ಮೆಲೋಡಿ ಡ್ರಾಮಾ movie review: ಪ್ರೀತಿಯ ನಡುವೆ ದ್ವೇಷದ ಆಟ


Team Udayavani, Jun 11, 2023, 3:39 PM IST

melody

ಅವಳು ಮಧ್ಯಮ ವರ್ಗದ ಕುಡುಂಬದ ಭಾವುಕ ಹುಡುಗಿ. ಇವನು ರಫ್ ಆ್ಯಂಡ್‌ ಟಫ್ ಹುಡುಗ. ಆದರೆ ಇವನಿಗೆ ಅವಳೇಬೇಕೆಂಬ ಉತ್ಕಟ ಬಯಕೆ. ಹೇಗೋ ಕಾಡಿಸಿ, ಪೀಡಿಸಿ ಕೊನೆಗೂ ಒಲಿಸಿಕೊಂಡ ಹುಡುಗಿಯೊಬ್ಬಳು, ಬದಲಾದ ಸನ್ನಿವೇಶದಲ್ಲಿ ತಾನು ವರಿಸಿದ ಹುಡುಗನ ಮುಖ ನೋಡಲಾರದಷ್ಟು ದ್ವೇಷ ಸಾಧಿಸುತ್ತಾಳೆ.

“ಮೆಲೋಡಿ’ಯಾಗಿ ಸಾಗಬೇಕಿದ್ದ ಲವ್‌ ಟ್ರ್ಯಾಕ್‌ನಲ್ಲಿ ನಿಧಾನವಾಗಿ ಮೌನ ಆವರಿಸಿಕೊಳ್ಳುತ್ತದೆ. ಹಾಗಾದರೆ ನಿಜಕ್ಕೂ ಈ ಹುಡುಗ – ಹುಡುಗಿಯ ಲವ್‌ ಟ್ರ್ಯಾಕ್‌ನಲ್ಲಿ ಅಂಥದ್ದು ಆಗಿದ್ದಾದರೂ ಏನು? ಕೊನೆಗೂ “ನಾನೊಂದು ತೀರ.. ನೀನೊಂದು ತೀರ’ ಅಂತಿರುವ ಈ ಲವ್‌ ಟ್ರ್ಯಾಕ್‌ ಕ್ಷೇಮವಾಗಿ ದಡ ಸೇರುತ್ತದೆಯಾ? ಇದೇ ಈ ವಾರ ತೆರೆಗೆ ಬಂದಿರುವ “ಮೆಲೋಡಿ ಡ್ರಾಮಾ’ ಸಿನಿಮಾದ ಕಥೆಯ ಒಂದು ಎಳೆ.

ಇಷ್ಟೆಲ್ಲ ಹೇಳಿದ ಮೇಲೆ ಇದೊಂದು ಲವ್‌ ಸ್ಟೋರಿ, ಇದರಲ್ಲಿ ಪ್ರೀತಿಗಿಂತ ಕೋಪ-ತಾಪಕ್ಕೆ ಜಾಗ ಜಾಸ್ತಿ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. “ಮೆಲೋಡಿ ಡ್ರಾಮಾ’ದ ಕಥೆಯ ಒಂದು ಎಳೆ ಚೆನ್ನಾಗಿದ್ದರೂ, ಅದನ್ನು ಪರಿಣಾಮಕಾರಿ ಯಾಗಿ ಪ್ರೇಕ್ಷಕರ ಮುಂದಿಡುವಲ್ಲಿ ನಿರ್ದೇಶಕರು ಸೋತಂತಿದೆ.

ಪ್ರೇಕ್ಷಕರಿಗೆ ತೆರೆಮೇಲೆ “ಕರ್ನಾಟಕ ದರ್ಶನ’ ಮಾಡಿಸುವ ಭರದಲ್ಲಿ ನಾಯಕ-ನಾಯಕಿಯನ್ನು ಎನ್‌ಫೀಲ್ಡ್‌ ಬೈಕ್‌ ಹತ್ತಿಸುವ ನಿರ್ದೇಶಕರು ಮೈಸೂರಿನಿಂದ ಮಡಿಕೇರಿ, ಅಲ್ಲಿಂದ ಮಂಗಳೂರು. ಅಲ್ಲಿಂದ ಉತ್ತರ ಕನ್ನಡ ಅಲ್ಲಿಂದ ಹುಬ್ಬಳ್ಳಿ-ಧಾರವಾಡ ಮೂಲಕ ವಿಜಯಪುರಕ್ಕೆ ತಲುಪಿಸಿ ಕೊನೆಗೆ ಗೋಲ್‌ಗ‌ುಂಬಜ್‌ ಮತ್ತೆ ಅಲ್ಲಿಂದ ಜೋಗಫಾಲ್ಸ್‌ಗೆ ಕರೆತಂದು ಓಡಾಡಿಸಿ ಕೊನೆಗೊಂದು ಕ್ಲೈಮ್ಯಾಕ್ಸ್‌ ಕೊಡುತ್ತಾರೆ. ಸರಳವಾದ ಮನಮುಟ್ಟುವ ಪ್ರೇಮಕಥೆಯ ಸಿನಿಮಾವೊಂದಕ್ಕೆ ಅತಿಯಾದ ಪಾತ್ರಗಳು, ಅತಿರೇಕವೆನಿಸುವ ಸಂಭಾಷಣೆಗಳೇ ಅಲ್ಲಲ್ಲಿ ಮಾರಕವಾಗಿ ಪರಿಣಮಿಸಿದಂತಿದೆ.

ಇನ್ನು ನಾಯಕ ನಟ ಸತ್ಯ ಸಾಕಷ್ಟು ದೃಶ್ಯಗಳಲ್ಲಿ ಇನ್ನಷ್ಟು ಪಳಗಬೇಕು ಎನಿಸಿದರೆ, ನಾಯಕಿ ಸುಪ್ರೀತಾ ಇನ್ನೂ ಧಾರಾವಾಹಿ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಉಳಿದಂತೆ ರಂಗಾಯಣ ರಘು, ಅನು ಪ್ರಭಾಕರ್‌, ಚೇತನ್‌ ಚಂದ್ರ, ಶೋಭರಾಜ್‌ ಪಾವೂರ್‌ ಹೀಗೆ ಹತ್ತಾರು ಚಿರಪರಿಚಿತ ಕಲಾವಿದರ ಬೃಹತ್‌ ತಾರಾಗಣವಿದ್ದರೂ ಬಹುತೇಕ ಪಾತ್ರಗಳ ಹಿನ್ನೆಲೆ ನೋಡುಗರಿಗೆ ಅಸ್ಪಷ್ಟವಾಗಿಯೇ ಕಾಣುತ್ತದೆ. ಉಳಿದಂತೆ ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಕರ್ನಾಟಕದ ಹಸಿರ ಸೊಬಗನ್ನು ಕಣ್ಣಿಗೆ ಹಿತವೆನಿಸುವಂತೆ ಮಾಡುತ್ತದೆ.

ಹಿನ್ನೆಲೆ ಸಂಗೀತ ಮತ್ತು ಒಂದೆರಡು ಹಾಡುಗಳು “ಕರ್ನಾಟಕ ದರ್ಶನ’ದ ಪ್ರಯಾಸವನ್ನು ಅಲ್ಲಲ್ಲಿ ಕಡಿಮೆ ಮಾಡುವಂತಿದೆ. ಒಟ್ಟಾರೆ “ಮೆಲೋಡಿ ಡ್ರಾಮಾ’ ಒಂದೊಳ್ಳೆ ಕಥೆಯಿರುವ ಆದರೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಒಮ್ಮೆ ನೋಡಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.