‘ನಾನಲ್ಲ, ಸೋನು ಸೂದ್ ಸೂಪರ್ ಹೀರೋ’ : ತೆಲಂಗಾಣ ಸಚಿವ ಕೆಟಿಆರ್
Team Udayavani, Jun 1, 2021, 1:49 PM IST
ಬಾಲಿವುಡ್ ನಟ ಸೋನು ಸೂದ್ ಅವರು ಸೂಪರ್ ಹೀರೋ ಎಂದು ತೆಲಂಗಾಣ ಸಚಿವ ಕೆ.ಟಿ ರಾಮ್ ರಾವ್ ಅವರು ಕೊಂಡಾಡಿದ್ದಾರೆ. ಅಭಿಮಾನಿಗಳು ತಮಗೆ ನೀಡಿದ ಪಟ್ಟವನ್ನು ಪ್ರೀತಿಯಿಂದಲೆ ಸೋನು ಸೂದ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.
ವ್ಯಕ್ತಿಯೊಬ್ಬರ ಸಂಕಷ್ಟಕ್ಕೆ ತಕ್ಷಣವೆ ಸ್ಪಂದಿಸಿದ ಸಚಿವ ಕೆಟಿಆರ್ ಕೇವಲ 10 ಗಂಟೆಯಲ್ಲಿ ಆಕ್ಸಿಜನ್ ಸಾಂಧ್ರಕವನ್ನು ತಲುಪಿಸಿದ್ದರು. ಇದರಿಂದ ಖುಷಿಗೊಂಡ ಆತ, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ನಮ್ಮ ಕಷ್ಟಕ್ಕೆ ಕೂಡಲೇ ಸ್ಪಂಧಿಸಿದ ನೀವು ನಿಜವಾಗಿಯೂ ಸೂಪರ್ ಹೀರೋ ಎಂದು ಟ್ವೀಟ್ ಮಾಡಿದ್ದ.
ತಮ್ಮನ್ನು ಸೂಪರ್ ಹೀರೋ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ನಿಮ್ಮಿಂದ ಆಯ್ಕೆಗೊಂಡ ಜನಪ್ರತಿನಿಧಿ ಮಾತ್ರ. ನನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದೇನೆ. ನೀವು ಸೋನು ಸೂದ್ ಅವರನ್ನು ಸೂಪರ್ ಹೀರೋ ಎಂದು ಕರೆಯಿರಿ ಎಂದು ಹೇಳಿದ್ದಾರೆ.
ಇನ್ನು ಕೆಟಿಆರ್ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್ ಅವರು, ನಿಮ್ಮ ಈ ಮಾತಿಗೆ ಧನ್ಯವಾದಗಳು. ಆದರೆ, ತೆಲಂಗಾಣದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನೀವು ನಿಜವಾದ ಹೀರೋ. ನಿಮ್ಮ ನಾಯಕತ್ವದಡಿ ತೆಲಂಗಾಣ ರಾಜ್ಯ ತುಂಬಾ ಅಭವೃದ್ಧಿಗೆ ಹೊಂದಿದೆ. ಈ ರಾಜ್ಯ ನನ್ನ ಎರಡನೆ ಮನೆಯಿದ್ದಂತೆ. ಅಲ್ಲಿಯ ಜನರು ನನಗೆ ತುಂಬ ಪ್ರೀತಿ ನೀಡಿದ್ದಾರೆ ಎಂದು ಸೋನು ಹೇಳಿಕೊಂಡಿದ್ದಾರೆ.
ಇನ್ನು ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ಅವರು ಸಾಕಷ್ಟು ಪರೋಪಕಾರಿ ಕೆಲಸ ಮಾಡುತ್ತಿದ್ದಾರೆ.
Thank you so much sir for your kind words! But you are truly a hero who has done so much for Telengana. The state has developed so much under your leadership. I consider Telengana as my second Home as its my place of work & the people have shown me so much love over the years?? https://t.co/8LG65I0G01
— sonu sood (@SonuSood) June 1, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?