ಮೃಗಾಲಯಗಳಲ್ಲಿ ಲಾಕ್‌ಡೌನ್‌ ತೆರವು

ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿರುವ ಮೃಗಾಲಯ

Team Udayavani, Jun 1, 2020, 3:05 PM IST

ಮೃಗಾಲಯಗಳಲ್ಲಿ ಲಾಕ್‌ಡೌನ್‌ ತೆರವು

ಸಾಂದರ್ಭಿಕ ಚಿತ್ರ

ಬ್ರಸೆಲ್ಸ್‌ : ಲಾಕ್‌ಡೌನ್‌ ಅನ್ನು ಎಷ್ಟು ಬೇಗ ಮತ್ತು ಯಾವ ರೀತಿ ಸಡಿಲಿಸಿ ಜನಜೀವನವನ್ನು ಸಹಜ ಸ್ಥಿತಿಗೆ ತರಬಹುದು ಎನ್ನುವುದೇ ಈಗ ಎಲ್ಲ ಸರಕಾರಗಳ ಚಿಂತೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಯುರೋಪಿನ ದೇಶಗಳಂತೂ ಲಾಕ್‌ಡೌನ್‌ ಸಡಿಲಿಕೆಗೆ ತುದಿಗಾಲಲ್ಲಿ ನಿಂತಿವೆ. ಡೆನ್ಮಾರ್ಕ್‌, ಜರ್ಮನಿ, ಫ್ರಾನ್ಸ್‌, ಇಟಲಿ, ಜೆಕ್‌ ರಿಪಬ್ಲಿಕ್‌, ಸ್ಪೈನ್‌ ಮತ್ತಿತರ ದೇಶಗಳು ಪ್ರವಾಸಿಗಳಿಗೆ ನಿಧಾನಕ್ಕೆ ತೆರೆದುಕೊಳ್ಳುತ್ತಿವೆ.

ಈ ಎಲ್ಲ ದೇಶಗಳಲ್ಲಿರುವ ಒಂದು ಸಮಾನ ಅಂಶವೆಂದರೆ ಎಲ್ಲೆಡೆ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಮೃಗಾಲಯಗಳು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರಗಳು ಎನ್ನುವುದು ಒಂದು ಕಾರಣವಾದರೆ ಪ್ರವಾಸಿಗರಿಲ್ಲದೆ ಈ ಮೃಗಾಲಯಗಳನ್ನು ನಿರ್ವಹಿಸುವುದು ಸರಕಾರಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಮೃಗಾಲಯಗಳನ್ನು ಮೊದಲ ಆದ್ಯತೆಯಲ್ಲಿ ಪ್ರಾರಂಭಿಸಲಾಗಿದೆ.

ಉಳಿದ ಪ್ರವಾಸಿ ತಾಣಗಳನ್ನು ಮುಚ್ಚಿದಾಗ ಹೆಚ್ಚೆಂದರೆ ಸಿಬಂದಿಗಳ ವೇತನ, ವಿದ್ಯುತ್‌ ಬಿಲ್‌…ಈ ರೀತಿಯ ಖರ್ಚುಗಳ ಹೊರೆ ಮಾತ್ರ ಇತ್ತು. ಆದರೆ ಮೃಗಾಲಯಗಳಲ್ಲಿರುವ ಅಷ್ಟೂ ಮೃಗಗಳ ಹೊಟ್ಟೆತುಂಬಿಸಬೇಕು, ಅವುಗಳ ವೈದ್ಯಕೀಯ ಶುಶ್ರೂಷೆ, ಇನ್ನುಳಿದ ನಿರ್ವಹಣೆಗಳೆಲ್ಲ ಭಾರೀ ಖರ್ಚಿನ ಬಾಬತ್ತುಗಳು. ಇದನ್ನು ಭರಿಸಲಾಗದೆ ಸರಕಾರಗಳು ಕಂಗಾಲಾಗಿದ್ದವು. ಹೀಗಾಗಿ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಬೆಲ್ಜಿಯಂನ ಪಾರ್ಕ್‌ ಪೈರಿ ಡಯಾಜ ಈ ಪೈಕಿ ಒಂದು ಮೃಗಾಲಯ. ಬೆಳಗ್ಗೆ ಆನೆಗಳೆಲ್ಲ ಸಾಲಾಗಿ ನಿಂತು ಒಂದು ಸುತ್ತು ವಾಕಿಂಗ್‌ ಮಾಡುವುದು ಬಳಿಕ ಮಾವುತರ ಆದೇಶದಂತೆ ಕಾಡಿನೊಳಗೆ ಹೋಗುವುದು ಇಲ್ಲಿ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ. ಇದನ್ನು ನೋಡಲೆಂದೇ ಪ್ರವಾಸಿಗರು ಬೆಳಗ್ಗಿನ ಹೊತ್ತು ಧಾವಿಸುತ್ತಿದ್ದರು. ಮಾ.13ರಂದು ಲಾಕ್‌ಡೌನ್‌ ಜಾರಿಯಾದ ಬಳಿಕವೂ ಜನರಿಲ್ಲದೆಯೇ ಈ ಪರಂಪರೆಯನ್ನು ಪಾಲಿಸಲಾಗಿತ್ತು. ಆದರೆ ಪ್ರಮುಖ ಆದಾಯ ಮೂಲವಿಲ್ಲದೆ ಪ್ರಾಣಿಗಳು ಹೊಟ್ಟೆಗೆ ಸಾಕಷ್ಟು ಆಹಾರ ಒದಗಿಸುವುದು ಕಷ್ಟವಾಗಿತ್ತು.

ಮಾಮೂಲಿಯಾಗಿ ದಿನಕ್ಕೆ 30,000 ಪ್ರವಾಸಿಗರ ಸಾಮರ್ಥ್ಯವಿದೆ ಈ ಮೃಗಾಲಯಕ್ಕೆ. ಆದರೆ ಈಗ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ 5,000 ಪ್ರವಾಸಿಗರನ್ನು ಮಾತ್ರ ಬಿಡಲಾಗುತ್ತದೆ. ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಏಕಮುಖ ಪಾದಚಾರಿ ದಾರಿಗಳಲ್ಲೇ ಓಡಾಡಬೇಕು.

ಪ್ರವಾಸಿಗರಿಲ್ಲದಿದ್ದರೆ ಮೃಗಾಲಯಗಳನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಪ್ರಾಣಿಗಳಿಗೆ ಅರೆ ಹೊಟ್ಟೆ ಉಂಡು ಅಭ್ಯಾಸವಿರುವುದಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಅವುಗಳ ಪಾಲನೆ ಬಹಳ ಕಷ್ಟವಾಯಿತು ಎನ್ನುತ್ತಾರೆ ಪೈರಿ ಡಯಾಜ ಮೃಗಾಲಯದ ವಕ್ತಾರ ಮ್ಯಾಥ್ಯೂ ಗಾಡ್‌ಫ್ರಾಯ್‌.

ಪ್ರವಾಸಿಗರಿಲ್ಲದೆ ಪ್ರಾಣಿಗಳಿಗೂ ಒಂಟಿತನ ಕಾಡಲಾರಂಭಿಸಿತ್ತು. ಕೆಲವು ಪ್ರಾಣಿಗಳ ಸ್ವಭಾವ ಬದಲಾದದ್ದನ್ನು ನಾವು ಗಮನಿಸಿದ್ದೇವೆ. ಲಾಕ್‌ಡೌನ್‌ ದಿನಗಳಲ್ಲಿ 1.10 ಲಕ್ಷ ಡಾಲರ್‌ನಷ್ಟು ವರಮಾನ ನಿತ್ಯ ನಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ ಮ್ಯಾಥ್ಯೂ ಗಾಡ್‌ಫ್ರಾಯ್‌.

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.