ಬಿರು ಬಿಸಿಲಿಗೆ ಜನ ತತ್ತರ
ಕೊಂಡ್ಲಹಳ್ಳಿ: ಗ್ರಾಮದ ಜ್ಯೂಸ್ ಅಂಗಡಿಯೊಂದರ ಮುಂದೆ ಜನರು ಜ್ಯೂಸ್, ಮಜ್ಜಿಗೆ ಸೇವಿಸುತ್ತಿರುವುದು.
Team Udayavani, Apr 4, 2019, 1:35 PM IST
ಕೊಂಡ್ಲಹಳ್ಳಿ: ತಾಲೂಕಿನ ಕಸಬಾ ಹೋಬಳಿಯ ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಝಳಕ್ಕೆ ಹೆದರಿ ಮನೆಯಿಂದ ಹೊರಗೆ ಕಾಲಿಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ 9 ಗಂಟೆಯಿಂದಲೇ ಬಿಸಿಲು ಬೀಳಲು ಆರಂಭವಾಗುತ್ತದೆ. ಝಳದಿಂದಾಗಿ ಬೆವರು ಒಸರಲು ಶುರು ಆಗುತ್ತದೆ. ಬಿಸಿಲಿನ ಝಳದಿಂದ ಹಿರಿಯರು, ವಯೋವೃದ್ಧರು ಪ್ರಯಾಸ ಪಡುವಂತಾಗಿದೆ. ಕೆಲವರು ಗಿಡ-ಮರಗಳ ಅಡಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಮನೆಯಿಂದ ಹೊರಗೆ ಬರಬೇಕಾದರೆ ಛತ್ರಿ, ಟವೆಲ್ ಏನಾದರೂ ಇರಲೇಬೇಕು ಎಂಬಂತಾಗಿದೆ.
ಬಾಯಾರಿಕೆ ನೀಗಿಸಲು ಎಳನೀರು, ಮಜ್ಜಿಗೆ, ಹಣ್ಣು, ತಂಪು ಪಾನೀಯ ಮಾರಾಟ ಅಂಗಡಿಗಳಿಗೆ ಜನರು ಧಾವಿಸುತ್ತಿದ್ದಾರೆ. ಕಲ್ಲಂಗಡಿ, ಎಳನೀರು, ಜ್ಯೂಸ್ ವ್ಯಾಪಾರ ಜೋರಾಗಿ ನಡೆದಿದೆ. ಯುವಕರು ಹಾಗೂ ಬಾಲಕರು ಉರಿಬಿಸಿಲಿನ ತಾಪ ತಣಿಸಿಕೊಳ್ಳಲು ತೋಟ, ಕಪ್ಪಲೆಗಳ ನೀರಿನ ತೊಟ್ಟಿಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಈ ಬಾರಿ ಬೇಸಿಗೆ ತಾಪ ತುಸು ಜಾಸ್ತಿಯೇ ಇದ್ದು, ಯಾವಾಗ ಬೇಸಿಗೆ ಕಳೆಯುತ್ತದೆಯೋ ಶಿವ ಶಿವ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ