ವಿದ್ಯುತ್ ಪೋಲು ಮಾಡದಿರಿ: ಬಹುರೂಪಿ
ವಿವಿಧೆಡೆ ವಿದ್ಯುತ್ ಸುರಕ್ಷತಾ ಕಾರ್ಯಾಗಾರ•ವಾಲಿರುವ ವಿದ್ಯುತ್ ಕಂಬ-ತಂತಿ ಸರಿಪಡಿಸಿ
Team Udayavani, Aug 1, 2019, 12:50 PM IST
ಅಥಣಿ: ಹೆಸ್ಕಾಂ ಸಭಾ ಭವನದಲ್ಲಿ ನಡೆದ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.
ಅಥಣಿ: ಗ್ರಾಹಕರು ವಿದ್ಯುತ್ನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಶೇಖರ ಬಹುರೂಪಿ ಸಲಹೆ ನೀಡಿದರು.
ಹೆಸ್ಕಾಂ ಇಲಾಖೆ ಸಭಾಭವನದಲ್ಲಿ ಪಟ್ಟಣದ ವಿದ್ಯುತ್ ಗ್ರಾಹಕರಿಗಾಗಿ ವಿದ್ಯುತ್ ಸುರಕ್ಷತಾ ಹಾಗೂ ಉಳಿತಾಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ತೋಟದ ವಸತಿಗಳಲ್ಲಿ ಸತತವಾಗಿ 24 ಗಂಟೆ ವಿದ್ಯುತ್ ನೀಡಲು ನೂತನವಾಗಿ ನ್ಯೂಮೆರಿಕಲ್ ರಿಲೇ ಪ್ರೊಜೆಕ್ಟ್ ಅಳವಡಿಸಿ ಆ. 1ರಿಂದ ಪ್ರಾರಂಭಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ವಿಜಯಕುಮಾರ ಅಡಹಳ್ಳಿ ಮಾತನಾಡಿ, ಪಟ್ಟಣದ ತೋಟ ಪಟ್ಟಿಗಳಲ್ಲಿ ಹಾಗೂ ಪಟ್ಟಣದ ಕೆಲ ಬಡಾವಣೆಗಳಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಕೆಳಗೆ ವಾಲಿವೆ. ದುರ್ಘಟನೆ ನಡೆಯುವ ಮುನ್ನ ಹೆಸ್ಕಾಂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ, ಎಸ್.ಓ. ಮಲಕಪ್ಪ ಜಾಲಿಬೆಂಚಿ, ಜಿ.ಟಿ.ನರೆಗಲ್ಲ, ಆರ್.ಎಸ್.ಸ್ವಾಮಿ, ರಮೇಶ ಬಾದವಾಡಗಿ ಬಸನಗೌಡ ಪಾಟೀಲ, ಆರ್.ಎಚ್.ಕಲಾರಿ, ಶಬ್ಬೀರ ಸಾತಬಚ್ಚೆ, ಮಂಜು ಹೋಳಿಕಟ್ಟಿ ಇದ್ದರು. ಶ್ರೀಧರಮೂರ್ತಿ ನಿರೂಪಿಸಿದರು. ಅಶೋಕ ವಾಲಿಕರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ