ದಯವಿಟ್ಟು ನನಗೆ ಯಾವ ಪಾತ್ರವೂ ನೀಡಬೇಡಿ.. ಸಂದೀಪ್‌ ರೆಡ್ಡಿ ಜೊತೆ ಸಿನಿಮಾ ಮಾಡಲ್ಲ ಎಂದ ಕಂಗನಾ


Team Udayavani, Feb 6, 2024, 12:43 PM IST

ದಯವಿಟ್ಟು ನನಗೆ ಯಾವ ಪಾತ್ರವೂ ನೀಡಬೇಡಿ.. ಸಂದೀಪ್‌ ರೆಡ್ಡಿ ಜೊತೆ ಸಿನಿಮಾ ಮಾಡಲ್ಲ ಎಂದ ಕಂಗನಾ

ಮುಂಬಯಿ: ಸಂದೀಪ್‌ ರೆಡ್ಡಿ ವಂಗಾ ಅವರ ʼಅನಿಮಲ್‌ʼ ದೊಡ್ಡ ಹಿಟ್‌ ಆಗುವುದರ ಜೊತೆಗೆ ಸಿನಿಮಾದ ಬಗ್ಗೆ ಒಂದಷ್ಟು ನೆಗೆಟಿವ್‌ ಅಭಿಪ್ರಾಯಗಳು ಹಲವರಿಂದ ಕೇಳಿಬಂದಿದೆ. ಆದರೆ ಇದೆಲ್ಲವನ್ನು ಮೀರಿ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿ ಯಶಸ್ಸು ಕಂಡಿದೆ.

ರಣ್ಬೀರ್‌ ಕಪೂರ್‌ ಅವರ ʼಅನಿಮಲ್‌ʼ ಸಿನಿಮಾದಲ್ಲಿ ರಕ್ತಸಿಕ್ತ ಅಂಶ ಹಾಗೂ ಹಸಿಬಿಸಿ ದೃಶ್ಯವನ್ನು ತುಸು ಹೆಚ್ಚಾಗಿಯೇ ತೋರಿಸಲಾಗಿದೆ. ಪುರುಷ ಪ್ರಧಾನವೇ ಮೇಲು ಎನ್ನುವ ಮತ್ತೊಂದು ವಿಚಾರವನ್ನು ಕೂಡ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಕಾರಣದಿಂದ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕಂಗನಾ ರಣಾವತ್‌ ಅವರ ಬಳಿ ಅಭಿಮಾನಿಯೊಬ್ಬ ʼತೇಜಸ್‌ʼ ಸಿನಿಮಾ ಯಾಕೆ ಓಡಿಲ್ಲ ಎನ್ನುವ ಪ್ರಶ್ನೆಯೊಂದನ್ನು ಎಕ್ಸ್‌ ನಲ್ಲಿ ಕೇಳಿದ್ದ. ಇದಕ್ಕೆ ಕಂಗನಾ ಅವರು ಸಿನಿಮಾದ ಹೆಸರು ಹೇಳದೆ,  “ನನ್ನ ಸಿನಿಮಾಗಳ ಬಗ್ಗೆ ನಕಾರಾತ್ಮಕತೆಯನ್ನು ಹಬ್ಬಿಸುವುದು ಹೆಚ್ಚಾಗಿದೆ. ನಾನು ಇದುವರೆಗೆಕಠಿಣ ಹೋರಾಟ ನಡೆಸಿದ್ದೇನೆ. ಆದರೆ ಪ್ರೇಕ್ಷಕರು ಕೂಡ ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ ಪರಿಗಣಿಸುವ ಮತ್ತು ಶೂಗಳನ್ನು ನೆಕ್ಕಲು ಕೇಳುವ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ವಿಚಾರದ ಮೇಲೆ ಸಿನಿಮಾಗಳನ್ನು ಮಾಡಲು ವೃತ್ತಿ ಜೀವನವನ್ನು ಮುಡಿಪಾಗಿಸುವವರಿಗೆ ಪ್ರೋತ್ಸಾಹ ಸಿಗದೆ ಇರುವುದು ದುರಂತ” ಎಂದು ಕಂಗನಾ ಪ್ರತಿಕ್ರಿಯೆ ನೀಡಿದ್ದರು.

ಇದು ಪರೋಕ್ಷವಾಗಿ ʼಅನಿಮಲ್‌ʼ ಸಿನಿಮಾಕ್ಕೆ ಹೇಳಿದ ಮಾತಾಗಿತ್ತು. ಇದೇ ವಿಚಾರವಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂದೀಪ್‌ ವಂಗಾ ಅವರು, ಕಂಗನಾ ಜೊತೆ ಕೆಲಸ ಮಾಡುವ ಬಗ್ಗೆ ಹೇಳಿದ್ದರು. ಅವರು ಒಪ್ಪಿದರೆ ಅವರೊಂದಿಗೆ ಕೆಲಸ ಮಾಡುವ ಇಚ್ಛೀಸುತ್ತೇನೆ ಎಂದಿದ್ದರು.

“ವಿಮರ್ಶೆ ಮತ್ತು ಟೀಕೆ ಒಂದೇ ಅಲ್ಲ, ಪ್ರತಿಯೊಂದು ರೀತಿಯ ಕಲೆಯನ್ನು ವಿಮರ್ಶೆ ಮತ್ತು ಚರ್ಚೆ ಮಾಡಬೇಕು, ಇದು ಸಾಮಾನ್ಯ ವಿಷಯ. ನನ್ನ ವಿಮರ್ಶೆಗೆ ಮುಗುಳ್ನಗುವ ಮೂಲಕ ಸಂದೀಪ್ ಜಿ ನನ್ನ ಬಗ್ಗೆ ಗೌರವವನ್ನು ತೋರಿದ ರೀತಿ ಹಾಗೂ ಅವರ ವರ್ತನೆ ಕೂಡ  ಅವರು ಮಾಡುವ ಪುರುಷ ಪ್ರಧಾನ ಸಿನಿಮಾದಂತೆಯೇ ಇತ್ತು. ಆದರೆ ದಯವಿಟ್ಟು ನನಗೆ ಯಾವುದೇ ಪಾತ್ರವನ್ನು ನೀಡಬೇಡಿ. ಇಲ್ಲದಿದ್ದರೆ ನಿಮ್ಮ ಆಲ್ಫಾ ಪುರುಷ ನಾಯಕರು ಸ್ತ್ರೀವಾದಿಗಳಾಗುತ್ತಾರೆ ಮತ್ತು ನಂತರ ನಿಮ್ಮ ಚಲನಚಿತ್ರಗಳು ಸಹ ಸೋಲಿಸಲ್ಪಡುತ್ತವೆ. ನೀವು ಬ್ಲಾಕ್‌ಬಸ್ಟರ್‌ಗಳನ್ನು ಮಾಡುತ್ತೀರಿ, ಚಿತ್ರರಂಗಕ್ಕೆ ನಿಮ್ಮ ಅಗತ್ಯವಿದೆ” ಎಂದು ಹೇಳಿದ್ದಾರೆ.

ʼಅನಿಮಲ್‌ʼ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ಇತರರು ನಟಿಸಿದ್ದಾರೆ. ನೆಟ್‌ ಫ್ಲಿಕ್ಸ್‌ ನಲ್ಲಿ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ.

 

 

ಟಾಪ್ ನ್ಯೂಸ್

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.