ಗಾಳಿಪಟ-2 ಚಿತ್ರ ವಿಮರ್ಶೆ: ಹಾರಾಟದ ಹುಡುಗರ ಗೆಲುವಿನ ಹೋರಾಟ


Team Udayavani, Aug 13, 2022, 10:05 AM IST

Yogaraj bhat’s Galipata 2 review

ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಜೊತೆಯಾದರೆ ಅಲ್ಲೊಂದು ಮಜವಾದ ಕಥೆ ಹುಟ್ಟುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಜೊತೆಗೊಂದು ಕಣ್ಣೀರಧಾರೆ… ಇವಿಷ್ಟು ಆ ಕಥೆಯಲ್ಲಿ ಮೇಲೈಸಿ, ರೆಕ್ಕೆ ಬಿಚ್ಚಿ ಕುಣಿಯುತ್ತದೆ. ಹಿಂದಿನ ಸಿನಿಮಾಗಳಲ್ಲಿ ಈ ಅಂಶಗಳೊಂದಿಗೆ ಸೈ ಎನಿಸಿಕೊಂಡಿದ್ದ ಜೋಡಿ ಈ ಬಾರಿ “ಗಾಳಿಪಟ-2′ ಮೂಲಕ ಮತ್ತೂಮ್ಮೆ ಮೋಡಿ ಮಾಡಿದೆ. ಈ ಚಿತ್ರವನ್ನು ಒಂದೇ ವಾಕ್ಯದಲ್ಲಿ ವಿಮರ್ಶಿಸುವುದಾದರೆ ಒಂದು ಫ‌ನ್‌ ರೈಡ್‌…. ಆ ಮಟ್ಟಿಗೆ ಯೋಗರಾಜ್‌ ಭಟ್‌ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಮೂವರು ಯುವಕರ ಕಥೆ ಇಲ್ಲಿದೆ. ಆ ಮೂವರ ಮೈಂಡ್‌ಸೆಟ್‌, ಮ್ಯಾನರಿಸಂ, ಅವರ ಬೆನ್ನಿಗಿರುವ ಒಂದೊಂದು ಲವ್‌ಸ್ಟೋರಿ, ಗ್ಯಾಪಲ್ಲಿ ಬಂದು ಹೋಗುವ ಮೇಷ್ಟ್ರ ಕನ್ನಡ ಹಾಗೂ ಪುತ್ರ ಪ್ರೇಮ ಹಾಗೂ ಇವೆಲ್ಲವನ್ನು ಓವರ್‌ಟೇಕ್‌ ಮಾಡಿ, ಪ್ರೇಕ್ಷಕನ ಎದೆಗೆ ನಾಟುವ ಒಂದು ಎಮೋಶನಲ್‌ ಎಪಿಸೋಡ್‌ … ಇಷ್ಟು ಅಂಶಗಳನ್ನಿಟ್ಟುಕೊಂಡು ಭಟ್ಟರು “ಗಾಳಿಪಟ-2’ವನ್ನು ಸುಸೂತ್ರವಾಗಿ ಹಾರಿಸಿದ್ದಾರೆ.

ಕಥೆಗಿಂತ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಸಿನಿಮಾ ಮುಂದುವರೆಸಿಕೊಂಡು ಹೋಗುವ ಕಲೆ ಭಟ್ಟರಿಗೆ ಚೆನ್ನಾಗಿಯೇ ಸಿದ್ಧಿಸಿದೆ ಮತ್ತು ಅದು ಅವರ ಹಿಂದಿನ ಸಿನಿಮಾಗಳಲ್ಲೂ ಸಾಬೀತಾಗಿದೆ. ಇಲ್ಲೂ ಆ ತರಹದ “ತರ್ಲೆ’ ಸನ್ನಿವೇಶಗಳು ಪ್ರೇಕ್ಷಕನಿಗೆ ಖುಷಿ ಕೊಡುತ್ತವೆ.

ಮೊದಲರ್ಧ ಕಾಲೇಜು ಹಿನ್ನೆಲೆಯಿಂದ ಆರಂಭವಾಗುವ ಕಥೆ ಜಾಲಿಯಾಗಿ ಸಾಗುತ್ತಲೇ, ದೊಡ್ಡ ತಿರುವಿಗೆ ನಾಂದಿಯಾಡುತ್ತದೆ. ನಗುವ ಹುಡುಗನ ಅಂತರಾಳದಲ್ಲಿ ಹುದುಗಿರುವ ಘಟನೆ, ಮಗನನ್ನು ಕಳೆದುಕೊಂಡ ತಂದೆಯ ಚಡಪಡಿಕೆ… ಈ ಎರಡು ಅಂಶಗಳನ್ನು ಭಟ್ಟರು ಜೊತೆ ಜೊತೆಯಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಮುಖ್ಯವಾಗಿ ಭಟ್ಟರು ಸೃಷ್ಟಿಸಿರುವ ಮೂವರು ಹುಡುಗರ ಪಾತ್ರಗಳೇ ಮಜವಾಗಿವೆ. ಸಿನಿಮಾ ದುದ್ದಕ್ಕೂ ಪ್ರೇಕ್ಷಕನನ್ನು ನಗಿಸುತ್ತಾ “ಎಚ್ಚರ’ವಾಗಿಡುವಲ್ಲಿನ ಆ ಪಾತ್ರಗಳ ಪ್ರಯತ್ನ ಯಶಸ್ವಿಯಾಗಿದೆ ಕೂಡಾ. ಸಿನಿಮಾದ ದ್ವಿತೀಯಾರ್ಧ ಬಹುತೇಕ ವಿದೇಶದಲ್ಲೇ ನಡೆದಿದೆ. ಅದಕ್ಕೊಂದು ಕಾರಣವಿದೆ. ನಗುವಿನ ಹಾದಿಯಲ್ಲಿ ಸಾಗುವ ಸಿನಿಮಾವನ್ನು ನೋಡ ನೋಡುತ್ತಲೇ ಎಮೋಶನಲ್‌  ಜರ್ನಿಯಾಗಿ ಪರಿವರ್ತಿಸಿ ಬಿಡುತ್ತಾರೆ ಭಟ್ಟರು.

ಅಲ್ಲಿಂದ ಸಿನಿಮಾ ಮತ್ತಷ್ಟು ಗಂಭೀರವಾಗಿ ಸಾಗುತ್ತದೆ. ಇಲ್ಲಿ ಭಟ್ಟರ ಕಥೆಯ ಜೊತೆಗೆ ಹಾಡುಗಳು ಕೂಡಾ ಸಿನಿಮಾದ ಭಾವಕ್ಕೆ ಪೂರಕವಾಗಿದೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಬರುವ “ನಾವು ಬದುಕಿರಬಹುದು ಪ್ರಾಯಶಃ’ ಸಿನಿಮಾಕ್ಕೆ ಮತ್ತಷ್ಟು ಮೈಲೇಜ್‌ ನೀಡಿದೆ.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ನಾಯಕ ನಟರಾದ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌. ಈ ಮೂವರ ಕಾಮಿಡಿ ಟೈಮಿಂಗ್‌, ಜಾಲಿರೈಡ್‌, ಜೊತೆಗೆ ಎಮೋನಲ್‌ ಜರ್ನಿ… ಎಲ್ಲವೂ ಖುಷಿ ಕೊಡುತ್ತದೆ. ಸಿನಿಮಾ ಕ್ಕೊಂದು ಟರ್ನಿಂಗ್‌ ಪಾಯಿಂಟ್‌ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಂತ್‌ ನಾಗ್‌ ಅವರದು ಎಂದಿನಂತೆ ತೂಕದ ಅಭಿನಯ. ನಾಯಕಿಯರಾದ ವೈಭವಿ, ಶರ್ಮಿಳಾ, ಸಂಯುಕ್ತಾ ಮೆನನ್‌ ಸಿನಿಮಾದ ಗ್ಲಾಮರ್‌ ಟಚ್‌. ಉಳಿದಂತೆ ರಂಗಾಯಣ ರಘು, ಸುಧಾ ಬೆಳವಾಡಿ ಸೇರಿದಂತೆ ಇತರರು ನಟಿಸಿದ್ದಾರೆ.

ಅರ್ಜುನ್‌ ಜನ್ಯಾ ಸಂಗೀತ “ಗಾಳಿಪಟ’ದ ಹಾರಾಟವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಿದಿದೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣದಲ್ಲಿ ಸೊಬಗು- ಸೊಗಸು ಎರಡೂ ತುಂಬಿದೆ. ಒಂದು ಮಜವಾದ ಸಿನಿಮಾವನ್ನು ಕುಟುಂಬ ಸಮೇತ ನೋಡಬಯಸುವವರಿಗೆ “ಗಾಳಿಪಟ-2′ ಒಂದೊಳ್ಳೆಯ ಆಯ್ಕೆಯಾಗಬಹುದು

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.