ಲಾಕ್ ಡೌನ್: ಬೋರ್ ಆಗ್ತಿದೆ – ಸ್ವಾಮೀಜಿ ಭೇಟಿಗಾಗಿ 3 ಜಿಲ್ಲೆ ದಾಟಿ ಹೋದ ಸಚಿವ!
ಆಶ್ರಮಕ್ಕೆ ಬಂದ ವೇಳೆ ಸಚಿವರ ಜತೆ ಇಡೀ ಸಿಬ್ಬಂದಿಗಳ ಸಮೂಹವೇ ಸೇರಿತ್ತು.
Team Udayavani, Apr 19, 2020, 8:52 PM IST
ನವದೆಹಲಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್, ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದರೂ ಸಹ ಚತ್ತೀಸ್ ಗಢದ ವಾಣಿಜ್ಯ ತೆರಿಗೆ ಮತ್ತು ಕೈಗಾರಿಕಾ ಮಂತ್ರಿ ಕವಾಸಿ ಲಖ್ಮಾ ತನಗೆ ಬೋರ್ (ಬೇಸರ) ಆಗುತ್ತಿದೆ ಎಂದು ರಾಯ್ ಪುರ್ ನಿಂದ 250 ಕಿಲೋ ಮೀಟರ್ ದೂರದಲ್ಲಿರುವ ರಾಜ್ ಗಢ್ ನಲ್ಲಿ ಸ್ವಯಂಘೋಷಿತ ಸ್ವಾಮೀಜಿಯನ್ನು ಭೇಟಿಯಾಗಿರುವುದಾಗಿ ವರದಿ ತಿಳಿಸಿದೆ.
ರಾಜ್ ಗಢದಲ್ಲಿರುವ ಕೋಸಾಮನಾರಾ ಆಶ್ರಮದ ಬಾಬಾ ಸತ್ಯನಾರಾಯಣ ಅವರನ್ನು ಭೇಟಿಯಾಗಲು ಸಂಪುಟ ಸಚಿವ ಲಖ್ಮಾ ಮೂರು ಜಿಲ್ಲೆಗಳನ್ನು ದಾಟಿ ಬಂದಿದ್ದರು. ಈ ವೇಳೆ ಸುದ್ದಿಗಾರರು ಪ್ರಶ್ನಿಸಿದರೆ, ರಾಯ್ ಪುರ್ ನಲ್ಲಿ ಕುಳಿತು ಬೇಜಾರಾಗಿತ್ತು. ಹೀಗಾಗಿ ಸ್ವಯಂಪ್ರೇರಿತ ಯೋಜನೆ ಸಿದ್ದಪಡಿಸಲು ರಾಯ್ ಗಢಕ್ಕೆ ಬಂದಿರುವುದಾಗಿ ತಿಳಿಸಿದ್ದರು.
ಬಾಬಾ ಸತ್ಯನಾರಾಯಣ ಅವರನ್ನು ಭೇಟಿಯಾಗಲು ಆಶ್ರಮಕ್ಕೆ ಬಂದ ವೇಳೆ ಸಚಿವರ ಜತೆ ಇಡೀ ಸಿಬ್ಬಂದಿಗಳ ಸಮೂಹವೇ ಸೇರಿತ್ತು. ಈ ವೇಳೆ ಲಖ್ಮಾ ಅವರು ಯಾವುದೇ ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುತ್ತಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸಚಿವರು ವಾಸ್ತವ್ಯ ಹೂಡಲು ತ್ರಿಸ್ಟಾರ್ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ವರದಿ ವಿವರಿಸಿದೆ.
ಚತ್ತೀಸ್ ಗಢದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ 36. ಏ.19ರವರೆಗೆ 24 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ