ದೇಶದ ಜಿಲ್ಲೆಗಳು ಹೇಳುತ್ತಿರುವ ಕೋವಿಡ್ ಕಥನ
Team Udayavani, May 21, 2020, 6:11 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದಲ್ಲಿನ ಕೋವಿಡ್ ಪ್ರಕರಣಗಳ ಬಗ್ಗೆ ಮಾತನಾಡುವಾಗೆಲ್ಲ ರಾಷ್ಟ್ರೀಯ ಅಥವಾ ರಾಜ್ಯಗಳ ಸ್ತರದಲ್ಲಿ ಅಂಕಿಸಂಖ್ಯೆಗಳನ್ನು ಅವಲೋಕಿಸಲಾಗುತ್ತದೆ.
ಆದರೆ, ನಿಜಕ್ಕೂ ಕೋವಿಡ್ ಹಾವಳಿ ಎಷ್ಟಿದೆ ಎನ್ನುವುದನ್ನು ಅರಿಯಲು ನಿರ್ದಿಷ್ಟ ಜಿಲ್ಲೆಗಳತ್ತ ಗಮನಹರಿಸಿದಾಗ ಅರಿವಾಗುತ್ತದೆ.
ಇಂದು ದೇಶದಲ್ಲಿನ ಅರ್ಧದಷ್ಟು ಸೋಂಕು ಹಾಗೂ ಮರಣ ಪ್ರಮಾಣವು ಕೇವಲ 5 ಜಿಲ್ಲೆಗಳಲ್ಲಿ ದಾಖಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳು ಸಂಪೂರ್ಣವಾಗಿ ಚೇತರಿಸಿಕೊಂಡರೆ, ಹಲವು ಅಪಾಯದತ್ತ ಮಗ್ಗಲು ಬದಲಿಸುತ್ತಿವೆ…
ರಾಜ್ಯದಲ್ಲಿ ಹೇಗಿದೆ ಸ್ಥಿತಿ?
ಮೇ 13ರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಅದರಲ್ಲೂ ಮುಖ್ಯವಾಗಿ ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಂದಾಗಿ ಈಗ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆಯಾಗಿಬಿಟ್ಟಿದೆ.
ಇದರ ನಡುವೆಯೇ ಗಮನಿಸಬೇಕಾದ ಸಂಗತಿಯೆಂದರೆ, ರಾಜ್ಯದಲ್ಲಿ ಚೇತರಿಕೆಯ ಪ್ರಮಾಣವೂ ಉತ್ತಮವಾಗಿದ್ದು, 38 ಪ್ರತಿಶತ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ, ರೋಗ ಬೆಳವಣಿಗೆ ದರವು 6 ಪ್ರತಿಶತದಷ್ಟಿರುವುದು ಕಳವಳಕಾರಿ ಸಂಗತಿ.
ಸಕ್ರಿಯ ಪ್ರಕರಣಗಳಲ್ಲಿ ಮಂಡ್ಯ ಮೊದಲು!
ಮಂಡ್ಯವೀಗ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿ ಬದಲಾಗಿದೆ. ಅನ್ಯರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ಸರಕಾರ ಅನುಮತಿಸಿದ ನಂತರ ಮಂಡ್ಯಕ್ಕೆ ಬಂದ ಅನೇಕರಲ್ಲಿ ಸೋಂಕು ದೃಢಪಟ್ಟಿದೆ.
ಬುಧವಾರದ ವೇಳೆಗೆ ಬೆಂ.ನಗರದಲ್ಲಿ (ಜಿಲ್ಲೆ) ಸೋಂಕಿತರ ಸಂಖ್ಯೆ 117 ಇತ್ತು, ಮಂಡ್ಯದಲ್ಲಿ 147ಕ್ಕೆ ಏರಿಕೆಯಾಯಿತು. ಈ ಸಂಖ್ಯೆ ನಿಯಂತ್ರಣಕ್ಕೆ ಬರುವುದೇ ಅಥವಾ ಏರುವುದೇ ಎಂಬ ಆತಂಕ ಈಗ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…