IPL 2023: ಲಕ್ನೋಗೆ ಬೇಕಿದೆ ಲಾಸ್ಟ್ ಲಕ್!
Team Udayavani, May 20, 2023, 8:20 AM IST
ಕೋಲ್ಕತಾ: ಲಕ್ನೋ ಸೂಪರ್ ಜೈಂಟ್ಸ್ ಸತತ 2ನೇ ಪ್ಲೇ ಆಫ್ ನಿರೀಕ್ಷೆಯೊಂದಿಗೆ ಶನಿವಾರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ ತಂಡ ವನ್ನು “ಈಡನ್ ಗಾರ್ಡನ್ಸ್’ನಲ್ಲಿ ಎದುರಿಸಲಿದೆ.
ಇದೊಂದು ಸರಳ ಲೆಕ್ಕಾಚಾ ರದ ಮುಖಾಮುಖೀ. 13 ಪಂದ್ಯಗ ಳಿಂದ 15 ಅಂಕ ಹೊಂದಿರುವ ಲಕ್ನೋ ತೃತೀಯ ಸ್ಥಾನದಲ್ಲಿದೆ. ಕೋಲ್ಕತಾವನ್ನು ಮಣಿಸಿದರೆ ಪ್ಲೇ ಆಫ್ ಖಾತ್ರಿಯಾಗಲಿದೆ. ಅಕಸ್ಮಾತ್ ಸೋತರೂ ಉಳಿದ ಪಂದ್ಯಗಳ ಫಲಿತಾಂಶ ಲಕ್ನೋಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಆದರೆ ಕೆಕೆಆರ್ ಸ್ಥಿತಿ ಸಂಪೂರ್ಣ ಭಿನ್ನ.ಅದು 13 ಪಂದ್ಯಗಳಿಂದ ಕೇವಲ 12 ಅಂಕ ಗಳಿಸಿದೆ. ರನ್ರೇಟ್ ಮೈನಸ್ನಲ್ಲಿದೆ. ಗೆದ್ದರೂ ಪ್ರಯೋಜನವಿಲ್ಲ ಎಂಬುದು ಸದ್ಯದ ಸ್ಥಿತಿ. ಅದು ಪವಾಡವನ್ನೇ ನಿರೀಕ್ಷಿಸಬೇಕಿದೆ! ಸದ್ಯ ರಾಣಾ ಪಡೆಯದ್ದು ನೂಲಿನ ಮೇಲಿನ ನಡಿಗೆ. ದೊಡ್ಡ ಅಂತರದಲ್ಲಿ ಗೆದ್ದರೂ ಪಂಜಾಬ್, ಹೈದರಾಬಾದ್ ಮತ್ತು ಗುಜರಾತ್ ತಂಡಗಳ ಗೆಲುವನ್ನು ಹಾರೈಸಿ ಕೂರಬೇಕಿದೆ.
ಈಡನ್ ಬ್ಯಾಟಿಂಗ್ ಟ್ರಾಕ್
ಕೋಲ್ಕತಾ ಅಂಗಳ ಬ್ಯಾಟಿಂಗ್ಗೆ ಭಾರೀ ನೆರವು ನೀಡುತ್ತಿದೆ. ಆದರೆ ಆತಿಥೇಯ ತಂಡಕ್ಕೆ ಇದರ ಲಾಭ ಎತ್ತಲಾಗದಿದ್ದುದೊಂದು ದುರಂತ. ಗುಜರಾತ್ ಮತ್ತು ರಾಜಸ್ಥಾನ್ ವಿರುದ್ಧ ಅದು ಮೊದಲು ಬ್ಯಾಟಿಂಗ್ ನಡೆಸಿಯೂ ಗಳಿಸಿದ್ದು 7ಕ್ಕೆ 179 ಹಾಗೂ 8ಕ್ಕೆ 149 ರನ್ ಮಾತ್ರ. ಇದಕ್ಕೆ ವ್ಯತಿರಿಕ್ತವೆಂಬಂತೆ ಚೆನ್ನೈ ಮತ್ತು ಹೈದರಾಬಾದ್ ಇನ್ನೂರರ ಗಡಿ ದಾಟಿದ್ದನ್ನು ಮರೆಯುವಂತಿಲ್ಲ. ಚೆನ್ನೈ 4ಕ್ಕೆ 235 ಹಾಗೂ ಹೈದರಾಬಾದ್ 4ಕ್ಕೆ 228 ರನ್ ಪೇರಿಸಿತ್ತು.
ಕೋಲ್ಕತಾ ತಂಡ ಸಾಕಷ್ಟು ಮಂದಿ ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಇದರಲ್ಲಿ ಬಹುತೇಕರದ್ದು ಕಳಪೆ ನಿರ್ವಹಣೆ. ಭರವಸೆಯ ಆಟವಾಡಿದ್ದು ರಿಂಕು ಸಿಂಗ್, ವರುಣ್ ಚಕ್ರವರ್ತಿ ಮಾತ್ರ.
ಕೆಕೆಆರ್ಗೆ ಹೋಲಿಸಿದರೆ ಲಕ್ನೋ ಸಾಮರ್ಥ್ಯ ಉನ್ನತ ಮಟ್ಟದಲ್ಲಿದೆ. ನಾಯಕ ಕೆ.ಎಲ್. ರಾಹುಲ್ ಗೈರಲ್ಲೂ ಅದು ಚೇತೋಹಾರಿ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ದೀಪಕ್ ಹೂಡಾ ಹೊರತುಪಡಿಸಿ ಉಳಿದವರೆಲ್ಲ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಸ್ಟೋಯಿನಿಸ್, ಡಿ ಕಾಕ್, ಪೂರಣ್, ಮಂಕಡ್, ಬದೋನಿ ಇವರಲ್ಲಿ ಪ್ರಮುಖರು.
ಆದರೆ ಬೌಲಿಂಗ್ ವಿಭಾಗ ಅಷ್ಟೇನೂ ಘಾತಕವಲ್ಲ. ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ, ಯಶ್ ಠಾಕೂರ್, ನವೀನ್ ಉಲ್ ಹಕ್, ಕೃಣಾಲ್ ಪಾಂಡ್ಯ ಮೇಲೆ ಹೆಚ್ಚು ಒತ್ತಡವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ