Rajinikanth: ಮಂಗಳಾರತಿ ತಟ್ಟೆಗೆ ದಕ್ಷಿಣೆ: ʼತಲೈವಾʼ ಸ್ಟೈಲ್ ಸಖತ್ ವೈರಲ್
Team Udayavani, Sep 10, 2023, 5:55 PM IST
ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ʼಜೈಲರ್ʼ ಸಿನಿಮಾ ದೊಡ್ಡ ಹಿಟ್ ಆಗಿದೆ. ವರ್ಲ್ಡ್ ವೈಡ್ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇನ್ನು ಕೂಡ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ.
ʼಜೈಲರ್ʼ ಸಿನಿಮಾ ಯಶಸ್ಸಾದ ಖುಷಿಯಲ್ಲಿ ʼತಲೈವಾʼ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಿನಿಮಾರಂಗಕ್ಕೆ ಬರುವ ಮುನ್ನ ರಜಿನಿಕಾಂತ್ ಬೆಂಗಳೂರಿನಲ್ಲಿ ಹತ್ತಾರು ವರ್ಷ ನೆಲೆಸಿದ್ದರು. ಬಸ್ ಕಂಡೆಕ್ಟರ್ ಬದುಕನ್ನು ಸಾಗಿಸುತ್ತಿದ್ದರು. ಜಯನಗರ ಡಿಪೋಗೆ ದಿಢೀರ್ ಭೇಟಿ ನೀಡಿದ್ದರು. ಆ ಬಳಿಕ ಅವರು ಚಾಮರಾಜಪೇಟೆಯ ರಾಯರ ಮಠಕ್ಕೆ ಭೇಟಿ ನೀಡಿದ್ದರು. ರಾಯರ ಮಠಕ್ಕೆ ಭೇಟಿ ನೀಡಿದ ಕ್ಷಣದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ರಾಯರ ಮಠಕ್ಕೆ ರಜಿನಿಕಾಂತ್ ಭೇಟಿ ನೀಡಿದ ವೇಳೆ ಮಂಗಳಾರತಿ ತಟ್ಟೆಗೆ ದಕ್ಷಿಣೆಯನ್ನು ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದು ರಾಯರ ಮಠಕ್ಕೆ ಬಂದಾಗ ರಜಿನಿಕಾಂತ್ ಬಿಳಿ ಬಣ್ಣದ ಉದ್ದ ಕೈ ಅಂಗಿ ಹಾಗೈ ಬಿಳಿ ಪಂಚೆ ತೊಟ್ಟು ಬಂದಿದ್ದರು. ಸಾಮಾನ್ಯವಾಗಿ ನಾವು ಮಂಗಳಾರತಿ ತಟ್ಟೆಗೆ ಪ್ಯಾಂಟ್ ಅಥವಾ ಶರ್ಟ್ ಕಿಸೆಯಿಂದ ತೆಗೆದು ಹಣವನ್ನು ಹಾಕುತ್ತೇವೆ. ಆದರೆ ರಜಿನಿಕಾಂತ್ ಕಿಸೆಯಿಂದ ಹಣ ತೆಗೆಯದೆ ಶರ್ಟ್ ತೋಳಿನಲ್ಲಿ ಹಣವನ್ನಿಟ್ಟು ಅದನ್ನು ದಕ್ಷಿಣೆ ರೂಪದಲ್ಲಿ ಮಂಗಳಾರತಿ ತಟ್ಟೆಗೆ ಹಾಕಿದ್ದಾರೆ.
ʼತಲೈವಾʼ ಅವರು ಮಾತ್ರ ಇಂಥದ್ದನ್ನು ಮಾಡಬಲ್ಲರೆಂದು ಅವರ ಅಭಿಮಾನಿಗಳು ವಿಡಿಯೋವನ್ನು ಹಂಚಿಕೊಂಡು ಹೇಳುತ್ತಿದ್ದಾರೆ.
Only #Thalaivar can plan and do this way.. 👌 pic.twitter.com/8Ao70Sfc9T
— Ramesh Bala (@rameshlaus) September 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ