Ambuja Movie Review: ‘ಅಂಬುಜ’ಳ ಕುತೂಹಲದ ನಡಿಗೆ


Team Udayavani, Jul 22, 2023, 12:46 PM IST

Ambuja Movie Review

ಹಳ್ಳಿಯಿಂದ ಕನಸು ಕಟ್ಟಿಕೊಂಡು ಸಿಟಿಗೆ ಬರುವ ಹೆಣ್ಣು ಮಕ್ಕಳು ಕೊಲೆಯಾಗುತ್ತಿರುತ್ತಾರೆ. ಆದರೆ, ಯಾವುದೇ ಪೊಲೀಸ್‌ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗುವುದಿಲ್ಲ. ಅದಕ್ಕೆ ಕಾರಣ ಅದರ ಹಿಂದಿರುವ ಜಾಲ. ಅಷ್ಟಕ್ಕೂ ಆ ಜಾಲ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಅಂಬುಜ’ ಸಿನಿಮಾ ನೋಡಬಹುದು.

ಈ ವಾರ ತೆರೆಕಂಡಿರುವ “ಅಂಬುಜ’ ಒಂದು ಹೊಸ ವಿಷಯವನ್ನಿಟ್ಟುಕೊಂಡು ಬಂದಿರುವ ಸಿನಿಮಾ. ಕಂಟೆಂಟ್‌ ಸಿನಿಮಾಗಳು ಸದ್ದು ಮಾಡುತ್ತಿರುವ ಸಮಯದಲ್ಲಿ “ಅಂಬುಜ’ದಲ್ಲೂ ಒಂದು ಗಟ್ಟಿ ಕಂಟೆಂಟ್‌ ಇದೆ. ನಿರ್ದೇಶಕ ಶ್ರೀನಿ ಫ್ಯಾಮಿಲಿ ಡ್ರಾಮಾ ಜೊತೆಗೆ ಥ್ರಿಲ್ಲರ್‌ ಅಂಶಗಳನ್ನು ಸೇರಿಸಿ ಒಂದು ನೀಟಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಕ್ರೈಮ್‌ ರಿಪೋರ್ಟರ್‌ವೊಬ್ಬರ ತನಿಖೆ ಹಾಗೂ ಸಂದೇಹದೊಂದಿಗೆ ತೆರೆದುಕೊಳ್ಳುವ ಸಿನಿಮಾ ಮುಂದೆ ಹಲವು ಆಯಾಮಗಳೊಂದಿಗೆ ಸಾಗುತ್ತದೆ. ಇದು ಥ್ರಿಲ್ಲರ್‌ ಜಾನರ್‌ ಆದರೂ, ಅಲ್ಲಲ್ಲಿ ಫ್ಯಾಮಿಲಿ ಡ್ರಾಮಾಕ್ಕೂ ಅವಕಾಶವಿದೆ.

ಬಹುತೇಕ ಸಿನಿಮಾಗಳ ಮೊದಲರ್ಧ ಪಾತ್ರ ಪರಿಚಯ, ಕಾಮಿಡಿ, ಸೆಂಟಿಮೆಂಟ್‌ ದೃಶ್ಯಗಳ ಮೂಲಕ ಮೂಲಕಥೆಗೆ ಬರುತ್ತವೆ. ಆದರೆ, “ಅಂಬುಜ’ ಸಿನಿಮಾ ಆರಂಭವಾದಗಿನಿಂದಲೂ ಚಿತ್ರದೊಳಗಿನ ಸಸ್ಪೆನ್ಸ್‌ವೊಂದನ್ನು ಪ್ರೇಕ್ಷಕರ ಮಡಿಲಿಗೆ ಹಾಕಿಯೇ ಸಿನಿಮಾ ಮುಂದೆ ಸಾಗುತ್ತದೆ. ಸಿನಿಮಾದ ಮೂಲಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧ ದಲ್ಲಿ. ಇಲ್ಲಿ ಕಥೆಗೆ ಹೊಸ ಆಯಾಮ ಸಿಗುವ ಜೊತೆಗೆ ಮುಖವಾಡಗಳು ಬಯಲಾಗುತ್ತಾ ಹೋಗುತ್ತದೆ.

ಈ ಸಿನಿಮಾದ ಪ್ರಮುಖ ಹೈಲೈಟ್ಸ್‌ ಕ್ಲೈಮ್ಯಾಕ್ಸ್‌. ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ಚಿತ್ರತಂಡ ಅದ್ಭುತವಾಗಿ ಚಿತ್ರೀಕರಿಸಿದೆ. ಆ ಮಟ್ಟಿಗೆ “ಅಂಬುಜ’ ಪ್ರಯತ್ನವನ್ನು ಮೆಚ್ಚಬಹುದು. ನಿರ್ಮಾಪಕ ಕಾಶೀನಾಥ್‌ ಈ ಚಿತ್ರದ ಕಥೆಗಾರ. ಒಂದೊಳ್ಳೆಯ ಕಥೆಯನ್ನು ಕೊಟ್ಟಿರುವ ಜೊತೆಗೆ ನಿರ್ಮಾಣದಲ್ಲೂ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ಚಿತ್ರದಲ್ಲಿ ನಟಿಸಿರುವ ಶುಭಾ ಪೂಂಜಾ, ದೀಪಕ್‌ ಸುಬ್ರಮಣ್ಯ, ರಜಿನಿ, ಬೇಬಿ ಆಕಾಂಕ್ಷ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪತ್ರಕರ್ತೆಯಾಗಿ ಶುಭಾ ಪೂಂಜಾ, ಲಂಬಾಣಿ ಜನಾಂಗದ ಹೆಣ್ಣಾಗಿ ರಜಿನಿ ನಟಿಸಿದರೆ, ಬಾಲನಟಿಯಾಗಿ ನಟಿಸಿರುವ ಆಕಾಂಕ್ಷ ಗಮನ ಸೆಳೆಯುತ್ತಾರೆ. ಚಿತ್ರದ ಹಾಡುಗಳು ಸನ್ನಿವೇಶಕ್ಕೆ ಪೂರಕವಾಗಿವೆ.

ರವಿ ರೈ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.