ಗಾಳಿಪಟ-2 ಚಿತ್ರ ವಿಮರ್ಶೆ: ಹಾರಾಟದ ಹುಡುಗರ ಗೆಲುವಿನ ಹೋರಾಟ


Team Udayavani, Aug 13, 2022, 10:05 AM IST

Yogaraj bhat’s Galipata 2 review

ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಜೊತೆಯಾದರೆ ಅಲ್ಲೊಂದು ಮಜವಾದ ಕಥೆ ಹುಟ್ಟುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಜೊತೆಗೊಂದು ಕಣ್ಣೀರಧಾರೆ… ಇವಿಷ್ಟು ಆ ಕಥೆಯಲ್ಲಿ ಮೇಲೈಸಿ, ರೆಕ್ಕೆ ಬಿಚ್ಚಿ ಕುಣಿಯುತ್ತದೆ. ಹಿಂದಿನ ಸಿನಿಮಾಗಳಲ್ಲಿ ಈ ಅಂಶಗಳೊಂದಿಗೆ ಸೈ ಎನಿಸಿಕೊಂಡಿದ್ದ ಜೋಡಿ ಈ ಬಾರಿ “ಗಾಳಿಪಟ-2′ ಮೂಲಕ ಮತ್ತೂಮ್ಮೆ ಮೋಡಿ ಮಾಡಿದೆ. ಈ ಚಿತ್ರವನ್ನು ಒಂದೇ ವಾಕ್ಯದಲ್ಲಿ ವಿಮರ್ಶಿಸುವುದಾದರೆ ಒಂದು ಫ‌ನ್‌ ರೈಡ್‌…. ಆ ಮಟ್ಟಿಗೆ ಯೋಗರಾಜ್‌ ಭಟ್‌ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಮೂವರು ಯುವಕರ ಕಥೆ ಇಲ್ಲಿದೆ. ಆ ಮೂವರ ಮೈಂಡ್‌ಸೆಟ್‌, ಮ್ಯಾನರಿಸಂ, ಅವರ ಬೆನ್ನಿಗಿರುವ ಒಂದೊಂದು ಲವ್‌ಸ್ಟೋರಿ, ಗ್ಯಾಪಲ್ಲಿ ಬಂದು ಹೋಗುವ ಮೇಷ್ಟ್ರ ಕನ್ನಡ ಹಾಗೂ ಪುತ್ರ ಪ್ರೇಮ ಹಾಗೂ ಇವೆಲ್ಲವನ್ನು ಓವರ್‌ಟೇಕ್‌ ಮಾಡಿ, ಪ್ರೇಕ್ಷಕನ ಎದೆಗೆ ನಾಟುವ ಒಂದು ಎಮೋಶನಲ್‌ ಎಪಿಸೋಡ್‌ … ಇಷ್ಟು ಅಂಶಗಳನ್ನಿಟ್ಟುಕೊಂಡು ಭಟ್ಟರು “ಗಾಳಿಪಟ-2’ವನ್ನು ಸುಸೂತ್ರವಾಗಿ ಹಾರಿಸಿದ್ದಾರೆ.

ಕಥೆಗಿಂತ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಸಿನಿಮಾ ಮುಂದುವರೆಸಿಕೊಂಡು ಹೋಗುವ ಕಲೆ ಭಟ್ಟರಿಗೆ ಚೆನ್ನಾಗಿಯೇ ಸಿದ್ಧಿಸಿದೆ ಮತ್ತು ಅದು ಅವರ ಹಿಂದಿನ ಸಿನಿಮಾಗಳಲ್ಲೂ ಸಾಬೀತಾಗಿದೆ. ಇಲ್ಲೂ ಆ ತರಹದ “ತರ್ಲೆ’ ಸನ್ನಿವೇಶಗಳು ಪ್ರೇಕ್ಷಕನಿಗೆ ಖುಷಿ ಕೊಡುತ್ತವೆ.

ಮೊದಲರ್ಧ ಕಾಲೇಜು ಹಿನ್ನೆಲೆಯಿಂದ ಆರಂಭವಾಗುವ ಕಥೆ ಜಾಲಿಯಾಗಿ ಸಾಗುತ್ತಲೇ, ದೊಡ್ಡ ತಿರುವಿಗೆ ನಾಂದಿಯಾಡುತ್ತದೆ. ನಗುವ ಹುಡುಗನ ಅಂತರಾಳದಲ್ಲಿ ಹುದುಗಿರುವ ಘಟನೆ, ಮಗನನ್ನು ಕಳೆದುಕೊಂಡ ತಂದೆಯ ಚಡಪಡಿಕೆ… ಈ ಎರಡು ಅಂಶಗಳನ್ನು ಭಟ್ಟರು ಜೊತೆ ಜೊತೆಯಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಮುಖ್ಯವಾಗಿ ಭಟ್ಟರು ಸೃಷ್ಟಿಸಿರುವ ಮೂವರು ಹುಡುಗರ ಪಾತ್ರಗಳೇ ಮಜವಾಗಿವೆ. ಸಿನಿಮಾ ದುದ್ದಕ್ಕೂ ಪ್ರೇಕ್ಷಕನನ್ನು ನಗಿಸುತ್ತಾ “ಎಚ್ಚರ’ವಾಗಿಡುವಲ್ಲಿನ ಆ ಪಾತ್ರಗಳ ಪ್ರಯತ್ನ ಯಶಸ್ವಿಯಾಗಿದೆ ಕೂಡಾ. ಸಿನಿಮಾದ ದ್ವಿತೀಯಾರ್ಧ ಬಹುತೇಕ ವಿದೇಶದಲ್ಲೇ ನಡೆದಿದೆ. ಅದಕ್ಕೊಂದು ಕಾರಣವಿದೆ. ನಗುವಿನ ಹಾದಿಯಲ್ಲಿ ಸಾಗುವ ಸಿನಿಮಾವನ್ನು ನೋಡ ನೋಡುತ್ತಲೇ ಎಮೋಶನಲ್‌  ಜರ್ನಿಯಾಗಿ ಪರಿವರ್ತಿಸಿ ಬಿಡುತ್ತಾರೆ ಭಟ್ಟರು.

ಅಲ್ಲಿಂದ ಸಿನಿಮಾ ಮತ್ತಷ್ಟು ಗಂಭೀರವಾಗಿ ಸಾಗುತ್ತದೆ. ಇಲ್ಲಿ ಭಟ್ಟರ ಕಥೆಯ ಜೊತೆಗೆ ಹಾಡುಗಳು ಕೂಡಾ ಸಿನಿಮಾದ ಭಾವಕ್ಕೆ ಪೂರಕವಾಗಿದೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಬರುವ “ನಾವು ಬದುಕಿರಬಹುದು ಪ್ರಾಯಶಃ’ ಸಿನಿಮಾಕ್ಕೆ ಮತ್ತಷ್ಟು ಮೈಲೇಜ್‌ ನೀಡಿದೆ.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ನಾಯಕ ನಟರಾದ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌. ಈ ಮೂವರ ಕಾಮಿಡಿ ಟೈಮಿಂಗ್‌, ಜಾಲಿರೈಡ್‌, ಜೊತೆಗೆ ಎಮೋನಲ್‌ ಜರ್ನಿ… ಎಲ್ಲವೂ ಖುಷಿ ಕೊಡುತ್ತದೆ. ಸಿನಿಮಾ ಕ್ಕೊಂದು ಟರ್ನಿಂಗ್‌ ಪಾಯಿಂಟ್‌ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಂತ್‌ ನಾಗ್‌ ಅವರದು ಎಂದಿನಂತೆ ತೂಕದ ಅಭಿನಯ. ನಾಯಕಿಯರಾದ ವೈಭವಿ, ಶರ್ಮಿಳಾ, ಸಂಯುಕ್ತಾ ಮೆನನ್‌ ಸಿನಿಮಾದ ಗ್ಲಾಮರ್‌ ಟಚ್‌. ಉಳಿದಂತೆ ರಂಗಾಯಣ ರಘು, ಸುಧಾ ಬೆಳವಾಡಿ ಸೇರಿದಂತೆ ಇತರರು ನಟಿಸಿದ್ದಾರೆ.

ಅರ್ಜುನ್‌ ಜನ್ಯಾ ಸಂಗೀತ “ಗಾಳಿಪಟ’ದ ಹಾರಾಟವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಿದಿದೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣದಲ್ಲಿ ಸೊಬಗು- ಸೊಗಸು ಎರಡೂ ತುಂಬಿದೆ. ಒಂದು ಮಜವಾದ ಸಿನಿಮಾವನ್ನು ಕುಟುಂಬ ಸಮೇತ ನೋಡಬಯಸುವವರಿಗೆ “ಗಾಳಿಪಟ-2′ ಒಂದೊಳ್ಳೆಯ ಆಯ್ಕೆಯಾಗಬಹುದು

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vidyarthi Vidyarthiniyare Movie Review

Vidyarthi Vidyarthiniyare Review;ವಿದ್ಯಾರ್ಥಿಗಳ ಆಟದೊಳಗೊಂದು ಪಾಠ

Not Out movie review

Not Out movie review; ಮಧ್ಯಮ ಹುಡುಗನ ಕಾಸು-ಕನಸು

Hejjaru Movie Review

Hejjaru Movie Review; ಹೆಜ್ಜಾರು ಎಂಬ ಹೊಸ ಕೌತುಕ

Hiranya

Hiranya Review; ಆ್ಯಕ್ಷನ್‌-ಥ್ರಿಲ್ಲರ್‌ನಲ್ಲಿ ನಿರ್ದಯಿ ಪಯಣ

Jigar movie review

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.