ಮಿನಿವಿಧಾನಸೌಧ ಸ್ಥಳಾಂತರಕ್ಕೆ ಅನುಮತಿ
Team Udayavani, Jan 19, 2020, 12:30 PM IST
ಬಾದಾಮಿ: ಯರಗೊಪ್ಪ ಕ್ರಾಸ್ನಲ್ಲಿರುವ ಮಿನಿ ವಿಧಾನಸೌಧ ಕಚೇರಿ ಸಾರ್ವಜನಿಕರಿಗೆ ದೂರವಾಗುತ್ತದೆ ಎಂಬ ಕಾರಣದಿಂದ ಹೊಸ ಮಿನಿ ವಿಧಾನಸೌಧ ಕಟ್ಟಡವನ್ನು ಬಸ್ ನಿಲ್ದಾಣದ ಎದುರು ನಿರ್ಮಾಣಕ್ಕೆ ಕಾರ್ಯ ಯೋಜನೆ ರೂಪಿಸಲಾಗಿತ್ತು.
ಆದರೆ, ಪುರಾತತ್ವ ಇಲಾಖೆ ಅನುಮತಿ ನೀಡದೇ ಇರುವ ಕಾರಣ ಹೊಸ ಮಿನಿವಿಧಾನಸೌಧ ಕಟ್ಟಡ ನೀರಾವರಿ ನಿಗಮದ ಸ್ಥಳಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖೆ ಅನುಮತಿ ನೀಡಿದೆ.
ಬಿ.ಬಿ.ಚಿಮ್ಮನಕಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ 2017ರಲ್ಲಿ ಹೊಸ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರಿಯಾಗಿತ್ತು.
ಇದನ್ನು ಮೊದಲು ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಎದುರಿನ ಜಾಗದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಐತಿಹಾಸಿಕ ಸ್ಥಳಗಳ ಸುತ್ತಮುತ್ತ ಬರುವುದರಿಂದ ಪುರಾತತ್ವ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಸೂಚಿಸಿತ್ತು. ಹಾಲಿ ಶಾಸಕಸಿದ್ದರಾಮಯ್ಯನವರು ಪತ್ರ ಬರೆದು ಅನುಮತಿ ನೀಡಲು ಮನವಿ ಸಲ್ಲಿಸಿದ್ದರೂ ಸಹಿತ ಅನುಮತಿ ನೀಡಲು ನಿರಾಕರಿಸಿದೆ.
ಇದಕ್ಕೆ ಪುರಾತತ್ವ ಇಲಾಖೆ ಅನುಮತಿ ಪಡೆದು ಕಾಮಗಾರಿ ಆರಂಭಿಸುವಂತೆಸೂಚನೆ ನೀಡಿತ್ತು. ಇದುವರೆಗೂ ಪುರಾತತ್ವ ಇಲಾಖೆ ಅನುಮತಿ ನೀಡದೇ ಇರುವ ಕಾರಣ ಹೊಸ ಮಿನಿವಿಧಾನಸೌಧ ಕಟ್ಟಡವನ್ನು ರಾಮದುರ್ಗ ರಸ್ತೆಯ ನೀರಾವರಿ ನಿಗಮದ ಸ್ಥಳಕ್ಕೆ ಶಿಫ್ಟ್ ಮಾಡಲು ಗಂಭೀರ ಚಿಂತನೆ ನಡೆಸಿ, ಪ್ರಸ್ತಾವಣೆಯನ್ನು ಕಂದಾಯ ಇಲಾಖೆಗೆ ಸಲ್ಲಿಸಿತ್ತು. ಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆಯ ಹಂತದಲ್ಲಿ ಸ್ಥಳಾಂತರ ಕಾರ್ಯ ಚುರುಕಿನಿಂದ ನಡೆದು, ಈಗ ಜ.17 ರಂದು ಅನುಮತಿ ನೀಡಿದೆ.
ರಾಮದುರ್ಗ ರಸ್ತೆಯಲ್ಲಿರುವ ಹಾಲಿ ಮಲಪ್ರಭಾ ನೀರಾವರಿ ನಿಗಮದ(ಎಂ. ಎಲ್.ಬಿ.ಸಿ) ಕಟ್ಟಡದಲ್ಲಿನ ವಿಶಾಲವಾದ 3 ಎಕರೆ ಜಾಗದಲ್ಲಿ ಹೊಸ ಮಿನಿವಿಧಾನ ಸೌಧಕಚೇರಿ ಕಟ್ಟಡ ನಿರ್ಮಿಸಲು ಯೋಜನೆ ಮಾಡಲಾಗಿದೆ. ನೀರಾವರಿ ನಿಗಮದ ಹಳೆಯ ವಸತಿಗƒಹಗಳು ಮತ್ತು ಕಚೇರಿಯ ಒಟ್ಟು 3 ಎಕರೆ ಜಮೀನಿನಲ್ಲಿ ಹೊಸ ಕಟ್ಟಡನಿರ್ಮಾಣವಾಗಲಿದೆ.
ಹಾಲಿ ಇರುವ ಮಿನಿವಿಧಾನಸೌಧಕ್ಕೆ ಸರಕಾರಿ ಪದವಿ ಕಾಲೇಜು ಸ್ಥಳಾಂತರವಾಗಲಿದೆ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಅನುಮತಿ ದೊರೆತ ನಂತರ ನೀರಾವರಿ ನಿಗಮದ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ