ಐತಿಹಾಸಿಕ ಬಣ್ಣ ದೋಕುಳಿ ಸಂಪನ್ನ

ಜಲ ಯುದ್ಧದಂತೆ ಭಾಸವಾಗಿತ್ತು ಕೊನೆಯ ದಿನ ರಂಗಿನಾಟ

Team Udayavani, Mar 21, 2022, 1:06 PM IST

10

ಬಾಗಲಕೋಟೆ: ಮೂರು ದಿನಗಳ ಐತಿಹಾಸಿಕ ಬಾಗಲಕೋಟೆ ಬಣ್ಣದೋಕುಳಿ ರವಿವಾರ ಇಳಿ ಸಂಜೆ ಅದ್ಧೂರಿಯಾಗಿ ಸಂಪನ್ನಗೊಂಡಿದೆ.

ಕಳೆದ ಮೂರು ದಿನಗಳಿಂದ ನಡೆದ ರಂಗಿನ ಓಕುಳಿ ಕೊನೆಯ ದಿನ ಇಡೀ ನಗರಕ್ಕೆ ಅಕ್ಷರಶಃ ಬಣ್ಣದ ಮಜ್ಜನವಾಗಿತ್ತು. ಯುವಕರ ಮಧ್ಯ ಜಲಯುದ್ಧದಂತೆ ಕೊನೆಯ ದಿನದ ಬಣ್ಣದೋಕುಳಿ ಭಾಸವಾಗಿತ್ತು. 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಮತ್ತು ಬಂಡಿಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೆಲ್‌ಗ‌ಳು ಗಾಡಿಯಲ್ಲಿ ಯುವಕರು ಯುದ್ಧಕ್ಕೆ ಹೋಗುವಂತೆ ಸಜ್ಜಾಗಿ ರಂಗಿನಾಟಕ್ಕೆ ಬಂದರು.

ಮೊದಲ ದಿನ ವಿದ್ಯಾಗಿರಿ ನವನಗರ ಎರಡನೇ ದಿನ ಹಳೆಯ ಬಾಗಲಕೋಟೆ ಕಿಲ್ಲಾ, ಮೂರನೇ ದಿನ ವೆಂಕಟಪೇಟೆ, ಜೈನ್‌ ಪೇಟೆ, ಹಳೇಪೇಟೆಗಳಲ್ಲಿ ಮತ್ತು ಕೊನೆಯ ದಿನ ರವಿವಾರ ಇಡೀ ಬಾಗಲಕೋಟೆಯ ಜನ ಕಿಲ್ಲಾ ಪ್ರದೇಶದಲ್ಲಿ ಒಟ್ಟಾಗಿ ಸೇರಿ ಬಣ್ಣದ ಓಕುಳಿಯಾಡಿದರು. ಇದುವೇ ಬಾಗಲಕೋಟೆಯ ಹೋಳಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಹಾಗಾಗಿ ಈ ವರ್ಷವೂ ಅಷ್ಟೇ ಅದ್ಧೂರಿಯಾಗಿ ಬಾಗಲಕೋಟೆ ಜನರು ಬಣ್ಣದ ಓಕುಳಿ ಆಚರಿಸಿದರು. ಧರ್ಮಯ, ಜಾತಿ, ವಯಸ್ಸಿನ ಬೇಧ ಮರೆತು ಬಣ್ಣದ ಓಕುಳಿಯಲ್ಲಿ ನಿರತವಾಗಿದ್ದ ಜನಸಮೂಹದ ಸಂಭ್ರಮ ಮುಗಿಲು ಮುಟ್ಟಿತ್ತು. ಇಡೀ ನಗರಕ್ಕೆ ನಗರವೇ ತನ್ನ ವಹಿವಾಟಿನ ಸ್ವಯಂ ಘೋಷಿತ ಬಂದ್‌ ಮಾಡಿ ಬಣ್ಣದ ಆಟಕ್ಕಿಳಿದಿತ್ತು. ಮುಂಗಾರು ಮೋಡಗಳು ರಭಸದಿಂದ ಸಾಗುತ್ತ ಮಳೆ ಸುರಿಸಿ ಹೋದಂತ ಅನುಭವ. ಎಲ್ಲೆಲ್ಲೂ ರಂಗಿನ ಚಿತ್ತಾರ, ಭೂಮಿಗೆ ಹೊಂಗಿರಣ ಹೊದಿಸಿದ ಹಿಗ್ಗು. ಬಣ್ಣ ತುಂಬಿದ ಬ್ಯಾರಲ್‌, ಸಿಂಟೆಕ್ಸ್‌ ಗಳನ್ನು ಹೊತ್ತ ಟ್ರ್ಯಾಕ್ಟರ್‌, ಚಕ್ಕಡಿಗಳು ಯುದ್ಧದ ರಥಗಳು ಸಾಗಿದಂತೆ ಜನರ ಮಧ್ಯ ಸಾಗುತ್ತಿದ್ದವು.

ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದ ನಾಗರಿಕರು ಏಕಕಾಲಕ್ಕೆ ಪರಸ್ಪರ ಬಣ್ಣ ಎರಚುವ ಕಾಳಗಕ್ಕಿಳಿದಾಗ ಬಣ್ಣದ ಮಳೆ ಸುರಿಯುತ್ತಿದೆಯೋ, ಬಣ್ಣದ ಹೊಳೆಯೇ ಹರಿಯುತ್ತಿದೆಯೋ ಎನ್ನುವಂತೆ ಭಾಸವಾಗುತ್ತಿತ್ತು. ನೆಲ, ಗಲ್ಲಿ, ಓಣಿಯ ಮನೆ, ಅಂಗಡಿ-ಮುಂಗಟ್ಟುಗಳು ಹೋಳಿ ಬಣ್ಣದಲ್ಲಿ ಮಜ್ಜನಗೈದವು.

ಈ ಓಕುಳಿ ನೋಡಲೆಂದೇ ನಗರಕ್ಕೆ ನಗರವೇ ಎದ್ದು ಬಂದಂತಿತ್ತು. ಮನೆ ಮಾಳಿಗೆಗಳಲ್ಲೆಲ್ಲ ಮಹಿಳೆಯರು ಮಕ್ಕಳಾದಿಯಾಗಿ ಜನಜಾತ್ರೆಯೇ ನೆರೆದಿತ್ತು. ಬೃಹತ್‌ ಸಂಖ್ಯೆಯಲ್ಲಿ ಮಹಿಳೆಯರು ನೋಡಿ ಸಂಭ್ರಮಿಸಿದರು. ಶಿಳ್ಳೆ, ಕೇಕೆ, ಕುಣಿದೊಂದಿಗೆ ಸಂಭ್ರಮಿಸುತ್ತ ಬಣ್ಣ ಎರಚುತ್ತ ಸಾಗಿದ ಯುವ ಸಮೂಹವನ್ನು ಚಪ್ಪಾಳೆ ತಟ್ಟಿ ಹುರುದುಂಬಿಸುತ್ತಿದ್ದುದು ಸಾಮಾನ್ಯವಾಗಿತ್ತು. ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬದ ಬಣ್ಣದಾಟದಲ್ಲಿ ಮೂರು ದಿನದ ರಂಗೀನಾಟದಲ್ಲಿ ಬಾಗಲಕೋಟೆ ಜನರು ಎಲ್ಲ ಜಾತಿ, ದ್ವೇಷವನ್ನು ಮರೆತು ಭಾಗವಹಿಸಿ ಭಾವೈಕತೆಯಿಂದ ಪ್ರೀತಿಯಿಂದ ಪ್ರೀತಿಯನ್ನು ಹಂಚಿ ಹೋಳಿ ಆಚರಿಸಿದರು.

ಟಾಪ್ ನ್ಯೂಸ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.