Supreme Courtನಲ್ಲಿ ಕೇಜ್ರಿ ಜಾಮೀನು ಅರ್ಜಿ; ಚುನಾವಣ ಪ್ರಚಾರವು ಮೂಲಭೂತ ಹಕ್ಕಲ್ಲ: ED
Team Udayavani, May 10, 2024, 6:40 AM IST
ಹೊಸದಿಲ್ಲಿ: “ಚುನಾವಣೆಗೆ ಪ್ರಚಾರ ನಡೆಸುವುದು ಮೂಲಭೂತ ಹಕ್ಕು ಅಲ್ಲ, ಹಾಗೆಯೇ ಸಾಂವಿಧಾನಿಕ ಹಕ್ಕು ಕೂಡ ಅಲ್ಲ. ಹೀಗಾಗಿ ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧ ಬಂಧಿತರಾಗಿರುವ ಸಿಎಂ ಕೇಜ್ರಿವಾಲ್ಗೆ ಜಾಮೀನು ನೀಡಬಾರದು’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಕೇಜ್ರಿವಾಲ್ ಮಧ್ಯಾಂತರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಇ.ಡಿ., ಈವರೆಗೆ ಯಾವುದೇ ರಾಜಕೀಯ ನಾಯಕನಿಗೆ ಚುನಾವಣೆ ಪ್ರಚಾರ ನಿಮಿತ್ತ ಜಾಮೀನು ನೀಡಿದ್ದಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ವಿಚಾರಣೆ ನಡೆಯುತ್ತಿದ್ದರೆ ಅಂಥವರಿಗೂ ಜಾಮೀನು ನೀಡಲಾಗುವುದಿಲ್ಲ ಎಂದು ಹೇಳಿತು. ಜತೆಗೆ ಆಪ್ ಪ್ರಚಾರಕ್ಕೆಂದು ದೇಣಿಗೆ ಸಂಗ್ರಹಿಸುತ್ತಿದ್ದ ಚನ್ಪ್ರೀತ್ ಸಿಂಗ್ನ ಖರ್ಚಲ್ಲೇ ಕೇಜ್ರಿ 7 ದಿನ ಗೋವಾದ 7ಸ್ಟಾರ್ ಹೊಟೇಲ್ನಲ್ಲಿ ತಂಗಿದ್ದರು ಎಂದೂ ಆರೋಪಿಸಿತು.
ಇಂದು ಕೇಜ್ರಿ ವಿರುದ್ಧ ಚಾರ್ಜ್ಶೀಟ್?
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ವಿರುದ್ಧ ಇ.ಡಿ. ಶುಕ್ರವಾರ ಮೊದಲ ಆರೋಪಪಟ್ಟಿ ಸಲ್ಲಿಸಲಿದೆ. ಇದೇ ಮೊದಲ ಬಾರಿಗೆ ಕೇಜ್ರಿ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿ, ಹಗರಣದ “ಕಿಂಗ್ ಪಿನ್’ ಎಂದು ಉಲ್ಲೇಖಿಸುವ ಸಾಧ್ಯತೆಯಿದೆ. ಇದೇ ವೇಳೆ, ಕೇಜ್ರಿ ಮಧ್ಯಾಂತರ ಜಾಮೀನು ಅರ್ಜಿಯ ತೀರ್ಪು ಕೂಡ ಶುಕ್ರವಾರ ಹೊರಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್ ಶಾ
UP ರ್ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್, ಅಖಿಲೇಶ್ ವಾಪಸ್!
Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ