ಅಲ್ಲು ಅರ್ಜುನ್ “ಪುಷ್ಪ-2” ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಡೈರೆಕ್ಟರ್ ಸುಕುಮಾರ್
Team Udayavani, Aug 21, 2022, 7:29 PM IST
ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ʼಪುಷ್ಪʼ ಮೊದಲ ಭಾಗ ಟಾಲಿವುಡ್, ಬಾಲಿವುಡ್ ಸೇರಿದಂತೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದೊಡ್ಡ ಹವಾ ಎಬ್ಬಿಸಿತ್ತು. ಚಿತ್ರದ ಎರಡನೇ ಭಾಗದ ಹೊಸ ಅಪ್ ಡೇಟ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದರು. ಈ ಬಗ್ಗೆ ಲೇಟೆಸ್ಟ್ ಸುದ್ದಿಯೊಂದು ಹೊರ ಬಿದ್ದಿದೆ.
ಸುಕುಮಾರ್ ನಿರ್ದೇಶನದಲ್ಲಿ 2021 ರಲ್ಲಿ ತೆರೆಗೆ ಬಂದಿದ್ದ ʼಪುಷ್ಪʼ ಚಿತ್ರ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ರಕ್ತ ಚಂದನ ಸ್ಮಗ್ಲರ್ ಆಗಿ ದೇಸಿ ಸ್ಟೈಲ್ ನಲ್ಲಿ ಅಲ್ಲು ಅರ್ಜುನ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದರು. ಇವರೊಂದಿಗೆ ನಾಯಕಿಯಾಗಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ಪ್ರೇಕ್ಷಕರ ಮನ ಕದ್ದಿದ್ದರು. ದೇವಿ ಪ್ರಸಾದ್ ಬಿಜಿಎಂ, ಸಮಂತಾ ಐಟಂ ಡ್ಯಾನ್ಸ್ ಕಿಕ್ಕೇರಿಸುವಂತೆ ಮಾಡಿತ್ತು.
ಮೊದಲ ಭಾಗದ ಕೊನೆಯಲ್ಲಿ ಮಲಯಾಳಂನ ಫಹಾದ್ ಪಾಸಿಲ್ ಎಸ್ ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಕಾಣಿಸಿಕೊಂಡು, ಪುಷ್ಪರಾಜ್ ನೊಂದಿಗೆ ನಡೆಯುವ ಸಂಘರ್ಷವನ್ನು ತೋರಿಸಲಾಗಿತ್ತು. ಚಿತ್ರದ ಎರಡನೇ ಭಾಗದಲ್ಲಿ ಈ ಇಬ್ಬರ ಮುಖಾಮುಖಿಯೊಂದಿಗೆ ಯಾವೆಲ್ಲಾ ಆಂಶಗಳು ಇರಲಿವೆ ಎನ್ನುವುದು ಕಾದು ನೋಡಬೇಕು.
ವರದಿಯ ಪ್ರಕಾರ, ಪುಷ್ಪ-2 ಚಿತ್ರದಲ್ಲಿ ಮೊದಲ ಭಾಗಕ್ಕಿಂತ ಹೆಚ್ಚಿನ ಸಾಹಸ ದೃಶ್ಯಗಳು ಹಾಗೂ ದೊಡ್ಡ ಮಟ್ಟದ ಬಜೆಟ್ ಇರಲಿವೆಯಂತೆ. ಹೀಗಾಗಿ ನೋಡುಗರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಾಟ್ಟಾಗಿದೆ.
ಚಿತ್ರದ ನಿರ್ದೇಶಕ ಸುಮಾರ್ ನಾಳೆ (22 ರಂದು) ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡು ಮಾಹಿತಿ ಕೊಟ್ಟಿದ್ದಾರೆ. ಇದು ತುಂಬಾ ದಿನದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ನಿರ್ಮಾಪಕರ ವಿಷಯದಲ್ಲಿ ಟಾಲಿವುಡ್ ನಲ್ಲಿ ಸ್ಟ್ರೈಕ್ ನಡೆಯುತ್ತಿದ್ದು, ಆ ಬಳಿಕ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್