ತುಂಡ್‌ ಹೈಕ್ಳ ಜಂಟಿ ಸಾಹಸ

ಚಿತ್ರ ವಿಮರ್ಶೆ

Team Udayavani, Jan 18, 2020, 7:03 AM IST

sri-bharata

ಇಲ್ಲಿಯವರೆಗೆ ಸಂಭಾಷಣೆಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ “ಶ್ರೀ ಭರತ ಬಾಹುಬಲಿ’ ಚಿತ್ರ ಈ ವಾರ ತೆರೆಗೆ ಬಂದಿದೆ. ಅಂದಹಾಗೆ, ಚಿತ್ರದ ಹೆಸರು “ಶ್ರೀ ಭರತ ಬಾಹುಬಲಿ’ ಅಂತಿದ್ದರೂ, ಇತಿಹಾಸ-ಪುರಾಣಗಳಲ್ಲಿ ಬರುವ ಭರತ-ಬಾಹುಬಲಿಗೂ, ಈ ಚಿತ್ರದಲ್ಲಿರುವ ಭರತ-ಬಾಹುಬಲಿಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನೋಡೋಕೆ ಸಿಗೋದು ಪಕ್ಕಾ ನಮ್ಮ-ನಿಮ್ಮ ನಡುವೆ ಇರುವ ಭರತ-ಬಾಹುಬಲಿ ಅನ್ನೋ ತುಂಡ್‌ ಹೈಕ್ಳು.

ಚಿಕ್ಕ ವಯಸ್ಸಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಕಳೆದು ಹೋಗುವ ಪುಟ್ಟ ಹುಡುಗಿ ಶ್ರೀ ವಿದೇಶಿ ದಂಪತಿಗಳ ಕೈಗೆ ಸಿಕ್ಕು ವಿದೇಶ ಸೇರಿಕೊಳ್ಳುತ್ತಾಳೆ. ಅಲ್ಲೆ ಬೆಳೆದು ದೊಡ್ಡವಳಾಗುವ ಶ್ರೀಗೆ ಪದೇ ಪದೇ ಬೀಳುವ ಕನಸೊಂದು ಆಕೆಯನ್ನು ನಿಜ ಜೀವನದಲ್ಲಿ ಮತ್ತೆ ತನ್ನ ಹೆತ್ತವರನ್ನು ಹುಡುಕಿಕೊಂಡು ಭಾರತಕ್ಕೆ ಬರುವಂತೆ ಮಾಡುತ್ತದೆ. ಮತ್ತೂಂದೆಡೆ ಹಳ್ಳಿಯಲ್ಲಿ ಅವರಿವರಿಗೆ ಟೋಪಿ ಹಾಕಿಕೊಂಡು ಆರಾಮಾಗಿ ಓಡಾಡಿಕೊಂಡಿರುವ ಭರತ, ಬಾಹುಬಲಿ ಅನ್ನೋ ತುಂಡ್‌ ಹೈಕ್ಳು ಈ ಹುಡುಗಿಯ ಕಣ್ಣಿಗೆ ಬೀಳುತ್ತಾರೆ.

ಈ ಹುಡುಗರನ್ನು ಬಳಸಿಕೊಂಡು ಶ್ರೀ ತನ್ನ ಪೋಷಕರನ್ನು ಹುಡುಕಲು ಯಶಸ್ವಿಯಾಗುತ್ತಾಳಾ? ಶ್ರೀ ಹೆತ್ತವರ ಹುಡುಕಾಟದಲ್ಲಿ ಭರತ-ಬಾಹುಬಲಿಯ ಪಾತ್ರವೇನು ಅನ್ನೋದೆ “ಶ್ರೀ ಭರತ ಬಾಹುಬಲಿ’ ಚಿತ್ರದ ಕಥೆ. ಅದೆಲ್ಲವನ್ನೂ ಒಂದಷ್ಟು ಕಮರ್ಶಿಯಲ್‌ ಅಂಶಗಳನ್ನು ಇಟ್ಟುಕೊಂಡು ತೆರೆಮೇಲೆ ತಂದಿದೆ ನಿರ್ದೇಶಕ ಮಂಜು ಮಾಂಡವ್ಯ ಆ್ಯಂಡ್‌ ಟೀಮ್‌. ಚಿತ್ರದ ಹೆಸರೇಹೇಳುವಂತೆ ಶ್ರೀ, ಭರತ ಮತ್ತು ಬಾಹುಬಲಿ ಅನ್ನೋ ಮೂರು ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಚಿತ್ರದ ಮೊದಲರ್ಧ ಒಂದಷ್ಟು ತರಲೆ, ಅನಪೇಕ್ಷಿತ ಹಾಸ್ಯ ದೃಶ್ಯಗಳು ಚಿತ್ರದ ವೇಗಕ್ಕೆ ಅಲ್ಲಲ್ಲಿ ಬ್ರೇಕ್‌ ಹಾಕುತ್ತ ಸಾಗುವುದರಿಂದ ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಆದರೆ ದ್ವಿತಿಯಾರ್ಧದ ನಂತರ ಚಿತ್ರಕಥೆ ಒಂದಷ್ಟು ಗಂಭೀ ರವಾಗಿ ನೋಡುಗರನ್ನು ಹಿಡಿದು ಕೂರಿಸುತ್ತದೆ. ನಿರ್ದೇಶಕರು ಮೊದ ಲರ್ಧದ ನಿರೂಪಣೆ ಕೊಂಚ ಬಿಗಿಯಾಗಿಸಿದ್ದರೆ, ಚಿತ್ರ ನೋಡುಗರಿಗೆ ಇನ್ನಷ್ಟು ಪರಿಣಾಮಕಾರಿ ಯಾಗುವ ಸಾಧ್ಯತೆಗಳಿದ್ದವು.

ಇನ್ನು ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಅಡಿಯಿಟ್ಟಿರುವ ಮಂಜು ಮಾಂಡವ್ಯ ನಿರ್ದೇಶನ ಮತ್ತು ನಟನೆ ಎರಡನ್ನೂ ಸಮಾನವಾಗಿ ನಿರ್ವಹಿಸಿದ್ದಾರೆ. ಚಿತ್ರದ ದ್ವಿತಿಯಾರ್ಧ ಮಂಜು ಮಾಂಡವ್ಯ ಮತ್ತು ನಾಯಕಿ ಸಾರಾ ಹರೀಶ್‌ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್‌ ಆಗಿದೆ. ನೋಡುಗರಿಗೆ ಚಿಕ್ಕಣ್ಣ ಕಾಮಿಡಿ ನಿರೀಕ್ಷಿತ ಮಜಾ ಕೊಡುವುದು ಕಷ್ಟ. ಉಳಿದಂತೆ ಚಿತ್ರದ ಇತರ ಕಲಾವಿದರು ನಿರ್ದೇಶಕರ ಅಣತಿಯಂತೆ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ.

ಚಿತ್ರದ ಛಾಯಾಗ್ರಹಣ, ಸಂಕಲನ ತೆರೆಮೇಲೆ ಚಿತ್ರದ ಅಂದವನ್ನು ಹೆಚ್ಚಿಸಿವೆ. ಮಣಿಕಾಂತ್‌ ಕದ್ರಿ ಸಂಗೀತದ ಎರಡು ಹಾಡುಗಳು ತಲೆದೂಗುವಂತಿವೆ. ಒಟ್ಟಾರೆ ಕೆಲವೊಂದು ತರ್ಕಗಳನ್ನು ಬದಿಗಿಟ್ಟು ನೋಡುವುದಾದರೆ, ಲವ್‌, ಕಾಮಿಡಿ, ಸೆಂಟಿಮೆಂಟ್‌, ಐಟಂ ಡ್ಯಾನ್ಸ್‌ ಹೀಗೆ ಎಲ್ಲ ಕಮರ್ಶಿಯಲ್‌ ಎಲಿಮೆಂಟ್ಸ್‌ನ್ನು ಇಟ್ಟುಕೊಂಡು ಬಂದಿರುವ “ಶ್ರೀ ಭರತ ಬಾಹುಬಲಿ’ಯಿಂದ ಕನಿಷ್ಟ ಮನರಂಜನೆಗೆ ಖಾತ್ರಿ ಎನ್ನಲು ಅಡ್ಡಿಯಿಲ್ಲ.

ಚಿತ್ರ: ಶ್ರೀ ಭರತ ಬಾಹುಬಲಿ
ನಿರ್ಮಾಣ: ಐಶ್ವರ್ಯ ಪ್ರೊಡಕ್ಷನ್ಸ್‌
ನಿರ್ದೇಶನ: ಮಂಜು ಮಾಂಡವ್ಯ
ತಾರಾಗಣ: ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಹರೀಶ್‌, ಶ್ರೀನಿವಾಸ ಮೂರ್ತಿ, ಭವ್ಯಾ, ಹರೀಶ್‌ ರಾಯ್‌, ಸೇತುರಾಮ್‌ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.