ಚರಂಡಿ ಸ್ವಚ್ಛತೆ -ಕಸ ವಿಲೇವಾರಿಗೆ ಆದ್ಯತೆ ನೀಡಿ
ಡಿವೈಡರ್-ಪಾದಚಾರಿ ರಸ್ತೆ ನಿರ್ಮಿಸಿಸಿದ್ದ ಸರೋವರ ಕೆರೆ ಪ್ರವಾಸಿ ತಾಣವನ್ನಾಗಿ ಮಾಡಿ
Team Udayavani, Jan 9, 2020, 1:15 PM IST
ಮಹಾಲಿಂಗಪುರ: ಅಭಿವೃದ್ಧಿ ಕಾರ್ಯಗಳಿಗಿಂತ ಪಟ್ಟಣದ ರಸ್ತೆ, ಚರಂಡಿಗಳ ಸ್ವಚ್ಛತೆ, ಸಮರ್ಪಕ ಕಸ ವಿಲೇವಾರಿಗೆ ಪುರಸಭೆ ಬಜೆಟ್ನಲ್ಲಿ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಬುಧವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ಪ್ರಹ್ಲಾದ ಸಣ್ಣಕ್ಕಿ ಮಾತನಾಡಿ, ಪಟ್ಟಣದ ಚನ್ನಮ್ಮ ವೃತ್ತದಿಂದ ರಬಕವಿ ರಸ್ತೆಯ ಮಹಾದ್ವಾರದವರೆಗೆ ಮತ್ತು ಬಸವ ವೃತ್ತದಿಂದ ಎಪಿಎಂಸಿ ಮಹಾದ್ವಾರದವರೆಗೆ ಡಬಲ್ ರಸ್ತೆ, ಡಿವೈಡರ್, ಪಾದಚಾರಿ ರಸ್ತೆ ನಿರ್ಮಿಸಬೇಕು ಎಂದರು.
ಮನೋಹರ ಶಿರೋಳ ಮಾತನಾಡಿ, ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದರು. ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ ಮಾತನಾಡಿ, ಪಟ್ಟಣದ ಸಿದ್ದಸರೋವರ ಕೆರೆಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ, ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಹೇಳಿದರು.
ಸಿದ್ದು ಶಿರೋಳ ಮಾತನಾಡಿ, ಹಿಂದೂ ಸ್ಮಶಾನ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ರಾಜೇಶ ಭಾವಿಕಟ್ಟಿ ಮಾತನಾಡಿ, ಗಾಂಧಿ ವೃತ್ತದಿಂದ ಚನಗೀರೇಶ್ವರ ದೇವಸ್ಥಾನ, ವಿನಾಯಕ ಹೋಟೆಲ್ನಿಂದ ಮಹಾಲಿಂಗೇಶ್ವರ ದೇವಸ್ಥಾನವರೆಗೆ ಟ್ರಾಫಿಕ್ ಸಮಸ್ಯೆಯಾಗುತ್ತಿರುವುದರಿಂದ ಅತಿಕ್ರಮಣ ತೆರವುಗೊಳಿಸಿ ಡಬಲ್ ರಸ್ತೆ ಮಾಡಬೇಕು ಎಂದರು.
ಬಸನಗೌಡ ಗೋಲಪ್ಪನವರ ಮಾತನಾಡಿ, ಸಂತೆಯನ್ನು ಡಬಲ್ ರಸ್ತೆಯ ಮುಖ್ಯಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದರು. ಜೆಡಿಎಸ್ ಮುಖಂಡ ನಿಂಗಪ್ಪ ಬಾಳಿಕಾಯಿ ಮಾತನಾಡಿ, ಕೆರೆ ಮತ್ತು ಬಸ್ ನಿಲ್ದಾಣ ಪಕ್ಕದ ಪುರಸಭೆಯ ನಾಲ್ಕು ಎಕರೆ ಜಾಗೆಯು ಅತಿಕ್ರಮಣವಾಗುತ್ತಿದೆ. ತಕ್ಷಣ ಜಾಗದ ಸರ್ವೇ ಮಾಡಿ ಕಾಂಪೌಂಡ್ ಹಾಕಿ. ಬಸ್ ನಿಲ್ದಾಣದ ಕೆಲಸ ಮುಕ್ತಾಯಗೊಳ್ಳುವವರೆಗೆ ಬಸ್ ನಿಲುಗಡೆಗೆ ಅವಕಾಶ ನೀಡಲು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಶಿವಲಿಂಗ ಘಂಟಿ ಮಾತನಾಡಿ, ಕರ ಪಾವತಿಸಲು ಬಂದ ಸಾರ್ವಜನಿಕರಿಗೆ ಸರಿಯಾಗಿ ಚಲನ್ ಮಾಡಿಕೊಡುವುದಿಲ್ಲ, ಹೀಗಾದರೆ ಕರ ವಸೂಲಿ ಮತ್ತು ಸ್ಥಳೀಯ ಸಂಪನ್ಮೂಲ ಕ್ರೋಢಿಕರಣ ಹೇಗೆ ಸಾಧ್ಯ ಎಂದರು. ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಮಾತನಾಡಿ ಮುಂದಿನ ಎರಡು ವರ್ಷಗಳ ಕಾಲ ಪುರಸಭೆಯ ಯಾವುದೇ ಕರಗಳನ್ನು ಹೆಚ್ಚಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದರು. ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳ್ಳಿ, ಚನಬಸು ಹುರಕಡ್ಲಿ, ಮಹಾಲಿಂಗಪ್ಪ ಕೋಳಿಗುಡ್ಡ, ಶಿವಾನಂದ ಅಂಗಡಿ, ಬಿ.ಎಂ.ಯಾದವಾಡ, ಭೀಮಸಿ ಗೌಂಡಿ, ವಿರೂಪಾಕ್ಷ ಬಾಟ, ಮಹಾಲಿಂಗಪ್ಪ ಮುದ್ದಾಪುರ ಮಾತನಾಡಿದರು. ಮುಖ್ಯಾ ಧಿಕಾರಿ ಬಾಬುರಾವ್ ಕಮತಗಿ, ಶ್ರೀಮಂತ ಹಳ್ಳಿ, ಈರಪ್ಪ ದಿನ್ನಿಮನಿ, ಸವಿತಾ ಕೋಳಿಗುಡ್ಡ, ರಾಜು ಗೌಡಪ್ಪಗೋಳ, ಸುನೀಲಗೌಡ ಪಾಟೀಲ, ವಿ.ಜಿ. ಕುಲಕರ್ಣಿ, ಎಸ್.ಎನ್. ಪಾಟೀಲ, ಬಿ.ವೈ. ಮರದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ