ಮೃಗಾಲಯಗಳಲ್ಲಿ ಲಾಕ್ಡೌನ್ ತೆರವು
ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿರುವ ಮೃಗಾಲಯ
Team Udayavani, Jun 1, 2020, 3:05 PM IST
ಸಾಂದರ್ಭಿಕ ಚಿತ್ರ
ಬ್ರಸೆಲ್ಸ್ : ಲಾಕ್ಡೌನ್ ಅನ್ನು ಎಷ್ಟು ಬೇಗ ಮತ್ತು ಯಾವ ರೀತಿ ಸಡಿಲಿಸಿ ಜನಜೀವನವನ್ನು ಸಹಜ ಸ್ಥಿತಿಗೆ ತರಬಹುದು ಎನ್ನುವುದೇ ಈಗ ಎಲ್ಲ ಸರಕಾರಗಳ ಚಿಂತೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಯುರೋಪಿನ ದೇಶಗಳಂತೂ ಲಾಕ್ಡೌನ್ ಸಡಿಲಿಕೆಗೆ ತುದಿಗಾಲಲ್ಲಿ ನಿಂತಿವೆ. ಡೆನ್ಮಾರ್ಕ್, ಜರ್ಮನಿ, ಫ್ರಾನ್ಸ್, ಇಟಲಿ, ಜೆಕ್ ರಿಪಬ್ಲಿಕ್, ಸ್ಪೈನ್ ಮತ್ತಿತರ ದೇಶಗಳು ಪ್ರವಾಸಿಗಳಿಗೆ ನಿಧಾನಕ್ಕೆ ತೆರೆದುಕೊಳ್ಳುತ್ತಿವೆ.
ಈ ಎಲ್ಲ ದೇಶಗಳಲ್ಲಿರುವ ಒಂದು ಸಮಾನ ಅಂಶವೆಂದರೆ ಎಲ್ಲೆಡೆ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಮೃಗಾಲಯಗಳು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರಗಳು ಎನ್ನುವುದು ಒಂದು ಕಾರಣವಾದರೆ ಪ್ರವಾಸಿಗರಿಲ್ಲದೆ ಈ ಮೃಗಾಲಯಗಳನ್ನು ನಿರ್ವಹಿಸುವುದು ಸರಕಾರಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಮೃಗಾಲಯಗಳನ್ನು ಮೊದಲ ಆದ್ಯತೆಯಲ್ಲಿ ಪ್ರಾರಂಭಿಸಲಾಗಿದೆ.
ಉಳಿದ ಪ್ರವಾಸಿ ತಾಣಗಳನ್ನು ಮುಚ್ಚಿದಾಗ ಹೆಚ್ಚೆಂದರೆ ಸಿಬಂದಿಗಳ ವೇತನ, ವಿದ್ಯುತ್ ಬಿಲ್…ಈ ರೀತಿಯ ಖರ್ಚುಗಳ ಹೊರೆ ಮಾತ್ರ ಇತ್ತು. ಆದರೆ ಮೃಗಾಲಯಗಳಲ್ಲಿರುವ ಅಷ್ಟೂ ಮೃಗಗಳ ಹೊಟ್ಟೆತುಂಬಿಸಬೇಕು, ಅವುಗಳ ವೈದ್ಯಕೀಯ ಶುಶ್ರೂಷೆ, ಇನ್ನುಳಿದ ನಿರ್ವಹಣೆಗಳೆಲ್ಲ ಭಾರೀ ಖರ್ಚಿನ ಬಾಬತ್ತುಗಳು. ಇದನ್ನು ಭರಿಸಲಾಗದೆ ಸರಕಾರಗಳು ಕಂಗಾಲಾಗಿದ್ದವು. ಹೀಗಾಗಿ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಬೆಲ್ಜಿಯಂನ ಪಾರ್ಕ್ ಪೈರಿ ಡಯಾಜ ಈ ಪೈಕಿ ಒಂದು ಮೃಗಾಲಯ. ಬೆಳಗ್ಗೆ ಆನೆಗಳೆಲ್ಲ ಸಾಲಾಗಿ ನಿಂತು ಒಂದು ಸುತ್ತು ವಾಕಿಂಗ್ ಮಾಡುವುದು ಬಳಿಕ ಮಾವುತರ ಆದೇಶದಂತೆ ಕಾಡಿನೊಳಗೆ ಹೋಗುವುದು ಇಲ್ಲಿ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ. ಇದನ್ನು ನೋಡಲೆಂದೇ ಪ್ರವಾಸಿಗರು ಬೆಳಗ್ಗಿನ ಹೊತ್ತು ಧಾವಿಸುತ್ತಿದ್ದರು. ಮಾ.13ರಂದು ಲಾಕ್ಡೌನ್ ಜಾರಿಯಾದ ಬಳಿಕವೂ ಜನರಿಲ್ಲದೆಯೇ ಈ ಪರಂಪರೆಯನ್ನು ಪಾಲಿಸಲಾಗಿತ್ತು. ಆದರೆ ಪ್ರಮುಖ ಆದಾಯ ಮೂಲವಿಲ್ಲದೆ ಪ್ರಾಣಿಗಳು ಹೊಟ್ಟೆಗೆ ಸಾಕಷ್ಟು ಆಹಾರ ಒದಗಿಸುವುದು ಕಷ್ಟವಾಗಿತ್ತು.
ಮಾಮೂಲಿಯಾಗಿ ದಿನಕ್ಕೆ 30,000 ಪ್ರವಾಸಿಗರ ಸಾಮರ್ಥ್ಯವಿದೆ ಈ ಮೃಗಾಲಯಕ್ಕೆ. ಆದರೆ ಈಗ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ 5,000 ಪ್ರವಾಸಿಗರನ್ನು ಮಾತ್ರ ಬಿಡಲಾಗುತ್ತದೆ. ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಏಕಮುಖ ಪಾದಚಾರಿ ದಾರಿಗಳಲ್ಲೇ ಓಡಾಡಬೇಕು.
ಪ್ರವಾಸಿಗರಿಲ್ಲದಿದ್ದರೆ ಮೃಗಾಲಯಗಳನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಪ್ರಾಣಿಗಳಿಗೆ ಅರೆ ಹೊಟ್ಟೆ ಉಂಡು ಅಭ್ಯಾಸವಿರುವುದಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಅವುಗಳ ಪಾಲನೆ ಬಹಳ ಕಷ್ಟವಾಯಿತು ಎನ್ನುತ್ತಾರೆ ಪೈರಿ ಡಯಾಜ ಮೃಗಾಲಯದ ವಕ್ತಾರ ಮ್ಯಾಥ್ಯೂ ಗಾಡ್ಫ್ರಾಯ್.
ಪ್ರವಾಸಿಗರಿಲ್ಲದೆ ಪ್ರಾಣಿಗಳಿಗೂ ಒಂಟಿತನ ಕಾಡಲಾರಂಭಿಸಿತ್ತು. ಕೆಲವು ಪ್ರಾಣಿಗಳ ಸ್ವಭಾವ ಬದಲಾದದ್ದನ್ನು ನಾವು ಗಮನಿಸಿದ್ದೇವೆ. ಲಾಕ್ಡೌನ್ ದಿನಗಳಲ್ಲಿ 1.10 ಲಕ್ಷ ಡಾಲರ್ನಷ್ಟು ವರಮಾನ ನಿತ್ಯ ನಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ ಮ್ಯಾಥ್ಯೂ ಗಾಡ್ಫ್ರಾಯ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್