ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’
Team Udayavani, Oct 27, 2021, 3:24 PM IST
ಟಾಮ್ ಅಂಡ್ ಜೆರ್ರಿ ಈ ಹೆಸರು ಕೇಳಿದಾಕ್ಷಣ ನೆನಪಾಗೋದೇ ನಮ್ಮೆಲ್ಲರ ಬಾಲ್ಯ. ಸಖತ್ ಮಜಾ ಕೊಡೋ ಈ ಫೇವರೀಟ್ ಟಾಮ್ ಅಂಡ್ ಜೆರ್ರಿ ಹೆಸರಿನಲ್ಲೀಗ ಸಿನಿಮಾವೊಂದು ಬರ್ತಿದೆ ಅಂದ್ರೆನೇ ಎಷ್ಟು ಕುತೂಹಲ ಅನ್ಸತ್ತೆ ಅಲ್ವಾ? ಹೌದು ಟಾಮ್ ಅಂಡ್ ಚೆರ್ರಿ ಹೆಸರಿನಲ್ಲೊಂದು ಸಿನೆಮಾ ಸೆಟ್ಟೇರಿ ಹೊಸ ಕಥೆ ಹೇಳೋಕೆ ಇದೇ ನವೆಂಬರ್ ತಿಂಗಳಿನಲ್ಲಿ ತೆರೆಮೇಲೆ ಬರ್ತಿದೆ.
ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು , ಈ ಚಿತ್ರ ಇದೇ ನವೆಂಬರ್ 12ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ‘ಸ್ಯಾಂಡಲ್ ವುಡ್ ಅಂಗಳದಲ್ಲಿ ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಟಾಮ್ ಅಂಡ್ ಚೆರ್ರಿ ಸಿನಿಮಾಗೆ ರಾಘವ್ ವಿನಯ್ ಶಿವಗಂಗೆ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಕೆಜಿಎಫ್ ಸಿನಿಮಾದ ಒನ್ ಆಫ್ ದಿ ಡೈಲಾಗ್ ರೈಟರ್ ಆಗಿ ಖ್ಯಾತಿ ಗಳಿಸಿರುವ ಇವರ ನಿರ್ದೇಶನದ ಮೊದಲ ಸಿನಿಮಾವಾಗಿರೋದ್ರಿಂದ ಸಹಜವಾಗಿನೇ ಕುತೂಹಲವೂ ಹೆಚ್ಚಾಗಿದೆ.
ಈಗಾಗಲೇ ಹಾಡುಗಳ ಮೂಲಕವೇ ಸೌಂಡ್ ಮಾಡಿರೋ ಈ ಚಿತ್ರಕ್ಕೆ ಮ್ಯಾಥ್ಯೂಸ್ ಮನು ಸಂಗೀತ ರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಹಾಡುಗಳು ಡಿಫ್ರೆಂಟ್ ಆಗಿ ಮೂಡಿ ಬಂದಿವೆ. ಈಗಾಗಲೇ ಸಿದ್ ಶ್ರೀರಾಮ್ ದನಿಯಲ್ಲಿ ಮೂಡಿ ಬಂದ ‘ಹಾಯಾಗಿದೆ ಎದೆಯೊಳಗೆ’ ಹಾಡು ಸಿನಿ ಪ್ರಿಯರನ್ನ ಮೋಡಿ ಮಾಡಿದೆ. ಇನ್ನು ಟಾಮ್ ಅಂಡ್ ಚೆರ್ರಿ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಇನ್ನು ಸಿನೆಮಾದ ಬಗ್ಗೆ ಹೇಳೊದಾದ್ರೆ ಇದು ಕಂಪ್ಲೀಟ್ಲೀ ಯೂತ್ ಓರಿಯೆಂಟೆಡ್ ಸಿನಿಮಾ. ಯುವ ಪೀಳಿಗೆಯನ್ನು ಸೆಳೆಯುವ ಸಬ್ಜೆಕ್ಸ್ ಸಿನಿಮಾದಲ್ಲಿದ್ದು, ಒಂದೊಳ್ಳೆಯ ಸಂದೇಶವೂ ಇದೆ ಅನ್ನುತ್ತೆ ಚಿತ್ರತಂಡ. ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಚೈತ್ರಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸೋ ಈ ಚಿತ್ರದಲ್ಲಿ ಇಬ್ಬರು ಸ್ನೇಹಿತರ ನಡುವಿನ ಜಗಳ, ಕೋಪ, ತರಲೆ,ತಮಾಷೆ, ಪ್ರೀತಿ, ಆಕ್ಷನ್ ಎಲ್ಲವನ್ನು ಒಳಗೊಂಡಿದೆ.
ಇನ್ನುಳಿದಂತೆ ಮೊದಲ ಬಾರಿಗೆ ತಮ್ಮದೇ ಆದ ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಅವರು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನ ಹೊತ್ತಿದ್ದು ಅವರ ಮೊದಲ ಸಿನೆಮಾದ ನಿರ್ಮಾಣದ ಕನಸನ್ನು ನನಸಾಗಿಸ ಹೊರಟಿದ್ದಾರೆ.
ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಟಾಮ್ ಅಂಡ್ ಜೆರ್ರಿ ಚಿತ್ರಕ್ಕಿದೆ. ಇನ್ನು ಚಿತ್ರದಲ್ಲಿ ಖಳನಟನಾಗಿ ಸೂರ್ಯ ಶೇಖರ್ ಮಿಂಚಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡ ತಾರಾಬಳಗವೇ ಇದ್ದು ಥಿಯೇಟರ್ ಮೋಡಿ ಮಾಡೋದೊಂದೇ ಬಾಕಿಯಿದೆ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ