ಸೂರ್ಯವಂಶಿ-ಬಿಡುಗಡೆಗೆ-ಸಜ್ಜ
Rohit Shetty's 'Sooryavanshi' gets release date
Team Udayavani, Oct 15, 2021, 4:15 PM IST
ಮುಂಬೈ: ದೇಶಾದ್ಯಂತ ಚಿತ್ರಮಂದಿರಗಳು ಈಗಾಗಲೇ ತೆರೆದು, ಒಂದೊಂದೇ ಚಿತ್ರಗಳು ತೆರೆಕಾಣುತ್ತಿವೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಜಯ್ ದೇವಗನ್, ಮತ್ತು ರಣವೀರ್ ಸಿಂಗ್ ನಟಿಸಿರುವ ಚಿತ್ರ ಸೂರ್ಯವಂಶಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಬಹುನೀರಿಕ್ಷಿತ ಸೂರ್ಯವಂಶಿ ಮುಂಬರುವ ನವೆಂಬರ್ 5ರಂದು ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ಅಕ್ಷಯ್ ಕುಮಾರ್ ಟ್ವಿಟ್ಟರ್ ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಶೇರ್ ಮಾಡಿರುವ ವಿಡಿಯೋದಲ್ಲಿ ಮೂವರು ನಟರು ತಮ್ಮ ಅನುಭವಗಳ ಕುರಿತು ಹೇಳಿಕೊಂಡಿದ್ದಾರೆ.
Interval hua khatam, now it’s showtime! #Sooryavanshi releasing this Diwali, 5th November at a cinema near you. Come celebrate with us. #BackToCinemas pic.twitter.com/JF2QE80Efp
— Akshay Kumar (@akshaykumar)
ಇನ್ನು ಈ ಮೊದಲು ದೀಪಾವಳಿಯಂದು (ನವೆಂಬರ್ 4) ಸೂರ್ಯವಂಶಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದರು. ಆದರೆ ಆ ಸಮಯದಲ್ಲಿ ನಿಖರವಾದ ದಿನಾಂಕ ಖಚಿತ ಪಡಿಸಿರಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಅಕ್ಕೋಬರ್ 22ರಿಂದ ಚಿತ್ರಮಂದಿರಗಳು ಮತ್ತೆ ತೆರೆಯಬಹುದು ಎಂದು ಘೋಷಿಸಿದ ಬಳಿಕ ಈ ಸುದ್ದಿ ಹೊರ ಬಂದಿದೆ.
ಸೂರ್ಯವಂಶಿ ಚಿತ್ರ ಕಾಪ್ ಆಕ್ಷನ್, ಸಿಂಗಂ ಬ್ರಹ್ಮಾಂಡದ ಮುಂದುವರೆದ ಭಾಗವಾಗಿದೆ. ಇದು ಅಜಯ್ ದೇವಗನ್ ನಟನೆಯ ಸಿಂಗಂ ಮತ್ತು ಸಿಂಗಮ್ ರಿಟರ್ನ್ಸ್ ನಂತರ ರಣವೀರ್ ಸಿಂಗ್ ಮತ್ತು ದೇವಗನ್ ನಟನೆಯ ಸಿಂಬಾ ಮೂಲಕ ವಿಸ್ತರಿಸಿತ್ತು. ಈಗ ಮುಂದುವರೆಯುತ್ತಿದೆ ಅಕ್ಷಯ್ ಪಾತ್ರ.
ಈ ಚಿತ್ರದಲ್ಲಿ ಅಕ್ಷಯ್ ಅಪರಾಧದ ವಿರುದ್ಧ ಹೋರಾಡುವ ಡಿಸಿಪಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಕತ್ರಿನಾ ನಾಯಕಿಯಾಗಿ ನಟಿಸಿದ್ದಾರೆ. ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ವೀಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ