ಹೊರಗುತ್ತಿಗೆ ನೌಕರರಿಗೆ ದಿನಸಿ ನೀಡಿ
Team Udayavani, May 13, 2020, 10:48 AM IST
ಹುನಗುಂದ: ತಾಲೂಕಿನ ಬಿಸಿಎಂ ಮತ್ತುಎಸ್ಸಿ, ಎಸ್.ಟಿ ಹಾಸ್ಟೇಲ್ಗಳಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದಿನಸಿ ವಸ್ತುಗಳನ್ನು ವಿತರಿಸುವಂತೆ ಒತ್ತಾಯಿಸಿ ಪರಿಶ್ರಮ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ ಸುರೇಶ ಬಿಸನಾಳ ಮಾತನಾಡಿ, ಹೊರಗುತ್ತಿಗೆಯ ನೌಕರರಿಗೆ ಸಂಬಳವಿಲ್ಲದೇ ದಿನಸಿ ವಸ್ತುಗಳನ್ನು ಖರೀದಿಸಲು ಬಹುದೊಡ್ಡ ಸಮಸ್ಯೆಯಾಗಿದೆ. ವೇತನವಿಲ್ಲದೇ ಕುಟುಂಬ ನಿರ್ವಹಣೆ ಮಾಡಲು ತೊಂದರೆಯಾಗುತ್ತಿದ್ದು, ಸರ್ಕಾರ ಗಮನ ಹರಿಸಿ ವಸತಿ ನಿಲಯದಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುವರಿಗೆ ದಿನಸಿ ವಸ್ತುಗಳನ್ನು ವಿತರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಖಜಾಂಚಿ ಲಕ್ಷ್ಮಣ ಮಾದರ, ಮೊಹಮ್ಮದ್ ಮುಲ್ಲಾ, ಶರಣವ್ವ ಮರ್ಜಿ,ಬಸವ್ವ ತಳಗೇರಿ,ಮಹಬೂಬಿ ಮುರೋಳ,ದಾವಲಬಿ ಗಂಗಾವತಿ, ರೇಣುಕಾ ಬಂಡರಗಲ್ಲ, ಕಸ್ತೂರೆವ್ವ ಕ್ಯಾತನಗೌಡ್ರ ರಜಿಯಾಬೇಗಂ ಭಾವಿಕಟ್ಟಿ ಇದ್ದರು.