ಮೋದಿ ದೇಶ ಕಾಯುವ ನೀಲಕಂಠ: ಮುರುಗೇಶ ನಿರಾಣಿ

ಭಾರತದ ಅಸ್ಮಿತೆಯ ಸಂಕೇತ ನರೇಂದ್ರ ಮೋದಿ ; ಬಾದಾಮಿ ಭೂಮಿ ಪೂರ್ಣ ಹಸಿರಾಗಿಸುವ ಸಂಕಲ್ಪ

Team Udayavani, Apr 30, 2023, 9:08 AM IST

ಮೋದಿ ದೇಶ ಕಾಯುವ ನೀಲಕಂಠ: ಮುರುಗೇಶ ನಿರಾಣಿ

ಬಾಗಲಕೋಟೆ: ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌, ತನ್ನ ಕೀಳು ಸಂಸ್ಕೃತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಂದು ಪರಶಿವ ಲೋಕದ ಹಿತ ಕಾಯಲು ವಿಷ ಕುಡಿದು ವಿಷಕಂಠನಾದರೆ, ಇಂದು ನರೇಂದ್ರ ಮೋದಿಜಿ ಈ ದೇಶವನ್ನು ಭಯೋತ್ಪಾದನೆಯ ಅಪತ್ತಿನಿಂದ ಪಾರು ಮಾಡಿದ ನೀಲಕಂಠ ಎಂದು ಕೈಗಾರಿಕೆ ಸಚಿವರೂ ಆಗಿರುವ ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

ಬೀಳಗಿ ಕ್ಷೇತ್ರದ ಹಲಕುರ್ಕಿ, ಹಣಮನೇರಿ,ಚಿಚಂಚಲಕಟ್ಟಿ ಗ್ರಾಮಗಳಲ್ಲಿ ನಡೆದ ರೊಡ್‌ ಶೋ ನಂತರ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿ ವಿಷಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಅವರು ಮಾತನಾಡಿದರು.

ಖರ್ಗೆ ಹಿರಿಯ ರಾಜಕಾರಣಿ, ಅವರ ವಯಸ್ಸಿಗೆ ಹಿರಿತನಕ್ಕೆ ತಕ್ಕದಾಗಿ ಮಾತನಾಡಬೇಕು. ನರೇಂದ್ರ ಮೋದಿ
ಬಗ್ಗೆ ಮಾತನಾಡಿದರೆ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಇಡೀ ದೇಶವೇ ಸಹಿಸಲ್ಲ. 10 ವರ್ಷಗಳ ಹಿಂದೆ ದೇಶದಲ್ಲಿ ಕಾಂಗ್ರೆಸ್‌ ಮಾಡಿದ ದುರಾಡಳಿತದಿಂದ ಎಂತಹ ಪರಿಸ್ಥಿತಿ ಇತ್ತು. ಗಡಿಯಲ್ಲಿ ಸೈನಿಕರು, ದೇಶದಲ್ಲಿ
ನಾಗರಿಕರು ಇಬ್ಬರೂ ಸುರಕ್ಷಿತರಾಗಿರಲಿಲ್ಲ. ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರಿತ್ತು. ಆಗ ನರೇಂದ್ರ ಮೋದಿ ಆಗಮನ ಭಾರತಕ್ಕೆ ಹೊಸ ಭರವಸೆ ಮೂಡಿಸಿತು. ದೇಶದ ವಿಷಜಂತುಗಳಾಗಿದ್ದ ಭಯೋತ್ಪಾದಕರು,
ಮೂಲಭೂತವಾದಿಗಳನ್ನು ಮೆಟ್ಟಿ ನಿಂತು ಸುಭದ್ರ ರಾಷ್ಟ್ರ ಕಟ್ಟಿದ ಮೋದಿಜಿ ಭಾರತದ ಅಸ್ಮಿತೆಯ ಸಂಕೇತ ಎಂದರು.

ಬಾದಾಮಿ ತಾಲೂಕಿನ ಹಳ್ಳಿಗಳಿಗೆ ನೀರು ಒದಗಿಸಲು ನೀಡಲು 2008-13ರ ಅವಧಿಯಲ್ಲಿ ಹೆರಕಲ್‌ ಬ್ಯಾರೇಜ್‌ ನಿರ್ಮಿಸಲಾಗಿದೆ. ಇಂದು ಅದೇ ಬ್ಯಾರೇಜ್‌ ಮೂಲಕ 9 ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಮುಂದಿನ 18 ತಿಂಗಳಲ್ಲಿ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಎಲ್ಲ ಗ್ರಾಮಗಳು ಸಂಪೂರ್ಣ ನೀರಾವರಿಗೆ ಒಳಪಡುವ ಮೂಲಕ ರೈತರ ಭೂಮಿ ಹಸಿರಾಗಲಿದೆ ಎಂದು ಹೇಳಿದರು.

ಮುಖಂಡರಾದ ಹೂವಪ್ಪ ರಾಠೊಡ, ಪ್ರಕಾಶ ನಾಯ್ಕರ, ಸಂಗಯ್ಯ ಸರಗಣಾಚಾರಿ, ವೆಂಕನಗೌಡ ಗೌಡರ, ಹಣಮಂತಗೌಡ ಗೌಡರ್‌, ಮಾಗುಂಡೆಪ್ಪ ಕಟಗೇರಿ, ಡಾ|ರವಿ ಅಡಗಲ್‌, ಪರಪ್ಪ ಹೂಲಗೇರಿ, ಅಯ್ಯಪ್ಪ
ತಾಳಿ, ಪರಪ್ಪ ಬಂಡಿ, ಪಾರಪ್ಪ ಹೂಲಗೇರಿ, ಶಾಂತಪ್ಪ ಹೂಲಗೇರಿ, ಕೆಲೂಡೆಪ್ಪ ಹೂಲಗೇರಿ ಮುಂತಾದವರು ಪಾಲ್ಗೊಂಡಿದ್ದರು.

ಬಿಜೆಪಿ ಅಧಿಕಾರದಿಂದ ಭಾರತ ಸುಭದ್ರ: ದೇಶದ ಭದ್ರತೆ, ಸಮೃದ್ಧತೆ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. 65 ವರ್ಷ ಆಳಿದ ಕಾಂಗ್ರೆಸ್‌ ಭಾರತದಲ್ಲಿ ಸಮಸ್ಯೆಗಳನ್ನು ಜಿವಂತವಾಗಿಟ್ಟು ರಾಜಕಾರಣ ಮಾಡಿದೆ.
ಬಿಜೆಪಿ ಸಮಸ್ಯೆಗಳಿಗೆ ಪರಿಹಾರ ನೀಡಿ ಜನರ ಪರವಾಗಿ ನಿಂತಿದೆ ಎಂದು ವಿಧಾನಪರಿಷತ್‌
ಸದಸ್ಯ ಪಿ. ಎಚ್‌. ಪೂಜಾರ ಹೇಳಿದರು.

ತುಳಸಿಗೇರಿ, ಕಲಾದಗಿ, ಗೋವಿನಕೊಪ್ಪ ಗ್ರಾಮಗಳಲ್ಲಿ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿಯವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

ದೇಶ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಮುರುಗೇಶ ನಿರಾಣಿ
ಕಳೆದ ಮೂರು ಅವಧಿಯಲ್ಲಿ ಮಾಡಿದ ಕಾರ್ಯಗಳು ಬೀಳಗಿ ಮತಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿವೆ.

ಜನರ ನಾಡಿಮಿಡಿತ ಅರಿತು ಕೆಲಸ ಮಾಡುವ ಶಕ್ತಿ ಮುರುಗೇಶ ನಿರಾಣಿಯವರಿಗಿದೆ. ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಮತ್ತೊಮ್ಮೆ ಸ್ಥಾಪನೆಯಾಗಬೇಕು. ಬೀಳಗಿಯಲ್ಲಿ ಅಭಿವೃದ್ಧಿ ಕೆಲಸಗಳು ಮುಂದುವರೆದು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಬೇಕಾದರೆ ಅದು ಮುರುಗೇಶ ನಿರಾಣಿಯವರಿಂದ ಮಾತ್ರ ಸಾಧ್ಯ. ಹೀಗಾಗಿ ಅವರಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಹೇಳಿದರು.

ತುಳಸಿಗೇರಿ, ಕಲಾದಗಿ, ಗೋವಿನಕೊಪ್ಪ ಗ್ರಾಮದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.ಖರ್ಗೆ ಹಿರಿಯ ರಾಜಕಾರಣಿ,ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ನರೇಂದ್ರ ಮೋದಿ ಬಗ್ಗೆ ಮಾತನಾಡಿದರೆ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಇಡೀ ದೇಶವೇ ಸಹಿಸಲ್ಲ. ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ದೇಶದಲ್ಲಿ ಎಂತಹ ಪರಿಸ್ಥಿತಿ ಇತ್ತು. ಗಡಿಯಲ್ಲಿ ಸೈನಿಕರು, ದೇಶದಲ್ಲಿ ನಾಗರಿಕರು ಸುರಕ್ಷಿತರಾಗಿರಲಿಲ್ಲ. ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರಿತ್ತು. ಆಗ ನರೇಂದ್ರ ಮೋದಿ ಆಗಮನ ಭಾರತಕ್ಕೆ ಹೊಸ ಭರವಸೆ ಮೂಡಿಸಿತು. ದೇಶದ ವಿಷಜಂತುಗಳಾಗಿದ್ದ ಭಯೋತ್ಪಾದಕರು, ಮೂಲಭೂತವಾದಿಗಳನ್ನು ಮೆಟ್ಟಿ ನಿಂತು ಸುಭದ್ರ ರಾಷ್ಟ್ರ ಕಟ್ಟಿದ ಹೆಮ್ಮೆ ಮೋದಿ ಅವರಿಗಿದೆ.
-ಮುರುಗೇಶ ನಿರಾಣಿ
ಬೀಳಗಿ ಬಿಜೆಪಿ ಅಭ್ಯರ್ಥಿ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.