ಶಿಲ್ಪಿಗಳಿಂದ ಇತಿಹಾಸ ಚಿರಸ್ಥಾಯಿ
Team Udayavani, Oct 22, 2018, 5:03 PM IST
ಬೀಳಗಿ: ಶಿಲ್ಪಕ್ಕೆ ಉಳಿ ಪೆಟ್ಟು ನೀಡಿ ಸುಂದರ ಮೂರ್ತಿ ನಿರ್ಮಿಸುವ ಮೂಲಕ ಅದನ್ನು ಲೋಕ ವಿಖ್ಯಾತಗೊಳಿಸುವ ಶಿಲ್ಪಿಗಳು ಜಗದ ಇತಿಹಾಸ ಚಿರಸ್ಥಾಯಿಗೊಳಿಸಿದ್ದಾರೆ. ಕಲ್ಲಿನಲ್ಲಿ ದೈವತ್ವ, ರಾಕ್ಷಸತ್ವ, ಮನುಷ್ಯಲೋಕದ ಶೃಂಗಾರ ವೈವಿಧ್ಯ ಕೆತ್ತನೆ ಮೂಲಕ ಅರಳಿಸುವ ಶಿಲ್ಪಿಗಳು ಕಲೆಯ ಮೂಲಕ ಜೀವಂತಿಕೆ ಪಡೆದಿದ್ದಾರೆ ಎಂದು ಮಾಜಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಭಾ ಭವನದಲ್ಲಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಮತ್ತು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಅ. 21ರಿಂದ ನ.4ರವರೆಗೆ ನಡೆಯುವ ರಾಜ್ಯಮಟ್ಟದ ಶಿಲಾ ಶಿಲ್ಪ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸವಲ್ಲ. ಶಿಕ್ಷಣ ಉಜ್ವಲ ಬದುಕು ರೂಪಿಸಬೇಕು. ಸಾಂಸ್ಕೃತಿಕ ಲೋಕ ಪರಿಚಯಿಸುವ ಲಲಿತಕಲೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ, ಕುತೂಹಲವನ್ನುಂಟು ಮಾಡಬೇಕು. ಆ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯು ಇಂತಹ ಶಿಬಿರ ಆಯೋಜಿಸುವ ಮೂಲಕ ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಎಂ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಕ್ರಮವಲ್ಲ. ಅದೊಂದು ಸಾಂಸ್ಕೃತಿಕ ಜವಾಬ್ದಾರಿ. ಅಕ್ಷರದ ಜತೆಗೆ ನೈತಿಕ, ಮೌಲ್ಯಯುತವಾಗಿ, ಮನುಷ್ಯ ಲೋಕ ಕಟ್ಟುವುದೆಂದು ನಮ್ಮ ಸಂಸ್ಥೆ ಭಾವಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಕನ್ನಡಪರ ಸಂಘಟನೆಗಳ ಜತೆಗೂಡಿ ವಿದ್ಯಾಸಂಸ್ಥೆಯಲ್ಲಿ ಅನೇಕ ವಿಧಾಯಕ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಎಂದರು.
ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಮಲ್ಲೋಜ ಮಾಯಾಚಾರ್ಯ ಬಂಡೆಗೆ ಉಳಿ ಮುಟ್ಟಿಸುವ ಮೂಲಕ ಶಿಲಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಕೆ. ನದಾಫ್ ಪ್ರಾಸ್ತಾವಿಕ ಮಾತನಾಡಿದರು. ಬೀಳಗಿ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸತ್ಯಪ್ಪ ಮೇಲನಾಡ, ಶಿಲ್ಪಕಲಾ ಅಕಾಡೆಮಿ ಸದಸ್ಯ ಅಲ್ಲಿಸಾಬ್ ನದಾಫ್, ದೇವಿ ಪ್ರಸಾದ ಮಾಯಾಚಾರಿ, ಬಸವರಾಜ ಕಂಬಾರ, ಎ.ಕೆ. ಕಾರಜೋಳ, ನೂರಲಿ ತಹಶೀಲ್ದಾರ್, ಸಂತೋಷ ಜಂಬಗಿ, ಬಸವರಾಜ ಪಾಟೀಲ, ರಾಜು ಬೋರ್ಜಿ ಇದ್ದರು. ಗಂಗಾಧರ ಪಾಟೀಲ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್