Kerela Story ನೋಡಿ ಬಂದಿದ್ದೇವೆ.. ತನ್ನ ಮದುವೆಯನ್ನು ʼಲವ್ಜಿಹಾದ್ʼ ಎಂದವರಿಗೆ ನಟಿ ತರಾಟೆ
Team Udayavani, May 20, 2023, 9:18 AM IST
ಮುಂಬಯಿ: ಜನಪ್ರಿಯ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾರೆ. ಅವರ ಮದುವೆ ಆಗಿ ಕೆಲ ತಿಂಗಳುಗಳೇ ಕಳೆದಿದೆ. ಆದರೆ ಇದೀಗ ʼದಿ ಕೇರಳ ಸ್ಟೋರಿʼ ಸಿನಿಮಾವನ್ನು ಅವರ ಮದುವೆಗೆ ಹೋಲಿಕೆ ಮಾಡಿ ಕೆಲವೊಂದಷ್ಟು ಜನ ಟ್ವೀಟ್ ಮಾಡುತ್ತಿದ್ದಾರೆ.
ಅದಾ ಶರ್ಮಾ ಅಭಿನಯದ ʼದಿ ಕೇರಳ ಸ್ಟೋರಿʼ ದೇಶದೆಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಸಿನಿಮಾವನ್ನು ತೆರೆಗೆ ಮುಕ್ತಗೊಳಿಸಲಾಗಿದೆ. ಇನ್ನು ಕೆಲವೆಡೆ ಹೆಣ್ಣು ಮಕ್ಕಳಿಗಾಗಿ ಉಚಿತವಾಗಿ ಪ್ರದರ್ಶನ ಮಾಡಲಾಗುತ್ತಿದೆ. ಈ ನಡುವೆ ಸಿನಿಮಾದ ಬಗ್ಗೆ ಈಗಲೂ ಪಾಸಿಟಿವ್ – ನೆಗೆಟಿವ್ ಚರ್ಚೆಗಳು ಮುಂದುವರೆದಿದೆ.
ಉತ್ತರಾಖಂಡದ ಹರಿದ್ವಾರದಲ್ಲಿ ʼದಿ ಕೇರಳ ಸ್ಟೋರಿʼಯನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಮಾಡಿರುವ ಚಿತ್ರವನ್ನು ಸಾಧ್ವಿ ಪ್ರಾಚಿ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಕೆಲ ಬಳಕೆದಾರರು ಇದೇ ಟ್ವೀಟ್ ಗೆ ಪ್ರತಿಕ್ರಿಯಿಸಿ ನಟಿ ದೇವೋಲೀನಾ ಭಟ್ಟಾಚಾರ್ಜಿ ಅವರ ಮದುವೆಯನ್ನು ಉಲ್ಲೇಖಿಸಿ ʼಲವ್ ಜಿಹಾದ್ʼ ಎಂದು ಬರೆದು ನಟಿಯನ್ನು ಮೆನ್ಷನ್ ಮಾಡಿದ್ದರು.
ಈ ವಿಚಾರಕ್ಕೆ ಸ್ವತಃ ನಟಿ ದೇವೋಲೀನಾ ಭಟ್ಟಾಚಾರ್ಜಿ ಅವರೇ ಪ್ರತಿಕ್ರಿಯೆ ನೀಡಿದ ವಿಚಾರವೀಗ ನೆಟ್ಟಿಗರ ಮನ ಗೆದ್ದಿದೆ. “ ಖಾನ್ ಸಾಹೇಬ್ ಅವರೇ ನಾನು ಹೇಳಲು ಅಗತ್ಯವಿಲ್ಲ. ನಾನು ಹಾಗೂ ನನ್ನ ಪತಿ ಇಬ್ಬರೂ ʼದಿ ಕೇರಳ ಸ್ಟೋರಿʼಯನ್ನು ನೋಡಿಕೊಂಡು ಬಂದಿದ್ದೇವೆ. ನಮಗೆ ಆ ಸಿನಿಮಾ ತುಂಬಾ ಇಷ್ಟವಾಯಿತು. ʼ ‘ನಿಜವಾದ ಭಾರತೀಯ ಮುಸ್ಲಿಂʼ ಎನ್ನುವ ಮಾತನ್ನು ಯಾವತ್ತಾದ್ರೂ ಕೇಳಿದ್ದೀರಾ? ನನ್ನ ಪತಿ ಅವರಲ್ಲಿ ಒಬ್ಬರು. ಅವರು ತಪ್ಪನ್ನು ತಪ್ಪಂದ್ದೇ ಹೇಳುತ್ತಾರೆ. ನನ್ನ ಪತಿ ತಪ್ಪು ವಿಷಯಗಳ ವಿರುದ್ಧ ನಿಲ್ಲಬಲ್ಲವರಲ್ಲಿ ಒಬ್ಬರು ಮತ್ತು ನಾವಿಬ್ಬರೂ ಒಂದೇ ಧೈರ್ಯವನ್ನು ಹೊಂದಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಸಿನಿಮಾವನ್ನು ಶ್ಲಾಘಿಸಿ, ಸಿನಿಮಾದ ಪರವಾಗಿ ನಟಿ ನಿಂತಿದ್ದಾರೆ.
ನಟಿ ದೇವೋಲೀನಾ ಭಟ್ಟಾಚಾರ್ಜಿ ತಮ್ಮ ಜಿಮ್ ತರಬೇತುದಾರ ಶಾನವಾಜ್ ಶೇಖ್ ಅವರನ್ನು ಡಿಸೆಂಬರ್ 2022 ರಲ್ಲಿ ಮದುವೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ