“ನನ್ನದು ತುಂಬಾ ದೊಡ್ಡದು,ಅವನಿಗಿಂತ ನಿನ್ನದು ಚಿಕ್ಕದು..” ಉಪ್ಪಿ ʼUI’ ʼಚೀಪ್ʼ ಪ್ರೋಮೊ ಔಟ್
Team Udayavani, Feb 14, 2024, 10:36 AM IST
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ʼಯುಐʼ ಸಿನಿಮಾ ಪ್ರೇಮಿಗಳ ದಿನದಂದು ಸಾಂಗ್ ಪ್ರೋಮೊ ರಿಲೀಸ್ ಮಾಡಲಾಗಿದೆ. ಪ್ರೋಮೊದಲ್ಲೇ ಉಪ್ಪಿ ಕೇಳುಗರನ್ನು ರಂಜಿಸಿದ್ದಾರೆ.
ಬಹು ಸಮಯದ ಬಳಿಕ ಉಪೇಂದ್ರ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳಿಗೆ ಪ್ರತ್ಯೇಕವಾದ ಪ್ರೇಕ್ಷಕರ ವರ್ಗವೇ ಇದೆ. ಸಿನಿಮಾ ಅನೌನ್ಸ್ ಆದ ಬಳಿಕ ಅದರ ಟೈಟಲ್ ನಲ್ಲೇ ಕುತೂಹಲ ಹೆಚ್ಚಿಸಿದ ಉಪ್ಪಿ ಆ ಬಳಿಕ ಕತ್ತಲೆಯ ಟೀಸರ್ ಝಲಕ್ ಬಿಟ್ಟು ತಲೆಗೆ ಹುಳು ಬಿಟ್ಟಿದ್ದರು.
ಟೀಸರ್ ನಲ್ಲಿ ವಿಭಿನ್ನ ಜೀವಿಗಳು ದೂರದೂರನ್ನು ನೋಡುವ ನೋಟವನ್ನು ತೋರಿಸಲಾಗಿದೆ. ಅವತಾರ್ ಸಿನಿಮಾದಲ್ಲಿರುವ ಜೀವಿಗಳ ಹಾಗೆ ತೋರುತ್ತಾರೆ. ಇದು ಎಐ ವರ್ಲ್ಡ್ ಅಲ್ಲ ಯುಐ ವರ್ಲ್ಡ್ ಎಂದು, ತಮ್ಮದೇ ಆದ ಜಗತ್ತನ್ನು ತೋರಿಸಿದ್ದಾರೆ. ಇಲ್ಲಿ ಒಂದು ಜಗತ್ತಿದೆ. ಆ ಜಗತ್ತಿಗೆ ಒಬ್ಬ ಸೇನಾದಿಪತಿ, ದೇವ, ಸೈನ್ಯವೇ ಇದೆ. ಉಪ್ಪಿ ಕೊಂಬು ಇರುವ ಕುದುರೆ ಏರಿ ಬಂದಿದ್ದಾರೆ. ರವಿ ಶಂಕರ್ ಹಾಗೂ ಸಾಧಕೋಕಿಲ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ʼಯುಐʼ ಸಿನಿಮಾದ ಮೊದಲ ಹಾಡಿನ ಝಲಕ್ ನ್ನು ಕೇಳಿಸಿದ್ದಾರೆ. ʼಚೀಪ್ʼ ಎನ್ನುವ ಹಾಡಿನ ಪ್ರೋಮೊ ಬಿಟ್ಟಿದ್ದಾರೆ. “ಎಲ್ಲಾ ಚೀಪ್ ಚೀಪ್, ನನ್ನದು ತುಂಬಾ ದೊಡ್ಡದು, ಅವನಿಗಿಂತ ನಿನ್ನದು ಚಿಕ್ಕದು..” ಎನ್ನುವ ಸಾಹಿತ್ಯದಲ್ಲಿ ಹಾಡಿನ ಪ್ರೋಮೊ ಮೂಡಿಬಂದಿದೆ.
ಸಾಹಿತ್ಯವನ್ನು ಉಪ್ಪಿ ಬರೆದಿದ್ದು, ವಿಜಯ್ ಪ್ರಕಾಶ್, ನಕಾಶ್ ಅಜೀಜ್, ದೀಪಕ್ ಬ್ಲೂ ಅವರ ಧ್ವನಿಯಲ್ಲಿ ಪೂರ್ತಿ ಹಾಡು ಇದೇ ಫೆ.26 ರಂದು ರಿಲೀಸ್ ಆಗಲಿದೆ.
ಸಾಹಿತ್ಯದ ಅರ್ಥವನ್ನು ನೀವೇ ಕಲ್ಪಿಸಿಕೊಳ್ಳಿ ಎನ್ನುವ ರೀತಿಯಲ್ಲಿ ಉಪ್ಪಿ ಹಾಡು ಬರೆದಿದ್ದಾರೆ. ಆ ಮೂಲಕ ಮತ್ತೊಮ್ಮೆ ಉಪ್ಪಿ ಕೇಳುಗರ ತಲೆಗೆ ಹುಳು ಬಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ಉಪ್ಪಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿಯ ಮೋಹನ್ ನಾಯ್ಡು – ಕೆ.ಪಿ ಶ್ರೀಕಾಂತ್ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ