ಅಂಗನವಾಡಿಗಳ ಪ್ರಗತಿಯ ಸಾರ್ಥಕ ಸೇವೆ


Team Udayavani, Nov 30, 2019, 1:23 PM IST

bk-tdy-2

ಗುಳೇದಗುಡ್ಡ: ಪರಿಸರ ರಕ್ಷಣೆ, ಪ್ರಾಥಮಿಕ ಶಾಲೆಗಳು-ಅಂಗನವಾಡಿಗಳಲ್ಲಿ ಕಲಿಕಾ ಪ್ರಗತಿ ಸಾಧಿಸುವುದು, ಪೂರ್ವ ಪ್ರಾಥಮಿಕದಿಂದಲೇ ಮಕ್ಕಳಿಗೆ ಓದಲು, ಬರೆಯುವುದು ಕಲಿಸುವುದು, ಶಿಕ್ಷಕ-ವಿದ್ಯಾರ್ಥಿ ಇಬ್ಬರು ಖುಷಿ-ತೃಪ್ತಿ ಪಡುವುದು ಇಂತಹ ಮುಖ್ಯ ಉದ್ದೇಶಗಳನ್ನಿಟ್ಟುಕೊಂಡು ಮುನ್ನಡೆಯುತ್ತಿರುವ ಕೋಟೆಕಲ್‌-ಗುಳೇದಗುಡ್ಡ ಶಿಕ್ಷಣ ಹಾಗೂ ಪರಿಸರ ಅಭಿವೃದ್ಧಿ ಸಂಘಕ್ಕೆ ಈಗ ಐದು ವರ್ಷದ ಸಂಭ್ರಮ.

ಹೌದು. ಸಮೀಪದ ಕೋಟೆಕಲ್‌ ಗ್ರಾಮದಲ್ಲಿ ನಿವೃತ್ತ ಬ್ರಿಗೇಡಿಯರ್‌ ಎಂ.ಎನ್‌.ಕಡಪಟ್ಟಿ, ಜಿ.ಎಸ್‌. ದೇಸಾಯಿ ಸೇರಿದಂತೆ ಗ್ರಾಮದ ಮುಖಂಡರ ಸಹಕಾರ, ಮಾರ್ಗದರ್ಶನ ಹಾಗೂ ಆಸಕ್ತಿಯಿಂದ ಸಮಾನ ಮನಸ್ಕ ಚಿಂತಕರ ನೇತೃತ್ವದಲ್ಲಿ ಹುಟ್ಟಿಕೊಂಡ ಸಂಘ ಕಳೆದ ಐದು ವರ್ಷಗಳಿಂದ ಈ ಭಾಗದ 9ಹಳ್ಳಿಗಳಲ್ಲಿನ 21ಅಂಗನವಾಡಿಗಳಲ್ಲಿ ಶಿಕ್ಷಣ ಮಟ್ಟ ಸುಧಾರಿಸುವ ಮುಖ್ಯ ಗುರಿಯಿಟ್ಟುಕೊಂಡು ಹೊರಟಿದ್ದು, ಇದರ ಫಲವಾಗಿ ಇಂದು 3 ಅಂಗನವಾಡಿಗಳು ಸ್ಮಾರ್ಟ್‌ ಅಂಗನವಾಡಿಗಳಾಗಿವೆ. ಇವು ಜಿಲ್ಲೆಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿವೆ.

ಅಂಗನವಾಡಿಗಳಿಗೆ ಐದು ವರ್ಷದಲ್ಲಿ ಮಾಡಿದ್ದೇನು?: 10 ಅಂಗನವಾಡಿಗಳ ಕಟ್ಟಡ ದುರಸ್ತಿ, 7ಅಂಗನವಾಡಿಗಳಿಗೆ ವಿದ್ಯುತ್‌ ಸಂಪರ್ಕ, 3 ಸ್ಮಾರ್ಟ್‌ ಅಂಗನವಾಡಿಗಳ ನಿರ್ಮಾಣ, 60ಪಾಠಗಳ ತಂತ್ರಜ್ಞಾನಸಿದ್ಧಪಡಿಸಿದೆ. ಪ್ರತಿ ವರ್ಷ ಅಂಗನವಾಡಿಗಳಿಗೆ 1ಲಕ್ಷ 25 ಸಾವಿರ ರೂ.ಗಳನ್ನು ವಿನಿಯೋಗಿಸಿದೆ. ಈ ವರ್ಷ ಅಲ್ಲೂರ ಗ್ರಾಮದ ಅಂಗವಾಡಿಗೆ 22 ಸಾವಿರ ರೂ. ವೆಚ್ಚದಲ್ಲಿ ವಿದ್ಯುತ್‌ ಸಂಪರ್ಕ, ಬಣ್ಣ, ಪಾದನಕಟ್ಟಿ ಗ್ರಾಮದ ಅಂಗನವಾಡಿಗೆ 46 ಸಾವಿರ ವೆಚ್ಚದಲ್ಲಿ ಕಟ್ಟಡ ದುರಸ್ತಿ, ವಿದ್ಯುತ್‌ ಸಂಪರ್ಕ, ಬಣ್ಣ ಹಾಗೂ 40 ಇಂಚಿನ ಸ್ಮಾರ್ಟ್‌ ಟಿವಿ ನೀಡಿ ಸ್ಮಾರ್ಟ್‌ ಅಂಗನವಾಡಿಯನ್ನಾಗಿ ಮಾಡಿದ್ದಾರೆ. ಕೋಟೆಕಲ್‌ ಗ್ರಾಮದ ಅಂಗನವಾಡಿಗೆ 2 ಜೋಕಾಲಿ ನೀಡಲಾಗಿದೆ. ಅಂಗನವಾಡಿಯ 400 ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣದ ಕಲಿಕೆಯ ಸಾಮಗ್ರಿಗಳ ಕೊಡುಗೆಯಾಗಿ ನೀಡಿದ್ದು, ಪ್ರತಿ ವರ್ಷ 200 ಮಕ್ಕಳು 1ನೇ ತರಗತಿಗೆ ಸೇರಲು ಸಮರ್ಥರಾಗಿದ್ದಾರೆ. ಇಲ್ಲಿ ಮಾಡಲಾಗಿರುವ ಸ್ಮಾರ್ಟ್‌ ಅಂಗನವಾಡಿ ಬಹುಶಃ ರಾಜ್ಯದಲ್ಲಿ ಪ್ರಥಮವೆನಿಸಿದೆ.

ಪ್ರಾಥಮಿಕ ಶಾಲೆಯಲ್ಲಿ ಐದು ವರ್ಷದಲ್ಲಿ ಮಾಡಿದ್ದೇನು?: ಸಂಘವು ಕಳೆದ ಐದು ವರ್ಷಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ 10 ಸ್ಮಾರ್ಟ್‌ ಕೊಠಡಿ ನಿರ್ಮಿಸಿದೆ. ಶಾಲೆಗೆ 22 ಕಂಪ್ಯೂಟರ್ ನೀಡಿ, ಸುಸಜ್ಜಿತ ಲ್ಯಾಬ್‌ ವ್ಯವಸ್ಥೆ ಜತೆಗೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ. ಅಷ್ಟೇ ಅಲ್ಲ ಇಂಗ್ಲಿಷ್‌, ಕನ್ನಡ, ಗಣಿತ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಶೇ.50ರಲ್ಲಿ ಬರೆಯುವ ಸಾಮಗ್ರಿ ವಿತರಣೆ, ಸೈನ್ಯ ಮಾದರಿ ವ್ಯಾಯಾಮ ಸೌಲಭ್ಯ, ಮಕ್ಕಳಿಗೆ ಎನ್‌ಎಂಎಂಎಸ್‌ ನವೋದಯ ತರಬೇತಿ, ಪೊನೊಲಜಿ ಶಿಕ್ಷಣ ನೀಡಿದೆ. ಡಿಜಿಟಲ್‌ ಸಾಕ್ಷರತೆಗೆ ಬೇಕಾಗುವ ಸಾಫ್ಟವೇರ್‌ಬೆಳವಣಿಗೆ, ಪ್ರತಿ ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಸುಧಾರಣೆಗೆ 2ಲಕ್ಷ ರೂ.ಗಳನ್ನು ಸಂಘ ನೀಡುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಸರಕಾರಿ ಶಾಲೆಗಳಲ್ಲೂ ಸಿಗಬೇಕು. ಮಕ್ಕಳ ಶಿಕ್ಷಣ ಕಲಿಕಾ ಮಟ್ಟ ಸುಧಾರಿಸಬೇಕು ಎಂದು ಶ್ರಮಿಸುತ್ತಿರುವ ಈ ಸಂಘದ ಸದಸ್ಯರ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು.

ಸಂಘ ಏನೆಲ್ಲ ನೀಡಿದೆ? : ಸ್ಮಾರ್ಟ್‌ ಅಂಗನವಾಡಿಯಲ್ಲಿ 43ಇಂಚಿನ ಟಿವಿ ಅಳವಡಿಸಲಾಗಿದ್ದು, ಸ್ಮಾರ್ಟ್‌ ಪೋನ್‌ ಮೂಲಕ ವಿಡಿಯೋ, ಪಾಠಗಳನ್ನು ಡಿಸ್‌ಪ್ಲೇ ಮಾಡಿ ಮಕ್ಕಳಿಗೆ ಪಾಠ ಬೋಧಿ ಸಲಾಗುತ್ತದೆ. ಇಂಗ್ಲಿಷ್‌ ವರ್ಕ್‌ಬುಕ್‌, ಮೈ ನಂಬರ್‌ ವರ್ಕ್‌ ಬುಕ್‌, ಕನ್ನಡ ಅಕ್ಷರಮಾಲೆ, ವರ್ಕ್‌ಬುಕ್‌, ಕನ್ನಡ ಶಬ್ದಗಳ ಪ್ರಾಕ್ಟಿಸ್‌ ಬುಕ್‌, ಇಂಗ್ಲಿಷ್‌ ಶಬ್ದಗಳ ಪ್ರಾಕ್ಟಿಸ್‌ ಬುಕ್‌, 2, 4 ಗೆರೆಗಳ ಹಾಗೂ ನೋಟ್‌ಬುಕ್‌, ಪೆನ್ಸಿಲ್‌, ಬ್ಯಾಗ್‌ ಸೇರಿದಂತೆ ಕಲಿಕಾ ಸಾಮಗ್ರಿ ನೀಡಲಾಗಿದೆ.

 

-ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.