ಕಾಲುವೆಗೆ ಆಕಸ್ಮಿಕವಾಗಿ ಜಾರಿ ಬಿದ್ದು 11 ವರ್ಷದ ಬಾಲಕ ಸಾವು
Team Udayavani, Feb 14, 2022, 10:24 AM IST
ರಬಕವಿ-ಬನಹಟ್ಟಿ: ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಅನಿಕೇತ್ ಕಾಂಬಳೆ (11) ಎಂಬ ಬಾಲಕ ಚಿಮ್ಮಡ ಗ್ರಾಮದ ಕಾಲುವೆಗೆ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಶನಿವಾರ ಮುಂಜಾನೆ ಚಿಮ್ಮಡ ಸಮೀಪದ ಕಾಲುವೆ ಹತ್ತಿರ ಬಹಿರ್ದೆಸೆಗೆ ಹೋದಾಗ ನೀರು ತೆಗೆದುಕೊಳ್ಳಲು ಕಾಲುವೆಗೆ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಹರಿಯುವ ನೀರಿನಲ್ಲಿ ಬಿದ್ದು, ಈಜು ಬಾರದೇ ಈರುವುದರಿಂದ ಮುಳುಗಿ ಮೃತಪಟ್ಟಿದ್ದಾನೆ.
ಬಾಲಕನ ಮೃತದೇಹ ಹೊಸೂರ ಕಿನಾಲ್ ಪಾಟಾ ಹತ್ತಿರ ಭಾನುವಾರ ಪತ್ತೆಯಾಗಿದೆ. ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ಮೃತ ಬಾಲಕನ ತಾಯಿ ಬನಹಟ್ಟಿ ಠಾಣೆಯಲ್ಲಿ ತಿಳಿಸಿದ್ದಾಳೆ. ಈ ಕುರಿತು ಬನಹಟ್ಟಿ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.