ನಶೆ ಬರಿಸುವ ಗಸಗಸೆ ತೊಗಟೆ ಅಕ್ರಮ ಮಾರಾಟ: ಇಬ್ಬರ ಬಂಧನ
Team Udayavani, Mar 14, 2022, 6:12 PM IST
ರಬಕವಿ-ಬನಹಟ್ಟಿ : ಸರ್ಕಾರದ ಲೆಸನ್ಸ್ ಅಥವಾ ಅನುಮತಿಯಿಲ್ಲದೆ ಮತ್ತು ನಶೆಗೆ ಬರಿಸುವ ಪಪ್ಪಿ ಸ್ಟ್ರಾ (ಗಸಗಸೆ) ತೊಗಟೆಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನಡೆದಿದೆ.
ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿಯ ಉಪ್ಪಾರ ಗಲ್ಲಿಯ ಗುರುದೇವ ಬ್ರಹ್ಮಾನಂದ ಪಟ್ಟಣ ಸಹಕಾರಿ ಬ್ಯಾಂಕ್ ಸಮೀಪವಿರುವ ಮಹಾದೇವ ಹೊಸೂರ ಹಾಗು ಅಲ್ಲಪ್ಪ ಹೊಸೂರ ಎಂಬ ಇಬ್ಬರು ಸಹೋದರರು ಸೇರಿ ಈ ಅಕ್ರಮ ದಂಧೆ ನಡೆಸುತ್ತಿದ್ದರು. ಪೊಲೀಸರಿಗೆ ಖಚಿತ ಮಾಹಿತಿಯನ್ವಯ ಆರೋಪಿತರ ಮನೆ ಶೋಧ ನಡೆಸಿದ ಪೊಲೀಸರಿಗೆ ಅಂದಾಜು 24 ಸಾವಿರ ರೂ.ಗಳ 4.5 ಕೆ.ಜಿ. ತೂಕದಷ್ಟು ನಶೆ ಬರಿಸುವ ಪಪ್ಪಿ ಸ್ಟ್ರಾ (ಗಸಗಸೆ) ತೊಗಟೆಗಳು ದೊರೆತಿವೆ.
ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಆರ್.ವಾಯ್ ಬೀಳಗಿ ತನಿಖೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalingpur ಭ್ರೂಣಹತ್ಯೆ ಪ್ರಕರಣ: ಚುರುಕುಗೊಂಡ ತನಿಖೆ
Rabkavi Banhatti; ಪೌರ ಕಾರ್ಮಿಕರ ಕೊರತೆ: ನಗರಸಭೆಗೆ ಸವಾಲಾದ ಕಸ ವಿಲೇವಾರಿ
ಖಾಸಗಿ ಶಾಲೆಗಳಿಗೆ ಸೆಡ್ಡು: ಸರ್ಕಾರಿ ಶಾಲೆಯ ಅಡ್ಮಿಷನ್ ಗಾಗಿ ರಾತ್ರಿಯಿಡೀ ಕ್ಯೂ ನಿಂತ ಪಾಲಕರು
Kulgeri Cross: ಈ ಸರ್ಕಾರಿ ಶಾಲೆಯಲ್ಲಿ ಪಾಠಕ್ಕಿಂತ ಶೌಚಾಲಯದ್ದೇ ದೊಡ್ಡ ಸಮಸ್ಯೆ
Arrested: ಭ್ರೂಣಹತ್ಯೆ ಪ್ರಕರಣ… ಮತ್ತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ
MUST WATCH
ಹೊಸ ಸೇರ್ಪಡೆ
Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ
Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್ ಕ್ಲಾಸ್
Horoscope: ಹಿತಶತ್ರುಗಳು ಮತ್ತು ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ
Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ
Election Result: ಟ್ರೆಂಡ್ ಗೊತ್ತಾದರೂ ಫಲಿತಾಂಶ ಘೋಷಣೆ ವಿಳಂಬ ಸಾಧ್ಯತೆ