Congress ಮತ್ತೊಬ್ಬ ನಾಯಕನ ವಿವಾದ;ಭಾರತೀಯರು ನಿಗ್ರೋ!
Team Udayavani, May 10, 2024, 6:30 AM IST
ಹೊಸದಿಲ್ಲಿ: ಪೂರ್ವ ಭಾರತೀಯರು ಚೀನಿಯರು ಹಾಗೂ ದಕ್ಷಿಣ ಭಾರತೀಯರು ಆಫ್ರಿಕನ್ನರ ರೀತಿ ಕಾಣತ್ತಾರೆಂದು ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ನ ಮತ್ತೂಬ್ಬ ನಾಯಕ ಅಧೀರ್ ರಂಜನ್ ಚೌಧರಿ ಅದೇ ರೀತಿಯ ಹೇಳಿಕೆ ನೀಡಿ, ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ನಮ್ಮಲ್ಲಿ ಆಸ್ಟ್ರೇಲಿಯಾ, ಮಂಗೋಲಿಯಾ ಮೂಲದವರು ಮತ್ತು ನಿಗ್ರೋ ಜನರಿದ್ದಾರೆ. ನಮ್ಮ ದೇಶದ ಜನಸಂಖ್ಯೆಯ ಪ್ರಾದೇಶಿಕ ಲಕ್ಷಣಗಳು ವಿಭಿನ್ನವಾಗಿವೆ. ಇದು ಹಾಗೆ ಇರುವುದು. ಯಾರಾದರೂ ತಮ್ಮ (ಪಿತ್ರೋಡಾ) ಅಭಿಪ್ರಾಯವನ್ನು ಹೇಳಿದರೆ, ಅದು ಅವರ ಅಭಿಪ್ರಾಯವಷ್ಟೇ. ಆದರೆ ಭಾರತದಲ್ಲಿ ಕೆಲವರು ಬಿಳಿ ಮತ್ತು ಕಪ್ಪು ವರ್ಣೀಯರಿರುವುದು ನಿಜ ಎಂದು ಅಧೀರ್ ಹೇಳಿದ್ದಾರೆ.
ಅವರು ಪಶ್ಚಿಮ ಬಂಗಾಲದ ಬಹ್ರಾಂಪುರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಮಧ್ಯೆ, ಅಧೀರ್ ಅವರ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ. ಬಿಜೆಪಿ ಪ್ರತಿಭಟನೆ: ಪಿತ್ರೋಡಾ ವಿವಾದಾತ್ಮಕ ಹೇಳಿಕೆ ಖಂಡಿಸಿ ರಾಹುಲ್ ಸೇರಿ ಕಾಂಗ್ರೆಸ್ ನಾಯಕರು ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿ ದಿಲ್ಲಿಯ ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್ ಶಾ
UP ರ್ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್, ಅಖಿಲೇಶ್ ವಾಪಸ್!
Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ