ಹೇಳಿದ ತತ್ವದಂತೆ ಮನುಷ್ಯ ಬದುಕುತ್ತಿಲ್ಲ: ಸಿರಿಗೆರೆ ಶ್ರೀ

ಬಸವ ಧರ್ಮ ಪೀಠವನ್ನು ಪ್ರವಚನ, ವಚನ ಸಾಹಿತ್ಯದ ಮೂಲಕ ಕಟ್ಟಿದರು.

Team Udayavani, Mar 14, 2022, 5:36 PM IST

ಹೇಳಿದ ತತ್ವದಂತೆ ಮನುಷ್ಯ ಬದುಕುತ್ತಿಲ್ಲ: ಸಿರಿಗೆರೆ ಶ್ರೀ

ಕೂಡಲಸಂಗಮ: ಮನುಷ್ಯ ತತ್ವಗಳನ್ನು ಹೇಳುತ್ತಿದ್ದಾನೆ. ತತ್ವದಂತೆ ಬದುಕುತ್ತಿಲ್ಲ. ಇದರಿಂದ ಬದುಕು ದಿನದಿಂದ ದಿನಕ್ಕೆ ಆನಂದಮಯವಾಗದೆ ನರಕಮಯವಾಗುತ್ತಿದೆ ಎಂದು ಸಾಣೇಹಳ್ಳಿ ಸಿರಿಗೆರೆ ಶಾಖಾಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ನಡೆದ ಮಾತೆ ಮಹಾದೇವಿಯವರ 76ನೇ ಜನ್ಮದಿನ ಹಾಗೂ ಲಿಂಗಾಯತ ಧರ್ಮ ಸಂಕಲ್ಪ ದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ರಷ್ಯಾ ಉಕ್ರೇನ್‌ ರಾಷ್ಟ್ರಗಳ ನಡುವಿನ ಯುದ್ದಕ್ಕೆ ಕಾರಣ ಶ್ರೀಮಂತಿಕೆಯ ಅಂಧಕಾರ, ಬುದ್ಧಿವಂತಿಕೆಯ ಅಹಂಕಾರ. ಎಲ್ಲರೂ ನನ್ನ ಮಾತು ಕೇಳಬೇಕು ಎಂಬ ದುರ್ಗುಣ. ಮನುಷ್ಯ ಈ ದುರ್ಗುಣಗಳಿಂದಲೇ ಮಹಾದೇವನಾಗದೆ ರಾಕ್ಷಸನಾಗುತ್ತಿದ್ದಾನೆ. ಬೇರೆಯವರ ದೋಷ ಎತ್ತಿ ಹೇಳುವ ನೈತಿಕ ಗುಣ ನಮ್ಮಲ್ಲಿ ಇದೆಯೇ ಎಂಬ ಆತ್ಮಾವಲೋಕನವನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದರು.

12ನೇ ಶತಮಾನದ ಬಸವಾದಿ ಶರಣರು ತಮ್ಮ ಬದುಕನ್ನು ಆತ್ಮಾವಲೋಕನ ಮಾಡಿಕೊಂಡು ಸಮಾಜದ ಜನರ ಬದುಕುತ್ತಿದ್ದರು. ಜನರ ಪರಿವರ್ತನೆ ಮಾಡುವ ಕಾಯಕ ಮಾಡಿದರು. ನಿಷ್ಠೆ, ಬದ್ಧತೆಯಿಂದ ಬದುಕಿದರು. ಇಂದು ಇವೆಲ್ಲವೂ ಮಾಯವಾಗುತ್ತಿವೆ. ಕೂಡಲಸಂಗಮದಲ್ಲಿ ಸ್ವತ್ಛತೆಯ ಕೊರತೆ ಅಧಿಕವಾಗಿದ್ದು, ಶುದ್ಧಗೊಳಿಸುವ ಕಾರ್ಯ ನಡೆಯಬೇಕು ಎಂದರು.

ವಚನಗಳ ಮೂಲ ಆಶಯ ಅಂಕಿತವಾಗಿರಲಿಲ್ಲ, ತತ್ವ ಪ್ರಸಾರವಾಗಿತ್ತು. ಮಾತೆ ಮಹಾದೇವಿಯವರು ಬಸವಣ್ಣನವರ ವಚನಗಳಿಗೆ ಲಿಂಗದೇವ ಅಂಕಿತ ಬಳಸಿದಾಗ ವಿರೋಧ ಮಾಡಿದೇವು. ಬಸವ ಧರ್ಮ ಪೀಠ ದಿಂದ ದೂರ ಇದ್ದವು. ಮಾತೆ ಗಂಗಾದೇವಿ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂಕಿತ ಬಳಸಲು ಕರೆ ಕೊಟ್ಟಾಗ ಸಂತೋಷವಾಯಿತು. ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿದೇವು ಎಂದರು.

ಗೌರಿಗದ್ದೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ವಿನಯ ಗುರುಜಿ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಜೀವನದ ಅನುಭವಗಳನ್ನು ಹೇಳಿದ್ದರಿಂದಲೇ ಶತಮಾನಗಳಿಂದಲೂ ಶಾಶ್ವತವಾಗಿ ನೆಲೆ ನಿಂತಿದೆ. ಶರಣರು ನಡೆದಾಡಿದ ಈ ಪುಣ್ಯಭೂಮಿಯನ್ನು ಕಸಮುಕ್ತ ಮಾಡುವ ಕಾರ್ಯವನ್ನು ಮಾಡಬೇಕು ಎಂದರು.

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಬಸವಣ್ಣನವರನ್ನು ಬಹುಮುಖಿಯಾಗಿ ನಾಡಿಗೆ ಪರಿಚಯಿಸಿದವರು ಮಾತೆ ಮಹಾದೇವಿ. ಬಸವ ಧರ್ಮ ಪೀಠವನ್ನು ಪ್ರವಚನ, ವಚನ ಸಾಹಿತ್ಯದ ಮೂಲಕ ಕಟ್ಟಿದರು. ಬಸವಾದಿ ಶರಣರ ಆಶಯಗಳನ್ನು ಈಡೇರಿಸುವ ಕಾರ್ಯವನ್ನು ಮಾಡಿದರು ಎಂದರು.

ಬೀದರದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅಧ್ಯಕ್ಷತೆ ವಹಿಸಿದರು. ಚಿಂತಕ ರುದ್ರಪ್ಪ ಕುರಕುಂದಿ ಉಪನ್ಯಾಸ ನೀಡಿದರು. ಮಾತೆ ಮಹಾದೇವಿ ಬರೆದ ಗಣಗೀತೆ ಪುಸ್ತಕವನ್ನು ವಿಜಯಕುಮಾರ ಮೇಳಕುಂದೆ, ಶ್ರೀಧರ ಗೌಡರ ಬರೆದ ಶರಣರ ಚರಿತೆ ಪುಸ್ತಕವನ್ನು ಜಿ.ಜಿ. ಪಾಟೀಲ, ವಚನ ವಾಣಿ ಪುಸ್ತಕವನ್ನು ಶಂಕರ ಗುಡಸ್‌ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ ಬಸವ ಗಿರಿ ಲಿಂಗಾಯತ ಮಹಾಮಠದ ಅಕ್ಕಅನ್ನಪೂರ್ಣ ತಾಯಿ, ಮಹಾರಾಷ್ಟ್ರ ಅಲ್ಲಮಪ್ರಭು ಯೋಗ ಪೀಠದ ಬಸವಕುಮಾರ ಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಇದ್ದರು.

ಎಸ್‌.ಬಿ. ಜೋಡಳ್ಳಿ ಸ್ವಾಗತಿಸಿದರು. ರವಿ ಪಾಪಡೆ ವಂದಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ವಿಜಯಪುರದ ನಿವೃತ್ತ ಕೃಷಿ ಅಧಿಕಾರಿ ಸಿ.ಬಿ.ಬೇವನೂರ ಅವರಿಗೆ ಶರಣ ಕಾಯಕ ರತ್ನ, ಬೀದರ ಲಿಂಗಾಯತ ಸಮಾಜ ಜಿಲ್ಲಾಧ್ಯಕ್ಷ ಕುಶಾಲರಾವ್‌ ಪಾಟೀಲ ಅವರಿಗೆ ಶರಣ ದಾಸೋಹ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಟಾಪ್ ನ್ಯೂಸ್

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

IFS ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರ‍್ಯಾಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ

IFS ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರ‍್ಯಾಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

Sandalwood; ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.