ವಿಮಾನದಲ್ಲಿ ವೈರಸ್‌ ಸುಲಭವಾಗಿ ಹರಡದು

ಕೆಮ್ಮುವಾಗ, ಸೀನುವಾಗ ಟಿಶ್ಯೂ ಪೇಪರ್‌ ಬಳಸಿ

Team Udayavani, May 29, 2020, 2:37 PM IST

ವಿಮಾನದಲ್ಲಿ ವೈರಸ್‌ ಸುಲಭವಾಗಿ ಹರಡದು

ವಾಷಿಂಗ್ಟನ್‌: ಹೆಚ್ಚಿನ ವೈರಸ್‌ಗಳು ಹಾಗೂ ಇತರ ರೋಗಾಣುಗಳು ವಿಮಾನಗಳಲ್ಲಿ ಸುಲಭವಾಗಿ ಹರಡುವುದಿಲ್ಲವೆಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿ.ಡಿ.ಸಿ.) ಕೋವಿಡ್‌-19ಕ್ಕಾಗಿರುವ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ. ವಿಮಾನಗಳ ಒಳಗೆ ಇಬ್ಬರು ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಥವಾ ನಡುವಿನ ಸೀಟನ್ನು ಖಾಲಿ ಬಿಡುವುದಕ್ಕೆ ಕೂಡ ಅದು ಶಿಫಾರಸು ಮಾಡುವುದಿಲ್ಲ. ಕೋವಿಡ್‌ನಿಂದಾಗಿ ಅಮೆರಿಕದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ವಿಮಾನಯಾನ ಶೇ. 90 ಸ್ಥಗಿತಗೊಂಡಿರುವುದಾಗಿ ಹೇಳಲಾಗಿದೆ. ಹೊರದೇಶಗಳಿಂದ ಬರುವ ಎಲ್ಲರಿಗೆ 14 ದಿನಗಳ ಕ್ವಾರಂಟೈನ್‌ ಅನ್ನು ಸಿ.ಡಿ.ಸಿ. ಶಿಫಾರಸು ಮಾಡಿದೆ.

ಏನು ಕಾರಣ?
“ವಿಮಾನದೊಳಗೆ ಗಾಳಿಯಾಡುವ ಮತ್ತು ಸೋಸಲ್ಪಡುವ ವಿಧಾನದಿಂದಾಗಿ ಹೆಚ್ಚಿನ ವೈರಸ್‌ಗಳು ಹಾಗೂ ಇತರ ರೋಗಾಣುಗಳು ಹರಡುವುದಿಲ್ಲ. ಆದರೆ ವಿಶೇಷವಾಗಿ ಕೋವಿಡ್‌ ಹಬ್ಬುತ್ತಿರುವ ಈ ಕಾಲಘಟ್ಟದಲ್ಲಿ ವಿಮಾನ ಪ್ರಯಾಣಿಕರು ಅಪಾಯರಹಿತರೆಂದು ಹೇಳುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು ಸಾಧ್ಯವಾದಷ್ಟು ವಿಮಾನಪ್ರಯಾಣವನ್ನು ತಪ್ಪಿಸಿಕೊಳ್ಳುವಂತೆ ಅಮೆರಿಕನರಿಗೆ ಶಿಫಾರಸು ಮಾಡಿದೆ. “ವಿಮಾನ ಪ್ರಯಾಣಕ್ಕಾಗಿ ಸೆಕ್ಯುರಿಟಿ ಸಾಲುಗಳಲ್ಲಿ ಮತ್ತು ವಿಮಾನನಿಲ್ದಾಣ ಟರ್ಮಿನಲ್‌ಗ‌ಳಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದು ನಿಮಗೆ ಇತರ ಜನರೊಂದಿಗೆ ಮತ್ತು ಎಲ್ಲರೂ ಸ್ಪರ್ಶಿಸುವ ಮೇಲ್ಮೆ„ಯೊಂದಿಗೆ ನಿಕಟ ಸಂಪರ್ಕಕ್ಕೆ ಕಾರಣವಾಗಬಹುದು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. “ಪ್ರಯಾಣಿಕರಿಂದ ತುಂಬಿರುವ ವಿಮಾನಗಳಲ್ಲಿ ಸಾಮಾಜಿಕ ಅಂತರ ನಿಯಮವನ್ನು ಪಾಲಿಸಲು ಕಷ್ಟ ಮತ್ತು ನೀವು ಬೇರೆಯವರ ಹತ್ತಿರ(ಆರು ಅಡಿಯೊಳಗೆ) ಕುಳಿತುಕೊಳ್ಳಬೇಕಾಗಬಹುದು. ಇದು ಕೋವಿಡ್‌ಗೆ ಕಾರಣವಾಗುವ ವೈರಸ್‌ಗೆ ಒಡ್ಡಿಕೊಳ್ಳುವ ನಿಮ್ಮ ಅಪಾಯ ಹೆಚ್ಚಿಸಬಲ್ಲುದು’ ಎಂದು ಸಿ.ಡಿ.ಸಿ. ಹೇಳಿದೆ.

ಮುನ್ನೆಚ್ಚರಿಕೆ ಕ್ರಮ
ಆದರೆ ವಾಣಿಜ್ಯ ವಿಮಾನಗಳಲ್ಲಿ ಶಿಫಾರಸು ಮಾಡಲಾಗಿರುವ ಸಾಮಾಜಿಕ ಅಂತರದ ಬದಲು ವಿಮಾನಗಳ ಪೈಲಟ್‌ಗಳು ಹಾಗೂ ಸಿಬಂದಿ ಕೋವಿಡ್‌ ಹರಡುವಿಕೆಯನ್ನು ತಡೆಯಲು ಕೈಗೊಳ್ಳಬೇಕಾದ ಹಲವು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಕ್ರಮಗಳನ್ನು ಸಲಹೆ ಮಾಡಿದೆ. ಪ್ರಯಾಣಿಕನೊಬ್ಬನಲ್ಲಿ ಜ್ವರ, ನಿರಂತರ ಕೆಮ್ಮು, ಉಸಿರಾಟ‌ ತೊಂದರೆ, ಅಸ್ವಸ್ಥತೆಯ ಮುಖಭಾವ ಕಂಡುಬಂದಲ್ಲಿ ಸಿ.ಡಿ.ಸಿ.ಗೆ ಮಾಹಿತಿ ನೀಡುವಂತೆ ವಿಮಾನ ಸಿಬಂದಿಗೆ ಸೂಚಿಸಲಾಗಿದೆ.

ಕೈಗಳನ್ನು ತೊಳೆಯಿರಿ
ಕನಿಷ್ಠ 20 ಸೆಕೆಂಡ್‌ಗಳ ಕಾಲ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಅದರಲ್ಲೂ ಮುಖ್ಯವಾಗಿ ಅಸ್ವಸ್ಥ ಪ್ರಯಾಣಿಕನಿಗೆ ನೆರವಾದ ಆಥವಾ ಕಲುಷಿತಗೊಂಡಿರಬಹುದಾದ ದೇಹದ ದ್ರವಗಳು ಅಥವಾ ಮೇಲ್ಮೆ„ಗಳನ್ನು ಸ್ಪರ್ಶಿಸಿದ ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು. ಸಾಬೂನು ಮತ್ತು ನೀರು ಸಿಗದಿದ್ದರೆ ಕನಿಷ್ಠ ಶೇ. 60 ಮದ್ಯಸಾರ ಹೊಂದಿರುವ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಬೇಕೆಂದು ಮಾರ್ಗಸೂಚಿ ತಿಳಿಸಿದೆ.

ಅಸ್ವಸ್ಥ ಪ್ರಯಾಣಿಕನನ್ನು ಇತರರಿಂದ 2 ಮೀ. ದೂರದಲ್ಲಿ ಕುಳಿತುಕೊಳ್ಳಿಸಬೇಕು ಮತ್ತು ಆತನನ್ನು ಉಪಚರಿಸಲು ಸಿಬಂದಿಯನ್ನು ನಿಯೋಜಿಸಬೇಕು. ಅಸ್ವಸ್ಥ  ವ್ಯಕ್ತಿಗೆ ಮಾಸ್ಕ್ ಧರಿಸಲು ಸಾಧ್ಯವಾಗದಿದ್ದರೆ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಮುಚ್ಚುವಂತೆ ಟಿಶ್ಯೂ ಪೇಪರ್‌ ಬಳಸುವಂತೆ ಸೂಚಿಸಬೇಕು. ಹಾರಾಟ ವೇಳೆ ಅಥವಾ ಅನಂತರ ಸೋಂಕು ಲಕ್ಷಣಗಳಿದ್ದ ಪ್ರಯಾಣಿಕ ಪತ್ತೆಯಾದಲ್ಲಿ ಮಾಮೂಲಿ ಸ್ವಚ್ಛತಾ ಕ್ರಮಗಳೊಂದಿಗೆ ಹೆಚ್ಚುವರಿ ಸ್ವಚ್ಛತಾ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.