ಕೋವಿಡ್ ರೋಗಿಗಳ ಶುಶ್ರೂಷೆಗೆ ಉಚಿತ ಭವನ ನೀಡಿದ ಕಾಶೀ ಪೀಠ
Team Udayavani, May 4, 2021, 6:02 PM IST
ಸೊಲ್ಲಾಪುರ: ಜಿಲ್ಲೆಯ ಮಂಗಳವೇಡಾದಲ್ಲಿರುವ ಕಾಶಿ ವಿಶ್ವೇಶ್ವರ ಸಾಂಸ್ಕೃತಿಕ ಭವನವನ್ನು ಕೊರೊನಾ ರೋಗಿಗಳಿಗೆ ಬಳಸಿಕೊಳ್ಳಲು ಕಾಶಿ ಮಹಾ ಪೀಠವು ಉಚಿತವಾಗಿ ನೀಡಿದೆ.
ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಲೋಕಕಲ್ಯಾಣ ಕಾರ್ಯಕ್ರಮಗಳಿಗೆಂದೇ ಶ್ರೀ ಪೀಠದಿಂದ ನಿರ್ಮಿಸಿದ ಈ ಭವನವನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ಹೆಚ್ಚಳವಾದಾಗ ಸೊಲ್ಲಾಪುರ ಸಂಸದ ಡಾ| ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸೂಚನೆ, ಸೊಲ್ಲಾಪುರ ಜಿಲ್ಲಾ ಧಿಕಾರಿ ಮಿಲಿಂದ ಶಂಬರಕರ ಅವರ ಅಪೇಕ್ಷೆ ಮೇರೆಗೆ ಏಳು ತಿಂಗಳವರೆಗೆ ಭವನದ ಎಲ್ಲ ಪರಿಸರವನ್ನು ಕೊರೊನಾ ರೋಗಿಗಳ ಶುಶ್ರೂಷೆಗಾಗಿ ಉಚಿತವಾಗಿ ಕೊಡಲಾಗಿತ್ತು.
ಈ ವರ್ಷವೂ ಸೊಲ್ಲಾಪುರ ಜಿಲ್ಲಾ ಧಿಕಾರಿಗಳ ಅಪೇಕ್ಷೆ ಮೇರೆಗೆ ಕಾಶಿ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕೊರೊನಾ ರೋಗಿಗಳ ಶುಶ್ರೂಷೆಗಾಗಿ ಏ. 21ರಿಂದ ಈ ಭವನವನ್ನು ಉಚಿತವಾಗಿ ಕೊಡ ಮಾಡಿದ್ದಾರೆ. ಈ ಭವನವು 10,000 ಚದರಡಿ ಇದ್ದು 4000 ಚದುರಡಿಯಲ್ಲಿ ಊಟದ ಕೊಠಡಿ ಇದೆ. ಉಳಿದಿದ್ದೆಲ್ಲ ಓಪನ್ ಜಾಗೆ ಇದೆ.