ಛಪಾಕ್ ಸಿನಿಮಾ ವಿವಾದ; ಲಕ್ಷ್ಮೀ ಅಗರ್ವಾಲ್ ವಕೀಲರ ಪರ ಆದೇಶ ನೀಡಿದ ದಿಲ್ಲಿ ಕೋರ್ಟ್
ಲಕ್ಷ್ಮೀ ಅಗರ್ವಾಲ್ ಗೆ ಕಾನೂನು ಹೋರಾಟದಲ್ಲಿನ ನನ್ನ ಶ್ರಮವನ್ನೇ ಸಿನಿಮಾ ತಂಡ ಗುರುತಿಸಿಲ್ಲ.
Team Udayavani, Jan 9, 2020, 4:09 PM IST
ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್ ಯು ಕ್ಯಾಂಪಸ್ ಗೆ ಭೇಟಿ ತೀವ್ರ ವಿವಾದಕ್ಕೊಳಗಾದ ನಂತರ ಇದೀಗ ಭಾರೀ ನಿರೀಕ್ಷೆ ಹುಟ್ಟಿಸಿರುವ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನಾಧಾರಿತ ಛಪಾಕ್ ಸಿನಿಮಾದ ವಿಚಾರ ಕೋರ್ಟ್ ಕಟಕಟೆಗೆ ಏರಿದೆ.
ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಪರ ಕಾನೂನು ಹೋರಾಟ ನಡೆಸಿದ್ದ ಅಪರ್ಣಾ ಭಟ್ ಅವರು ಗುರುವಾರ ತಮ್ಮ ಫೇಸ್ ಬುಕ್ ನಲ್ಲಿ ಛಪಾಕ್ ಹಿಂದಿ ಸಿನಿಮಾದಲ್ಲಿ ತನಗೆ ಯಾವ ಕ್ರೆಡಿಟ್ (ಹೆಸರು)ಅನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದ್ದರು.
ನಂತರ ಛಪಾಕ್ ಸಿನಿಮಾ ನಿರ್ಮಾಪಕರ ವಿರುದ್ಧ ಅಪರ್ಣಾ ಭಟ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್, ಛಪಾಕ್ ಸಿನಿಮಾದಲ್ಲಿ ದೂರುದಾರರ (ಅಪರ್ಣಾ ಭಟ್) ಹೆಸರನ್ನು ನಮೂದಿಸಬೇಕು ಎಂದು ಸಿನಿಮಾ ನಿರ್ಮಾಪಕಿ ಮೇಘನಾ ಗುಲ್ಝಾರ್ ಗೆ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.
ಛಪಾಕ್ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ್ದು, ಅದರಲ್ಲಿ ನನ್ನ ಹೆಸರನ್ನೇ ನಮೂದಿಸಿಲ್ಲ. ಲಕ್ಷ್ಮೀ ಅಗರ್ವಾಲ್ ಗೆ ಕಾನೂನು ಹೋರಾಟದಲ್ಲಿನ ನನ್ನ ಶ್ರಮವನ್ನೇ ಸಿನಿಮಾ ತಂಡ ಗುರುತಿಸಿಲ್ಲ. ನನಗೆ ಹಣ ಬೇಕಾಗಿಲ್ಲ, ಕ್ರೆಡಿಟ್ ಬೇಕಾಗಿದೆ ಎಂದು ಅಪರ್ಣಾ ಭಟ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ