ಜನಪದ ಕಲೆ ಸಂರಕಣೆ ಹವ್ಯಾಸ ಬೆಳೆಸಿಕೊಳ್ಳಿ
ಅಪ್ಪಟ ಹಳ್ಳಿ ಸೊಗಡಿನ ಈ ಕಲೆಗಳನ್ನು ನಾವು ಜತನದಿಂದ ಕಾಯ್ದುಕೊಳ್ಳಬೇಕು
Team Udayavani, Mar 12, 2022, 6:44 PM IST
ಕೆರೂರ: ಪೂರ್ವಜರಿಂದ ಮನುಕುಲಕ್ಕೆ ಬಳುವಳಿ ಯಾಗಿ ಬಂದಿರುವ ಜೀವನಾನುಭವಗಳ ಕಣಜ ವೆಂದೇ ಬಿಂಬಿಸಲಾಗುವ ಜನಪದ ಕಲೆಗಳನ್ನು ತಂತ್ರಜ್ಞಾನದ ಈ ಯುಗದಲ್ಲಿ ಸಂರಕ್ಷಿಸುವುದು ಅವಶ್ಯವಿದೆ. ಯುವ ಜನಾಂಗ ಈ ಕಲೆಗಳ ಬಗೆಗೆ ಅಭಿರುಚಿ, ಹವ್ಯಾಸ ಬೆಳೆಸಿಕೊಳ್ಳುವಂತೆ ಕಸಾಪ ಬಾದಾಮಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಶಂಕರ ಹೂಲಿ ಹೇಳಿದರು.
ಪಟ್ಟಣದ ಮತ್ತಿಕಟ್ಟಿ ಓಣಿಯ ಗಡಾದ ದುರ್ಗಾದೇವಿ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆಗಳು ಜೀವನಾನುಭವ ಭಂಡಾರವಾಗಿದ್ದು ಹಳ್ಳಿಗರು ದಿನವಿಡೀ ಹೊಲ, ಗದ್ದೆಗಳಲ್ಲಿ ದುಡಿದು ಬಂದು, ಸಂಜೆ ಬೇಸರ ನೀಗಿಸುವ ಜೊತೆಗೆ ಮನರಂಜನೆಗಾಗಿ ಜಾನಪದ ಕಲೆಗಳ ಸಂಪ್ರದಾಯ ಬೆಳೆದು ಬಂದಿತು.
ಮನಸ್ಸಿಗೆ ಮುದ ನೀಡುವ ಅಪ್ಪಟ ಹಳ್ಳಿ ಸೊಗಡಿನ ಈ ಕಲೆಗಳನ್ನು ನಾವು ಜತನದಿಂದ ಕಾಯ್ದುಕೊಳ್ಳಬೇಕು ಎಂದರು. ಹಿರಿಯ ಕಲಾವಿದ ಲಿಂಗರಾಜ ಕ್ವಾಣ್ಣೂರ ಮಾತನಾಡಿ, ಜಾನಪದ ಪರಿಷತ್ತಿನ ಮೂಲಕ ಗ್ರಾಮೀಣ ಕಲೆಗಾರರ ಮಾಹಿತಿ ಕ್ರೋಢಿಕರಿಸಿದ್ದು ಅವರಿಗೆ ಸೂಕ್ತ ಪ್ರೋತ್ಸಾಹ, ಅಗತ್ಯ ಸೌಲಭ್ಯಗಳಿಗಾಗಿ ಸಂಘಟಿಸಲಾಗುತ್ತಿದೆ ಎಂದರು.
ಕಲಾವಿದ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲೆಗಳ ಉಳಿವಿಗೆ ಅನೇಕ ಎಲೆಮರೆಯ ಕಲಾವಿದರು ಶ್ರಮಿಸುತ್ತಿದ್ದು ಅಂತಹವರಿಗೆ ಸೂಕ್ತ ವೇದಿಕೆ, ಸೌಲಭ್ಯಗಳನ್ನು ಕಲ್ಪಿಸಲು ಇಲಾಖೆ ಪ್ರಾಮುಖ್ಯತೆ ನೀಡಬೇಕು ಎಂದರು.
ಶಿಕ್ಷಕ ಬಸವರಾಜ ಪ್ಯಾಟಿಶೆಟ್ಟರ, ಸಿ.ಎಸ್. ನಾಗನೂರ ಇತರರು ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ದೇವಾಂಗಮಠದ ವೀರಭದ್ರ ಸ್ವಾಮೀಜಿ ವಹಿಸಿದ್ದರು. ಪಪಂ ಮಾಜಿ ಅಧ್ಯಕ್ಷೆ ಶ್ಯಾವಂತ್ರೆವ್ವ ಮತ್ತಿಕಟ್ಟಿ, ಫಕೀರಪ್ಪ ಮತ್ತಿಕಟ್ಟಿ, ಎ. ಎಸ್. ಚಂದಾವರಿ, ಬಸವಂತಪ್ಪ ಮತ್ತಿಕಟ್ಟಿ, ಸಿಆರ್ಪಿ ಎನ್. ಎಲ್. ರಾಠೊಡ, ಮಂಜುನಾಥ ಮತ್ತಿಕಟ್ಟಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ