ಜೀವನ ಶೈಲಿಗೆ ಪ್ರಧಾನಿ ಮೋದಿ ಪಂಚ ಸಲಹೆ
ವೃತ್ತಿ, ವ್ಯವಹಾರದಲ್ಲಿ ಡಿಜಿಟಲ್ ಸಾಧನ ಅಳವಡಿಸಿಕೊಳ್ಳಿ ; ಲಿಂಕ್ಡ್ ಇನ್ನಲ್ಲಿ ಪೋಸ್ಟ್
Team Udayavani, Apr 20, 2020, 6:45 AM IST
ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಲಿಂಕ್ಡ್ಇನ್ ಮೂಲಕ ಜನರೆದುರು ಬಂದಿದ್ದಾರೆ. ಅಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿನ ಕೆಲಸ ಮತ್ತು ಜೀವನಶೈಲಿ ಕುರಿತು ಒಂದಷ್ಟು ವಿಷಯಗಳನ್ನು ಲಿಂಕ್ಡ್ ಇನ್ನಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟಲ್ಲಿ ಇರುವುದೇನು?
ಒಂದು ಯುವ ಪ್ರಭುತ್ವವಾಗಿರುವ ಭಾರತ ನವೋತ್ಸಾಹಕ್ಕೆ ಹೆಸರಾಗಿದೆ. ಈ ಉತ್ಸಾಹ ಹೊಸದೊಂದು ಕೆಲಸದ ಸಂಸ್ಕೃತಿಯನ್ನೇ ಪರಿಚಯಿಸಿದೆ. ವ್ಯವಹಾರ ಮತ್ತು ಕೆಲಸದ ಹೊಸ ಸಂಸ್ಕೃತಿಯನ್ನು ಮರುವ್ಯಾಖ್ಯಾನಿಸುವ ಈ ಕೆಳಗಿನ ಅಂಶಗಳನ್ನು ನಾನು ಹೊಚ್ಚ ಹೊಸ ಸ್ವರಗಳೆಂದು ಕರೆಯಲು ಇಚ್ಛಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.
ಹೋರಾಟದ ಸಂದರ್ಭ ಧರ್ಮ ನೋಡಬಾರದು
ಕೋವಿಡ್ 19 ವೈರಸ್ ಹೋರಾಟದಲ್ಲಿ ಜನಾಂಗ, ಧರ್ಮ, ಬಣ್ಣ, ಮತ, ಭಾಷೆ, ಗಡಿಗಳನ್ನು ನೋಡಬಾರದು. ನಮ್ಮ ಪ್ರತಿಕ್ರಿಯೆ, ನಡವಳಿಕೆಯಲ್ಲಿ ಏಕತೆ ಮತ್ತು ಸಹೋದರತ್ವಕ್ಕೆ ಪ್ರಾಮುಖ್ಯತೆ ನೀಡಬೇಕು. ನಾವೆಲ್ಲರೂ ಒಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದಾರೆ.
ದಿಲ್ಲಿಯ ತಬ್ಲೀಘಿ ಜಮಾತ್ ಸಭೆಯ ಅನಂತರ, ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಮುಸ್ಲಿಮರು ಉದ್ದೇಶಪೂರ್ವಕವಾಗಿ ವೈರಸ್ ಹಬ್ಬಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮೊಫೋಬಿಕ್ ಹ್ಯಾಶ್ಟ್ಯಾಗ್ಗಳು ಸೃಷ್ಟಿಯಾಗಿ, ಇಡೀ ಸಮುದಾಯ ನಾನಾ ಟೀಕೆಗಳನ್ನು ಎದುರಿಸಬೇಕಾಯಿತು.
‘ಧರ್ಮ, ಗಡಿ ಎಂಬ ಸಂಗತಿಗೆ ಪ್ರಾಮುಖ್ಯತೆ ನೀಡುತ್ತಾ ಹೋದರೆ ಕೋವಿಡ್ 19 ವೈರಸ್
ವಿರುದ್ಧದ ನಮ್ಮ ಹೋರಾಟ ದುರ್ಬಲಗೊಳ್ಳುತ್ತದೆ. ಭಾವೈಕ್ಯದ ಒಗ್ಗಟ್ಟಿನ ಹೋರಾಟವೇ ಈ ಹೊತ್ತಿನ ಅನಿವಾರ್ಯ. ನಾವು ಒಗ್ಗಟ್ಟಿಗೆ ಆದ್ಯತೆ ನೀಡೋಣ’ ಎಂದು ಪ್ರಧಾನಮಂತ್ರಿ ಕಚೇರಿಯ ಟ್ವೀಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ