ಲೂಟಿ ಮಾಡಿದ್ರೂ ಇಲ್ಲೇನೂ ಸಿಗಲ್ಲ!


Team Udayavani, Dec 2, 2018, 11:23 AM IST

looti.jpg

ಹೈದರಾಬಾದ್‌ ಬ್ಯಾಂಕೊಂದರಲ್ಲಿ ಮಧ್ಯರಾತ್ರಿ “ಲೂಟಿ’ಯಾಗುತ್ತದೆ. ಆ ಲೂಟಿಕೋರರು ದೋಚಿದ ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಕ್ಷಣ ಸಿಗುತ್ತದೆ. ಕೂಡಲೇ ಎಸಿಪಿ ದುರ್ಗಾ ಭವಾನಿ ಆ ಲೂಟಿಕೋರರ ಬೆನ್ನು ಹತ್ತುತ್ತಾಳೆ. ಹಾಗಾದ್ರೆ ಆ ಹಣವನ್ನು “ಲೂಟಿ’ ಮಾಡಿದವರು ಯಾರು..? “ಲೂಟಿ’ ಮಾಡೋಕೆ ಅವರು ಮಾಡಿದ ಪ್ಲಾನ್‌ ಏನು..? ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ ಲೂಟಿಕೋರರನ್ನು ದುರ್ಗಾ ಭವಾನಿ ಖೆಡ್ಡಾಕ್ಕೆ ಬೀಳಿಸುತ್ತಾಳಾ..? ಅಥವಾ ಲೂಟಿಕೋರರಿಗೆ ದೋಚಿದ ಹಣ ದಕ್ಕುತ್ತದೆಯಾ..? ಇದೇ “ಲೂಟಿ’ ಚಿತ್ರದ ಕ್ಲೈಮ್ಯಾಕ್ಸ್‌. 

ಇನ್ನು “ಲೂಟಿ’ ಚಿತ್ರದ ಕಥಾಹಂದರದ ಕನ್ನಡಕ್ಕೇನೂ ಹೊಸದಲ್ಲ. ಬ್ಯಾಂಕ್‌ ಮತ್ತಿತರ ಹಣದ ಮೂಲದ ಲೂಟಿಗೆ ಸ್ಕೆಚ್‌ ಹಾಕುವುದು. ಅದನ್ನು ಲೂಟಿ ಮಾಡಿ ಪರಾರಿಯಾಗುವುದು. ಕೊನೆಗೆ ಅದರಿಂದ ಪಾರಾಗುವುದು ಅಥವಾ ಪ್ರಾಣ ಬಿಡುವುದು ಇಂತಹ ಲೆಕ್ಕವಿಲ್ಲವಿಲ್ಲದಷ್ಟು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದು ಹೋಗಿವೆ. ಆ ಚಿತ್ರಗಳ ಸಾಲಿಗೆ ಈ ವಾರ “ಲೂಟಿ’ ಚಿತ್ರ ಹೊಸ ಸೇರ್ಪಡೆ ಎಂಬುದನ್ನು ಬಿಟ್ಟರೆ ಚಿತ್ರದ ಕಥೆ, ಚಿತ್ರಕಥೆಯ ಬಗ್ಗೆ ವಿಶೇಷವಾಗಿ ಹೇಳುವಂಥದ್ದೇನಿಲ್ಲ.

ಸರಳವಾಗಿ ಹೇಳಬಹುದಾದ ಕಥೆಯೊಂದಕ್ಕೆ ಇಲ್ಲಸಲ್ಲದ ಸಂಗತಿಗಳನ್ನು ಸೇರಿಸಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಿರ್ದೇಶಕರು, ಥಿಯೇಟರ್‌ನಲ್ಲಿ ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುತ್ತಾರೆ. ಚಿತ್ರದ ಬಹುತೇಕ ದೃಶ್ಯಗಳನ್ನು ನೋಡಿದರೆ, ಚಿತ್ರವನ್ನು ಯಾವ ಶೈಲಿಯಲ್ಲಿ ಪ್ರೇಕ್ಷಕರ ಮುಂದಿಡಬೇಕು ಎಂಬ ಸ್ಪಷ್ಟತೆಯೇ ನಿರ್ದೇಶಕರಿಗೆ ಇಲ್ಲದಂತೆ ಕಾಣುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, “ಲೂಟಿ’ ಅನ್ನು “ಚಿತ್ರ’ ಎನ್ನುವ ಬದಲು ಹತ್ತಾರು ಚಿತ್ರಗಳನ್ನು ಸೇರಿಸಿ ಮಾಡಿದ “ಚಿತ್ರನ್ನ’ ಎನ್ನಬಹುದು.

ಬಹು ವರ್ಷಗಳ ನಂತರ “ಲೂಟಿ’ ಚಿತ್ರದ ಮೂಲಕ ಎಸಿಪಿ ದುರ್ಗಾ ಭವಾನಿ ಪಾತ್ರದಲ್ಲಿ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿರುವ ನಟಿ ಇಶಾ ಕೊಪ್ಪಿಕರ್‌, ತಮ್ಮ ಪಾತ್ರ ಪೋಷಣೆಗೆ ಸಾಕಷ್ಟು ಪರಿಶ್ರಮ ಹಾಕಿರುವುದು ಕಾಣುತ್ತದೆ. ಆದರೆ ಅತ್ಯಂತ ಪೇಲವ ದೃಶ್ಯಗಳಿಂದಾಗಿ, ಅದ್ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಪರಿಣಾಮಕಾರಿಯಾಗಿ ಉಳಿಯುವುದಿಲ್ಲ. ಉಳಿದಂತೆ ಧ್ರುವ ಶರ್ಮ, ಶ್ವೇತಾ ಪಂಡಿತ್‌, ಕಡ್ಡಿಪುಡಿ ಚಂದ್ರು, ಸಾಧುಕೋಕಿಲ, ನರ್ಸ್‌ ಜಯಲಕ್ಷ್ಮೀ, ಮೋಹನ್‌ ಜುನೇಜಾ ಪಾತ್ರಗಳ ಅಗತ್ಯವೇನಿತ್ತು ಎಂಬುದು ದೇವರೆ ಬಲ್ಲ.

ಬಹುದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದ್ದರೂ, ಯಾವ ಪಾತ್ರಗಳನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಚಿತ್ರದ ಛಾಯಾಗ್ರಹಣ, ಸಂಕಲನ, ಸಂಗೀತ ಯಾವುದರ ಬಗ್ಗೆಯೂ ಮಾತನಾಡದಿರುವುದೇ ಒಳಿತು. ಒಟ್ಟಾರೆ ಸಾಕಷ್ಟು ಪೂರ್ವ ಸಿದ್ಧತೆ, ಹೊಸತನದ ತುಡಿತವಿದ್ದರೆ ಮಾತ್ರ ಪ್ರೇಕ್ಷಕರ ಮನಸ್ಸು ಮತ್ತು ಬಾಕ್ಸಾಫೀಸ್‌ ಎರಡನ್ನೂ ಲೂಟಿ ಮಾಡಬಹುದು ಎಂಬ ವಾಸ್ತವವನ್ನು ಲೂಟಿ ಚಿತ್ರತಂಡ ಮರೆತಂತಿದೆ

ಚಿತ್ರ: ಲೂಟಿ
ನಿರ್ದೇಶನ: ಗಿರೀಶ್‌ ಕಂಪ್ಲಾಪುರ್‌ 
ನಿರ್ಮಾಣ: ನಿರಂಜನ್‌ ಎನ್‌.ಎಂ
ತಾರಾಗಣ: ಇಶಾ ಕೊಪ್ಪಿಕರ್‌, ಧ್ರುವ ಶರ್ಮ, ದಿಲೀಪ್‌ ರಾಜ್‌, ಕಡ್ಡಿಪುಡಿ ಚಂದ್ರು, ಶ್ವೇತಾ ಪಂಡಿತ್‌, ಸಾಧುಕೋಕಿಲ, ಮೋಹನ್‌ ಜುನೇಜಾ ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌ 

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.