ಕೌಜಲಗಿ ನಿಂಗಮ್ಮ ಭವನ ಪೂರ್ಣಗೊಳ್ಳುವುದೆಂದು
ಐದು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ ಕಾಮಗಾರಿ
Team Udayavani, May 18, 2019, 10:52 AM IST
ಮಹಾಲಿಂಗಪುರ: ಅರ್ಧಕ್ಕೆ ನಿಂತ ದಿ.ಕೌಜಲಗಿ ನಿಂಗಮ್ಮ ಭವನ.
ಮಹಾಲಿಂಗಪುರ: ರಾಜ್ಯವಷ್ಟೇ ಅಲ್ಲ ಇಡೀ ದಕ್ಷಿಣ ಭಾರತದಲ್ಲೇ ಪಾರಿಜಾತ ಪಸರಿಸಿದ ಖ್ಯಾತಿ ಜಾನಪದ ರಂಗಭೂಮಿ ಕಲಾವಿದೆ ದಿ| ಕೌಜಲಗಿ ನಿಂಗಮ್ಮಳಿಗೆ ಸಲ್ಲುತ್ತದೆ. ಇಂತಹ ಮೇರುಕಲೆಯ ಮೂಲಕ ಮಹಾಲಿಂಗಪುರದ ಕೀರ್ತಿಯನ್ನು ದೇಶ್ಯಾದ್ಯಂತ ಪಸರಿಸಿದ ಕಲಾದೇವತೆಯ ಸ್ಮಾರಕ ಸಾಂಸ್ಕೃತಿಕ ಭವನ ಕಾಮಗಾರಿ ಆರಂಭವಾಗಿ ಸುದೀರ್ಘ 5 ವರ್ಷ ಕಳೆದರೂ ಇಂದಿಗೂ ಪೂರ್ಣಗೊಂಡಿಲ್ಲ.
ಅರ್ಧಕ್ಕೆ ನಿಂತ ಸ್ಮಾರಕ ಭವನ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಭವನದ ಸುತ್ತಲೂ ಗಿಡಗಂಟಿಗಳು ಬೆಳೆದಿರುವುದರಿಂದ ಸುತ್ತಲಿನ ಜಾಗೆ ಬಯಲು ಶೌಚವಾಗಿ ಮಾರ್ಪಾಡಾಗಿದೆ.
ಆಮೆಗತಿಯಲ್ಲಿ ಕಾಮಗಾರಿ: ಪಟ್ಟಣದ ಸರಕಾರಿ ಕಾಲೇಜು ಆವರಣದಲ್ಲಿ 24-4-2014ರಂದು 1.10 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೌಜಲಗಿ ನಿಂಗಮ್ಮ ಸ್ಮಾರಕ ಭವನ ಕಾಮಗಾರಿ ಇಲಾಖೆ ಅಧಿಕಾರಿಗಳ ಬದಲಾವಣೆ, ಮಳೆಯ ನೈಸರ್ಗಿಕ ತೊಂದರೆ, ಮರಳಿನ ಅಭಾವ, ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿ ಮೂರು ವರ್ಷ ಹಿಡಿಯಿತು. (2017 ಜುಲೈ). ಕಾಮಗಾರಿ ಕಟ್ಟಡ ಮಾತ್ರ ಮುಗಿದು, ಕೆಲಸ ಅರ್ಧಕ್ಕೆ ನಿಂತ ಕಾರಣ ಅಂದಿನ ಶಾಸಕಿ, ಸಚಿವೆ ಉಮಾಶ್ರೀ ಬಾಕಿ ಉಳಿದ ಕಾಮಗಾರಿಗೆ ಹೆಚ್ಚುವರಿ ಎರಡು ಕೋಟಿ ಮಂಜೂರಿ ಮಾಡಿಸಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು (13-9-2017) ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಕಾಮಗಾರಿ ಗುತ್ತಿಗೆ ಪಡೆದು 1 ವರ್ಷ 9 ತಿಂಗಳು ಕಳೆದರೂ ಇಂದಿಗೂ ಕಾಮಗಾರಿ ಪೂರ್ಣವಾಗಿಲ್ಲ. ಕಾಮಗಾರಿ ಪೂರ್ಣಗೊಂಡು ಈ ಭವನ ಯಾವಾಗ ಉದ್ಘಾಟನೆಗೊಳ್ಳುವುದೋ ಕಾಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ