ನಮ್ಮ ಪಾಲಿಗೆ ಯಾವ ಸರ್ಕಾರವೂ ಬದುಕಿಲ್ಲ!
•20 ವರ್ಷದ ಜೋಪಡಿ ವಾಸಕ್ಕೆ ಮುಕ್ತಿಯಿಲ್ಲ•ಸಮಸ್ಯೆ ಕೇಳಿದವರಿಂದ ಸ್ಪಂದನೆ ಇಲ್ಲ
Team Udayavani, Jul 15, 2019, 9:53 AM IST
ಬಾಗಲಕೋಟೆ: ನಮ್ಮ ಪಾಲಿಕೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಯಾರೂ ಬದುಕಿಲ್ಲ. ನಾವು ಬದುಕಿರುವ ಬಗ್ಗೆ ಅವರಿಗೆ ಗೊತ್ತೂ ಇಲ್ಲ. ಐದು ವರ್ಷಕ್ಕೊಮ್ಮೆ ಗೋಳು ಕೇಳುತ್ತಾರೆ. ಶೀಘ್ರ ಬಂದು ನಿಮಗೆ ಸೂರು ಕೊಡಿಸುವುದಾಗಿ ಹೇಳುತ್ತಾರೆ. ಮತ್ತೆ ಐದು ವರ್ಷದವರೆಗೆ ನಮ್ಮತ್ತ ಬರುವುದಿಲ್ಲ. ಹೀಗಾಗಿ ನಾವು ಅವರ ಪಾಲಿಗೆ ಮತ ಹಾಕಲು ಮಾತ್ರ ಬದುಕಿದ್ದೇವೆ. ನಮ್ಮ ಪಾಲಿಗೆ ಅವರು ಬದುಕಿಲ್ಲ…
ಹೌದು, ಹೀಗೆ ಆಕ್ರೋಶ, ಅಸಹನೆ, ಬೇಸರ ಹಾಗೂ ದುಃಖಭರಿತ ಮಾತು ಹೇಳುವವರು ನಗರದ ಹಳೆಯ ಎಪಿಎಂಸಿ ಹತ್ತಿರದ ಜಾಗೆಯಲ್ಲಿ 20 ವರ್ಷಗಳಿಂದ ಜೋಪಡಿಯಲ್ಲಿ ಬದುಕು ನಡೆಸುತ್ತಿರುವ ಸುಡಗಾಡ ಸಿದ್ಧರು.
ಬದುಕುವ ಹಕ್ಕಿದೆ: ಸುಡಗಾಡ ಸಿದ್ದರಿಗಾಗಿಯೇ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸಿದೆ. ಅಲೆಮಾರಿ ಹಾಗೂ ಸುಡಗಾಡ ಸಿದ್ಧರು ಎಂಬ ಹೆಸರಿನಲ್ಲಿ ಕರೆಸಿಕೊಳ್ಳಿವ ಇವರಿಗೆ ಸ್ವಂತ ಮನೆ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ನಿಯಮ ಜಾರಿಗಳಿಸಿದೆ. ಆದರೆ, ಬಾಗಲಕೋಟೆಯ ಈ ಸುಡಗಾಡ ಸಿದ್ಧರಿಗೆ ಸ್ವಂತ ಸೂರು ಸಿಕ್ಕಿಲ್ಲ. ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಕ್ಕಿಲ್ಲ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷ ಕಳೆದರೂ, ಭಾರತೀಯರಿಗೆ ಸಿಗಬೇಕಾದ ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದೇ ಅವರು ಬದುಕುತ್ತಿದ್ದಾರೆ.
ಸಂವಿಧಾನದ ಆಶಯದ ಪ್ರಕಾರ, ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಸ್ವಂತ ಸೂರು, ಕುಡಿಯಲು ಶುದ್ಧ ನೀರು, ಸಂಚರಿಸಲು ರಸ್ತೆ, ಜೀವಿಸಲು ಆಹಾರ ಕೊಡಲೇಬೇಕಾದ ಜವಾಬ್ದಾರಿ ಸರ್ಕಾರದ್ದು. ಇಂತಹ ಸಲಭ್ಯವಿಲ್ಲದ ಜನರನ್ನು ಗುರುತಿಸಿ, ಅವರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ, ಇಲ್ಲಿನ ಜನರಿಗೆ ಕಾನೂನು ಗೊತ್ತಿಲ್ಲ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯೂ ಇಲ್ಲ. ಇನ್ನು ಇವರ ಪಾಲಿಗೆ ಸಂವಿಧಾನದ ಆಶಯ ಈಡೇರಿಲ್ಲ ಎಂಬುದು ಸ್ವತಃ ಇವರಿಗೂ ಗೊತ್ತಿಲ್ಲ.
ನಾವು ಇದೇ ಜಾಗದಲ್ಲಿ 20 ವರ್ಷದಿಂದ ಇದ್ದೇವೆ. ಮಳೆ-ಗಾಳಿಗೆ ಜೋಪಡಿ ಹಾರಿದರೆ, ಪುನಃ ಅಲ್ಲೇ ಹೊಸ ಜೋಪಡಿ ಹಾಕಿಕೊಂಡು ಜೀವನ ನಡೆಸಿದ್ದೇವೆ. ಚುನಾವಣೆಗೊಮ್ಮೆ ಎಲ್ಲ ಪಕ್ಷದವರೂ ಬರುತ್ತಾರೆ. ಮನೆ ಕಟ್ಟಿಕೊಡುವ ಭರವಸೆ ಕೊಡುತ್ತಾರೆ. ಆ ಮೇಲೆ ಕೇಳಲು ಹೋದರೆ, ತಿಂಗಳು ಬಿಟ್ಟು ಬರಲು ಹೇಳುತ್ತಾರೆ. ನಾವು ಜೋಪಡಿಯಲ್ಲಿ ನಿತ್ಯ ಗೋಳಾಡುವುದು ಅಥವಾ ನಾವು ಬದುಕಿದ್ದೇವೆಂಬುದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗೊತ್ತಿದೆಯೋ ಇಲ್ಲೋ.•ವಿಶ್ವನಾಥ, ಈರಮ್ಮ ಹಾಗೂ ರಾಮಕ್ಕ, ಜೋಪಡಿ ನಿವಾಸಿಗಳು
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ