ಯಾವ ಕೆಲಸ ಎಷ್ಟು ಸುರಕ್ಷಿತ?


Team Udayavani, Jun 1, 2020, 3:12 PM IST

ಪಾಟ್ನಾ: ಇಲ್ಲಿನ ರಾಜೇಂದ್ರನಗರ ರೈಲು ನಿಲ್ದಾಣದಲ್ಲಿ ರೈಲಿನ ಬೋಗಿಗಳನ್ನು ಶುಚಿಗೊಳಿಸುತ್ತಿರುವ ಸ್ವಚ್ಛತಾ ಸಿಬಂದಿ.

ಲಂಡನ್‌ : ಲಾಕ್‌ಡೌನ್‌ ತೆರವಾಗುತ್ತಿರುವಂತೆ ಜನರು ಮೆಲ್ಲನೆ ಕಚೇರಿಯತ್ತ ಹೋಗಲು ತೊಡಗಿದ್ದಾರೆ. ಲಾಕ್‌ಡೌನ್‌ ದಿನಗಳಲ್ಲಿ ಮನೆಯಲ್ಲಿದ್ದುಕೊಂಡೇ ಕಚೇರಿಯ ಕೆಲಸ ಮಾಡಿದವರಿಗೆ ಮರಳಿ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲವು ದಿನ ಬೇಕಾಗಬಹುದು. ಇದೇ ವೇಳೆ ಕಚೇರಿಯಲ್ಲಿ ಅವರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯೂ ಇದೆ. ಹಲವು ಮಂದಿ ತಾವು ಮುಂದೆಯೂ ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಹೇಳ ತೊಡಗಿದ್ದಾರೆ.ಇದಕ್ಕೆ ಕೋವಿಡ್‌ ವೈರಸ್‌ನ ಭಯ ಒಂದೆಡೆಯಾಗಿದ್ದರೆ, ಮನೆಯಿಂದ ಕೆಲಸ ಮಾಡುವ ಅನುಕೂಲತೆಗಳಿಗೆ ಅವರು ಒಗ್ಗಿಕೊಂಡಿರುವುದು ಇನ್ನೊಂದು ಕಾರಣ. ಈ ಹಿನ್ನೆಲೆಯಲ್ಲಿ ಯಾವ ಕೆಲಸ ಮಾಡುವವರಿಗೆ ವೈರಸ್‌ ಭಯ ಹೆಚ್ಚು ಇದೆ ಎನ್ನುವ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಯಿತು.

ಕಚೇರಿಯೊಳಗಿನ ಕೆಲಸಗಳಲ್ಲಿ ಬಹುತೇಕ ನೌಕರರು ಕೈಯಳತೆಯ ದೂರದಲ್ಲಷ್ಟೇ ಇರುತ್ತಾರೆ. ಇಂಥ ಪರಿಸರದಲ್ಲಿ ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸದಿದ್ದರೆ ವೈರಸ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.  ಆರೋಗ್ಯ ಸೇವೆ ನೌಕರರು ವೈರಸ್‌ಗಳಿಗೆ ತುತ್ತಾಗುವ ಸಾಧ್ಯತೆಗಳ ಅತಿ ಹೆಚ್ಚು. ಏಕೆಂದರೆ ಇವರು ರೋಗಿಗಳ ಅತಿ ನಿಕಟ ಪರಿಸರದ ಲ್ಲಿರುತ್ತಾರೆ. ಇದೇ ವೇಳೆ ಕಲಾವಿದರು, ವಕೀಲರಂಥ ವೃತ್ತಿಯಲ್ಲಿರುವವರು, ಅಂತೆಯೇ ಮಾರ್ಕೆಟಿಂಗ್‌, ಎಚ್‌ಆರ್‌ ಮತ್ತು ಹಣಕಾಸು ಸಲಹೆಯಂಥ ಕ್ಷೇತ್ರದಲ್ಲಿರುವವರಿಗೆ ವೈರಸ್‌ ಅಪಾಯ ಅಷ್ಟಾಗಿ ಇರುವುದಿಲ್ಲ.

ಕ್ಲೀನರ್‌ಗಳು, ಬಂಧೀಖಾನೆ ಅಧಿಕಾರಿಗಳು, ಶವ ಸಂಸ್ಕಾರ ನಡೆಸುವವರು ವೈರಸ್‌ ಸೋಂಕಿಗೆ ತುತ್ತಾಗುವ ಹೈರಿಸ್ಕ್ ರೇಂಜ್‌ ನಲ್ಲಿದ್ದಾರೆ. ಬಾರ್‌ ಗಳ ಸಿಬಂದಿ, ಕ್ಷೌರಿಕರು, ನಟರು, ಟ್ಯಾಕ್ಸಿ ಚಾಲಕರು, ಇಟ್ಟಿಗೆ ತಯಾರಕರನ್ನು ಹೈರಿಸ್ಕ್ ರೇಂಜ್‌ಗೆ ಸೇರಿಸಲಾಗಿದೆ. ಬ್ರಿಟನ್‌ನ ಕೋವಿಡ್‌ ಮರಣದ ದಾಖಲೆಗಳನ್ನು ಅವಲೋಕಿಸಿದಾಗ ವೈದ್ಯಕೀಯ ಸಮುದಾಯದಲ್ಲಿ ದೊಡ್ಡ ಪ್ರಮಾಣದ ಸಾವುಗಳು ಸಂಭವಿಸಿಲ್ಲ. ಆದರೆ ಆರೋಗ್ಯ ಸೇವೆಯಲ್ಲಿರುವ ಇತರ ಸಿಬಂದಿಗಳ ಸಾವಿನ ಪ್ರಮಾಣ ಅಧಿಕವಿದೆ. ಇದಕ್ಕೆ ಕಾರಣ ಇವರು ಸೋಂಕಿತರ ನೇರ ಸಂಪರ್ಕಕ್ಕೆ ಬಂದಿ ರುವುದು. ವೈದ್ಯಕೀಯ ಸಿಬಂದಿಗಳು ಸೋಂಕಿತರ ನೇರ ಸಂಪರ್ಕದಲ್ಲಿ ಇರುತ್ತಾರಾದರೂ ಅವರು ಪಿಪಿಇ, ಮಾಸ್ಕ್, ಕೈಗವಸು ಇತ್ಯಾದಿ ಸುರಕ್ಷಾ ಉಡುಗೆಗಳನ್ನು ಧರಿಸುತ್ತಾರೆ ಹಾಗೂ ನೈರ್ಮಲ್ಯಕೆ ಗರಿಷ್ಠ ಆದ್ಯತೆ ನೀಡುತ್ತಾರೆ.

ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾವಿನ ಪ್ರಮಾಣ ಕಡಿಮೆಯಿದೆ. ಅತಿ ಹೆಚ್ಚು ಸಾವು ಸಂಭವಿಸಿದ ವಿಭಾಗದಲ್ಲಿ ಟ್ಯಾಕ್ಸಿ ಚಾಲಕರೂ ಇದ್ದಾರೆ. ಇದಕ್ಕೆ ಇವರು ಜನರ ಅತಿ ನಿಕಟದಲ್ಲಿರುವುದು ಮತ್ತು ಆರೋಗ್ಯ ರಕ್ಷಣೆಯ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ಕಾರಣ. ಬಾರ್‌, ಸಲೂನ್‌, ಜಿಮ್‌ ಇತ್ಯಾದಿಗಳು ಮುಚ್ಚಿದ ಕಾರಣ ಈ ಕ್ಷೇತ್ರ ಗಳಲ್ಲಿ ಹೆಚ್ಚು ಸಾವು ಸಂಭವಿಸಿಲ್ಲ ಎಂಬ ಅಂಶ ಸಮೀಕ್ಷೆಯಿಂದ ವ್ಯಕ್ತವಾಗಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.