Yuva Review: ಮಾಸ್‌ ಅಡ್ಡದಲ್ಲಿ ಯುವ ರೈಡ್‌


Team Udayavani, Mar 30, 2024, 9:53 AM IST

yuva movie review

ಆತ ಮುಂಗೋಪಿ. ಹೊಡೆದಾಟ ಎಂದರೆ ಹಿಂದೆ-ಮುಂದೆ ನೋಡೋ ವ್ಯಕ್ತಿಯಲ್ಲ. ನುಗ್ಗಿ ಹೊಡೆಯೋದೇ… ಇಂತಹ ರಫ್ ಅಂಡ್‌ ಟಫ್ ಹುಡುಗ ನೋಡ ನೋಡುತ್ತಲೇ ಮೃದುವಾಗುತ್ತಾನೆ. ಕೋಪವನ್ನು ನಿಯಂತ್ರಿಸಿಕೊಳ್ಳುತ್ತಾನೆ, ಗುರಿಮುಟ್ಟುವ ಹಾದಿಯಲ್ಲಿ ಹೆಜ್ಜೆ ಹಾಕುತ್ತಾನೆ. ಅಷ್ಟಕ್ಕೂ ಇಂತಹ ಬದಲಾವಣೆಗೆ ಕಾರಣವೇನು ಎಂಬ ಕುತೂಹಲ ನಿಮಗಿದ್ದರೆ ನೀವು “ಯುವ’ ನೋಡಬಹುದು.

“ಯುವ’ ಹೆಸರಿಗೆ ತಕ್ಕಂತೆ ಯೂತ್‌ಫ‌ುಲ್‌ ಸಿನಿಮಾ. ಕಾಲೇಜು ಕ್ಯಾಂಪಸ್‌ನಿಂದ ಆರಂಭವಾಗುವ ಕಥೆ ಮುಂದೆ ಜೀವನದ ಪಾಠ ಹೇಳುವಲ್ಲಿಗೆ ಬಂದು ನಿಲ್ಲುತ್ತದೆ. ನಿರ್ದೇಶಕ ಸಂತೋಷ್‌ ಆನಂದರಾಮ್‌ ಸಿನಿಮಾ ಎಂದರೆ ಅಲ್ಲೊಂದಿಷ್ಟು ಸೆಂಟಿಮೆಂಟ್‌ಗೆ ಅವಕಾಶವಿರುತ್ತದೆ, ಜೊತೆಗೆ ಒಂದಷ್ಟು ಮಾಸ್‌ ಡೈಲಾಗ್‌ಗಳಿಗೆ ಕೊರತೆ ಇರುವುದಿಲ್ಲ. ಅದರಲ್ಲೂ ತಂದೆ-ಮಗ ಸೆಂಟಿಮೆಂಟ್‌ ಎಂದರೆ ಅವರಿಗೆ ಅಚ್ಚುಮೆಚ್ಚು. ಅದನ್ನು ಈ ಸಿನಿಮಾ ದಲ್ಲೂ ಬಳಸಿಕೊಂಡಿದ್ದಾರೆ. ಮಾಸ್‌ ನಿಂದ ಆರಂಭವಾಗಿ ಕ್ಲಾಸ್‌ ಆಗಿ ಕೊನೆಗೊಳ್ಳುವ ಒಂದು ಸರಳ ಕಥೆಯನ್ನು ಹೇಳಿದ್ದಾರೆ.  ಇಲ್ಲಿ ಯುವ ಜನರ ಕನಸು, ಪ್ರೀತಿ, ಕಿಚ್ಚು, ತಂದೆ-ಮಗ ಬಾಂಧವ್ಯ ಎಲ್ಲವೂ ಇದೆ.

ಸಿನಿಮಾದ ಆರಂಭ ಮಂಗಳೂರಿನ ಕಾಲೇಜಿನಿಂದ ಆಗುತ್ತದೆ. ಇಲ್ಲಿ ಹೊಡೆದಾಟ, ಬಡಿದಾಟಗಳದ್ದೇ ಕಾರುಬಾರು. ಸಣ್ಣಸಣ್ಣ ವಿಷಯಗಳಿಗೂ ನಾಯಕ ಎದುರಾಳಿಗಳ ರಕ್ತಚಿಮ್ಮುವಂತೆ ಹೊಡೆಯುತ್ತಾನೆ. ಕಾಲೇಜು ಕಿರಿಕ್‌ಗಳು ಇಷ್ಟೊಂದು ರಕ್ತಪಾತಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆ ಬಂದರೂ ಬರಬಹುದು. ಆದರೆ, ಇದು ಕಮರ್ಷಿಯಲ್‌ ಸಿನಿಮಾ, ನೋ ಲಾಜಿಕ್‌, ಓನ್ಲಿ ಮ್ಯಾಜಿಕ್‌! ಇಲ್ಲಿ ನಾಯಕ ಯುವ ಅವರಿಗೆ ಮಾಸ್‌ ಇಮೇಜ್‌ ಕೊಡುವ ನಿರ್ದೇಶಕರ “ಉದ್ದೇಶ’ ಎದ್ದು ಕಾಣುತ್ತದೆ. ಅದೇ ಕಾರಣದಿಂದ ಇಡೀ ಸಿನಿಮಾದಲ್ಲಿ ಒಂದೇ ಒಂದು ದೃಶ್ಯದಲ್ಲೂ ನಾಯಕ ನಗುವುದಿಲ್ಲ. ಆ ಮಟ್ಟಿಗೆ “ರಫ್ ಅಂಡ್‌ ಟಫ್’!

ಮಂಗಳೂರು ಮಂದಿ ಮಾತು ಮಾತಿಗೆ “ಬೇವರ್ಸಿ’ ಎಂಬ ಪದವನ್ನು ಬಳಸುತ್ತಾರೆಂದು ನಿರ್ದೇ ಶಕರಿಗೆ ಅದ್ಯಾರು ಹೇಳಿದ್ದಾರೋ ಗೊತ್ತಿಲ್ಲ, ಈ ಸಿನಿಮಾ ದಲ್ಲಂತೂ ಮಂಗಳೂರು ಹಿನ್ನೆಲೆಯ ಪಾತ್ರಗಳು ಅದೆಷ್ಟೂ ಬಾರಿ “ಬೇವರ್ಸಿ’ ಎಂಬ ಪದ ಬಳಸಿವೆಯೋ ಲೆಕ್ಕವಿಲ್ಲ. ಅದಕ್ಕೆ ಸಾಥ್‌ ನೀಡಲು ಆಗಾಗ “ಅಡಬೆ’ಯೂ ಬಂದು ಹೋಗುತ್ತದೆ.

ಇನ್ನು, ಸಿನಿಮಾದ ಮೂಲಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ನಾಯಕನಲ್ಲದ ಬದಲಾವಣೆ, ಆತ ಎದುರಿಸುವ ಸಂದಿಗ್ಧತೆ, ಆತನ ಕನಸು, ಕುಸ್ತಿ… ಎಲ್ಲವೂ ಬಂದು ಹೋಗುತ್ತದೆ. ಈ ಅವಧಿಯಲ್ಲಿ ನಿರ್ದೇಶಕರು ಒಂದಷ್ಟು ದೃಶ್ಯಗಳನ್ನು ಪಾಸಿಂಗ್‌ ಶಾಟ್‌ ನಲ್ಲೇ ಮುಗಿಸಿದ್ದಾರೆ. ಆದರೆ, ಇಲ್ಲೂ ಸೆಂಟಿಮೆಂಟ್‌ ದೃಶ್ಯಗಳಿಗೆ ಕೊಡಬೇಕಾದ ಮಹತ್ವ ಕೊಟ್ಟಿದ್ದಾರೆ. ಜೊತೆಗೆ ಕ್ಲಾಸ್‌ ಆಡಿಯನ್ಸ್‌ಗೆ ಇಷ್ಟವಾಗುವ ಹಲವು ದೃಶ್ಯಗಳು ಇಲ್ಲಿವೆ. ಮಾಸ್‌-ಕ್ಲಾಸ್‌ ಪ್ಯಾಕೇಜ್‌ ಸಿನಿಮಾವಾಗಿ “ಯುವ’ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ನಾಯಕ ನಟ ಯುವ ಮೊದಲ ಚಿತ್ರದಲ್ಲೇ ಮಾಸ್‌ ಆಗಿ ಎಂಟ್ರಿಕೊಟ್ಟಿದ್ದಾರೆ. ಚಿತ್ರದಲ್ಲಿ ಬರುವ ಮಾಸ್‌, ಫೈಟ್‌ ದೃಶ್ಯಗಳಲ್ಲಿ ಹಾಗೂ ಡ್ಯಾನ್ಸ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಯುವ, ಸೆಂಟಿಮೆಂಟ್‌ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪಳಗಬೇಕು. ಉಳಿದಂತೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿ ಸಪ್ತಮಿ ಗೌಡಗೆ ಇಲ್ಲಿ ತುಂಬಾ ಗಮನ ಸೆಳೆಯುವ ಪಾತ್ರವೇನು ಇಲ್ಲ. ತಂದೆಯಾಗಿ ನಟಿಸಿರುವ ಅಚ್ಯುತ್‌ ಕುಮಾರ್‌ ಪಾತ್ರದಲ್ಲೊಂದು ಫೀಲ್‌ ಇದೆ. ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣವ್‌ ಕ್ಷೀರಸಾಗರ್‌ ಗಮನ ಸೆಳೆಯುತ್ತಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸುಧಾರಾಣಿ, ಹಿತ ನಟಿಸಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.