ಕೃಷಿ ಇಲಾಖೆ ಅಧಿಕಾರಿ ಹಡಪದಗೆ ಮನವಿ
Team Udayavani, Jun 10, 2020, 12:20 PM IST
ಕಲಾದಗಿ: ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರನ್ನು, ತಾಂತ್ರಿಕ ಉತ್ತೇಜಕರಾಗಿ ಕೃಷಿ ಇಲಾಖೆಯಲ್ಲಿ ಮುಂದುವರಿಸಲು ಆಗ್ರಹಿಸಿ ರೈತ ಅನುವುಗಾರರು ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಇಲಾಖೆಯ ಪ್ರಭಾರಿ ಕೃಷಿ ಅಧಿಕಾರಿ ಎಸ್.ಆರ್. ಹಡಪದ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸರಕಾರ ಈಗ ಕೃಷಿ ಇಲಾಖೆಯಲ್ಲಿ ರೈತ ಮಿತ್ರ ಎಂದು ಮರು ನಾಮಕರಣ ಮಾಡಿ ಕೃಷಿ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಚಿಂತನೆ ನಡೆಸಿದ್ದು, ಇದರಿಂದ ರೈತ ಅನುವುಗಾರರು, ತಾಂತ್ರಿಕ ಉತ್ತೇಜಕರಾಗಿ ಕೆಲಸ ಮಾಡಿದವರು ಬದುಕು ಬೀದಿಗೆ ಬಿದ್ದಂತಾಗುತ್ತದೆ. ರೈತ ಮಿತ್ರ ಎಂದು ನೇಮಕಾತಿ ಮಾಡಿಕೊಳ್ಳುವುದನ್ನು ಕೈಬಿಟ್ಟು ವಿವಿಧ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಮನೆ ಬಾಗಿಲಿಗೆ ತಲುಪಿಸಿ ರೈತರ ನೆರವಿಗೆ ಬಂದ ರೈತ ಅನುಗಾರರು, ತಾಂತ್ರಿಕ ಉತ್ತೇಜಕ ಕೃಷಿ ಇಲಾಖೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಬಸನಗೌಡ ಪಾಟೀಲ, ಮಳಿಯಪ್ಪ ಲೆಂಕೆನ್ನವರ, ಮಹಾಂತೇಶ ಗುಡಿ, ಗೋಪಾಲ ಮುಗಳ್ಳೋಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ