ಸಿಕ್ಕಿಂ ಕುರಿತ ಹೇಳಿಕೆ: ಕ್ಷಮೆ ಕೋರಿದ ಪ್ರಿಯಾಂಕಾ ಚೋಪ್ರಾ
Team Udayavani, Sep 15, 2017, 3:42 PM IST
ಮುಂಬಯಿ : ಸಿಕ್ಕಿ ಬಂಡುಕೋರರ ಹಿಂಸೆಯಿಂದ ಪೀಡಿತವಾಗಿರುವ ರಾಜ್ಯವಾಗಿದೆ ಎಂಬ ತನ್ನ ತಪ್ಪು ಹೇಳಿಕೆಯಿಂದ ಸಿಕ್ಕಿಂ ಜನರ ಭಾವನೆಗಳು ಹಾಗೂ ಘನತೆಗೆ ನೋವುಂಟಾಗಿರುವುದಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೋರಿದ್ದಾರೆ.
ವಸ್ತು ಸ್ಥಿತಿಯ ತಿಳಿವಳಿಕೆಯೇ ಇಲ್ಲದೇ ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಪ್ರಿಯಾಂಕಾ ಕ್ಷಮೆ ಕೋರಬೇಕೆಂದು ರಾಜ್ಯ ಸರಕಾರ ಆಗ್ರಹಿಸಿತ್ತಾರೆ ಸಾಮಾಜಿಕ ಜಾಲ ತಾಣ ಬಳಕೆದಾರರು ಚೋಪ್ರಾ ರಾಜಕೀಯವಾಗಿ ನಿರಕ್ಷರಳೆಂದು ಟೀಕಿಸಿದ್ದರು.
“ಪಹೂನಾ’ ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಚೋಪ್ರಾ “ಬಂಡುಕೋರರಿಂದ ಹಿಂಸಾತ್ರಸ್ತವಾಗಿರುವ ಸಿಕ್ಕಿಂನಿಂದ ಬಂದಿರುವ ಮೊದಲ ಚಿತ್ರ ಇದಾಗಿದೆ’ ಎಂದು ಟೊರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೇಳಿದ್ದರು.
“ಸಿಕ್ಕಿಂ ಶಾಂತಿಯುತ, ಹಸಿರು ಸಮೃದ್ಧ, ಶಾಂತಿಪ್ರಿಯ ಜನರಿಂದ ಕೂಡಿದ ರಾಜ್ಯವಾಗಿದೆ; ನನ್ನ ಹೇಳಿಕೆಯಿಂದ ಸಿಕ್ಕಿಂ ಜನರಿಗೆ ನೋವುಂಟಾಗಿದೆ ಎಂದು ನಾನು ಬಲ್ಲೆ; ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್