಸರ್ಬಿಯಾ ದೇಶದಲ್ಲಿದ್ದರಿಂದ ಅಲ್ಲಿಂದಲೇ ಅವರು
ಕಳಿಸಿದ ಶುಭಾಶಯ ಕೋರಿದ ವೀಡಿಯೋ ಪ್ರದರ್ಶನ ಮಾಡಲಾಯಿತು.
ಪ್ರೇಮ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. “ದಿ ವಿಲನ್’ ಮೇಲೆ ನಿರೀಕ್ಷೆ ಎಲ್ಲೆಡೆ ಇದೆ. ಈಗಷ್ಟೇ ಟೀಸರ್ ಬಿಡುಗಡೆಯಾಗಿದೆ. ನನ್ನ ಬಹು ನಿರೀಕ್ಷೆಯ ಚಿತ್ರವೂ ಹೌದು ಎಂಬುದು ಪ್ರೇಮ್ ಮಾತು. ಇದೇ ವೇಳೆ ಚಿತ್ರತಂಡದಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ.ರಘು, ಆನಂದ್ ಪಿ.ರಾಜು, ಹಿರೇಮಠ್,ಬೂದಾಳ್ ಕೃಷ್ಣಮೂರ್ತಿ ಅವರಿಗೆ ಸಹಾಯಧನ ನೀಡಲಾಯಿತು. ಈ ವೇಳೆ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್, ನಟ ಮಂಡ್ಯ ರಮೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ಇದ್ದರು.