ಪ್ರವಾಹದಲ್ಲಿ ಸಿಲುಕಿರುವ ಸಹಾಯಕ್ಕೆ ಸೈನಿಕರ ಆಗಮನ
Team Udayavani, Aug 7, 2019, 10:23 AM IST
ಜಮಖಂಡಿ: ಸಂಚಾರಿ ರಸ್ತೆಗಳು ಜಲಾವೃತಗೊಂಡಿವೆ.
ಜಮಖಂಡಿ: ವಿಪರೀತ ಮಳೆಯಿಂದಾಗಿ ಜಮಖಂಡಿ ತಾಲೂಕಿನಲ್ಲಿ ಹೆಚ್ಚಿನ ಪ್ರವಾಹದಿಂದ ಮಂಗಳವಾರ ಸಂಜೆ ಪ್ರವಾಹ ಭೀತಿ ಎದುರಾಗಿದೆ. 10ಕ್ಕೂ ಹೆಚ್ಚು
ರಸ್ತೆಗಳು ಜಲಾವೃತ್ತಗೊಂಡು 4 ರಸ್ತೆಗಳು ನಡುಗಡ್ಡೆಯಂತಾಗಿ ಎರಡು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದು ಜನ-ಜಾನುವಾರಗಳನ್ನು ಸ್ಥಳಾಂತರಿಸಲು ಸೇನಾಪಡೆ ಆಗಮಿಸಿದೆ.
ಪ್ರವಾಹ ಎದುರಿಸಲು ತಾಲೂಕಾಡಳಿತದ ಜೊತೆಯಲ್ಲಿ 103 ಸೈನಿಕರು, 105 ಅರೇ ಸೈನಿಕರು, 31 ಅಗ್ನಿಶಾಮಕ ದಳಗಳ ಪ್ರವಾಹ ಪೀಡಿತ ಜನರ ರಕ್ಷಣೆಗೆ ಮುಂದಾಗಿದ್ದು, ಒಟ್ಟು ಆರು ತಂಡಗಳನ್ನು ರಚನೆಯಾಗಿವೆ. ಅದರಲ್ಲಿ ಹಿಪ್ಪರಗಿ ಗ್ರಾಮದ ತೋಟದ ಮನೆಗಳಲ್ಲಿ ವಾಸಿಸುವ ಜನರು ಸ್ಥಳಾಂತರಗೊಳ್ಳಲು ನಿರಾಕರಿಸಿದ್ದರಿಂದ 18 ಜನ ಸೈನಿಕರನ್ನು ಕಳುಹಿಸಿ 25 ಕುಟುಂಬದ 75 ಜನರನ್ನು ಸ್ಥಳಾಂತರ ಮಾಡಲಾಯಿತು.
ಟಕ್ಕಳಕಿ ಗ್ರಾಮದಲ್ಲಿ ಮೂರು ನಡುಗಡ್ಡೆಗಳಾಗಿದ್ದು, ಅಲ್ಲಿ 64 ಕುಟುಂಬಗಳ 433 ಜನರು, 300 ಜಾನುವಾರು ಗಳನ್ನು ನಾಗನೂರ ಪುರ್ನವಸತಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಕೆ.ಡಿ ಜಂಬಗಿ, ಹಿರೇಪಡಸಲಗಿ, ಟಕ್ಕೋಡ ಗ್ರಾಮಗಳಲ್ಲಿ ಐದು ಜನರ ಸೈನಿಕರ ತಂಡ ತಳವೂರಿದೆ. ತಾಲೂಕಿನ ಆಲಗೂರು, ಚಿಕ್ಕಪಡಸಲಗಿ, ಹಿರೇಪಡಸಲಗಿ, ಹಿಪ್ಪರಗಿ ಸಹಿತ 11 ಸ್ಥಳಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ತಾಲೂಕಿನ 829 ಕುಟುಂಬಗಳ ಪೈಕಿ 204 ಕುಟುಂಬಸ್ಥರು ತಮ್ಮ ಸಂಬಂಕರ ಮನೆಗಳಲ್ಲಿ ಆಶ್ರಯ ಪಡೆದರೆ, ಉಳಿದ 3850 ಜನರಲ್ಲಿ 2460 ನಿರಾಶ್ರಿತರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಬುಧವಾರ ಮತ್ತೇ ಹೆಚ್ಚಿನ ಪ್ರಮಾಣದಲ್ಲಿ ಮೇವು ಸಂಗ್ರಹವಾಗಲಿದ್ದು, ಪ್ರವಾಹ ಪೀಡಿತ ಗ್ರಾಮಗಳಿಗೆ ವಿತರಿಸುವ ವ್ಯವಸ್ಥೆ ಚುರುಕಿಗೊಳ್ಳಲಿದ್ದು, ರೈತರ 1 ದನಗಳಿಗೆ ಪ್ರತಿನಿತ್ಯ 6 ಕೆಜಿ ಮೇವು ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್